ಡಿವೋರ್ಸ್​ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್​: ಕಾಂತಾರ ನಟನ ಓಪನ್​ ಮಾತು ಕೇಳಿ

ಡಿವೋರ್ಸ್​ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್​: ಕಾಂತಾರ ನಟನ ಓಪನ್​ ಮಾತು ಕೇಳಿ



ಡಿವೋರ್ಸ್​ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್​: ಕಾಂತಾರ ನಟನ ಓಪನ್​ ಮಾತು ಕೇಳಿ
‘ಕಾಂತಾರ’ ಖ್ಯಾತಿಯ ನಟ ಗುಲ್ಶನ್ ದೇವಯ್ಯಾ ಅವರು ತಮ್ಮ ಗ್ರೀಕ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಆದರೆ, ಬೇರ್ಪಟ್ಟ ಮೂರು ವರ್ಷಗಳ ನಂತರ, ತಮ್ಮ ಪ್ರೀತಿಯನ್ನು ಅರಿತುಕೊಂಡು ಮತ್ತೆ ಒಂದಾಗಿದ್ದಾರೆ. ಈ ಲೇಖನವು ಅವರ ಆಸಕ್ತಿದಾಯಕ ಪ್ರೇಮಕಥೆ ಮತ್ತು ಆರೋಗ್ಯದ ರಹಸ್ಯವನ್ನು ವಿವರಿಸುತ್ತದೆ.<img><p>ಯಾವುದೋ ಸಂದರ್ಭದಲ್ಲಿ, ಯಾವುದೋ ಕೆಟ್ಟ ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ದಂಪತಿಯ ನಡುವೆ ಬಿರುಕು ಬಿಟ್ಟು ಅದು ಡಿವೋರ್ಸ್​ವರೆಗೂ ಹೋಗಬಹುದು. ಅಂಥ ಸಂದರ್ಭದಲ್ಲಿ ಮಾಡಿದ್ದು ತಪ್ಪಾಗಿದೆ ಎಂದು ತಿಳಿದರೂ ಪುನಃ ಒಬ್ಬರ ಬಳಿ ಇನ್ನೊಬ್ಬರು ಹೋಗಲು ಇಗೋ ಅಡ್ಡ ಬರುತ್ತದೆ. ಆದರೆ ಅದನ್ನು ಮರೆತು ಮತ್ತೆ ಒಂದಾಗುವುದು ತುಂಬಾ ಅಪರೂಪ ಎಂದೇ ಹೇಳಬಹುದು. ಆದರೆ ಕಾಂತಾರಾ ಚಾಪ್ಟರ್​-1ಸಿನಿಮಾದ ಮೂಲಕ ಸಕತ್​ ಫೇಮಸ್​ ಆಗಿರೋ ಗುಲ್ಶನ್ ದೇವಯ್ಯಾ. ಈ ಚಿತ್ರದಲ್ಲಿ ಅವರು, ಕುಲಶೇಖರ ಪಾತ್ರವನ್ನು ನಿರ್ವಹಿಸಿದ್ದಾರೆ.</p><img><p>ಅಂದಹಾಗೆ ಗುಲ್ಶನ್​ ಅವರು ಬಾಲಿವುಡ್​ ನಟ. ಮೂಲ ಮಡಿಕೇರಿ. ಫ್ಯಾಷನ್, ಮಾಡಲಿಂಗ್ ನಂತರ ಬಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಈಗ ಕಾಂತಾರಕ್ಕೆ ಎಂಟ್ರಿ ಕೊಟ್ಟರು.</p><img><p>ಅಂದಹಾಗೆ ಗುಲ್ಶನ್​ ಅವರ ಲವ್​ ಸ್ಟೋರಿ ಕೂಡ ಚಿತ್ರದಂತೆಯೇ ಇದೆ. ಇವರು ಮದುವೆಯಾಗಿದ್ದ ವಿದೇಶಿ ಯುವತಿಯನ್ನು. ಅವರು ಗ್ರೀಸ್‌ನ ಪ್ರಜೆ. ಅವರ ಕಲಿರೊಯ್ ಜಿಯಫೆಟ್. ಅವರು ಭಾರತದ ಪ್ರವಾಸಕ್ಕೆ ಬಂದಾಗ, ಲವ್​ ಶುರುವಾಗಿತ್ತು. 2012ರಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದರು.</p><img><p>ಆದರೆ ಎಂಟು ವರ್ಷಗಳ ದಾಂಪತ್ಯದ ನಂತರ ದಂಪತಿ ನಡುವೆ ಬಿರುಕು ಉಂಟಾಗಿ ಡಿವೋರ್ಸ್ ಪಡೆದರು. ಅದು ಕೂಡ ಜೀವನಾಂಶ ಅದೂ ಇದೂ ಎನ್ನುವ ತಕರಾರು ಇಲ್ಲದೇ ಹಾಗೆಯೇ ವಿಚ್ಛೇದನವಾಗಿತ್ತು. ಆದರೆ, ಮದುವೆ ಸ್ವರ್ಗದಲ್ಲಿ ನಡೆದ ಮೇಲೆ ಭೂಮಿಯಲ್ಲಿ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುವ ಮಾತಿನಂತೆ ಮೂರು ವರ್ಷಗಳ ಬಳಿಕ 2023ರಲ್ಲಿ ಗುಲ್ಶನ್ ಮತ್ತು ಕಲ್ಲಿರಾಯ್​ಗೆ ತಾವು ಮಾಡಿದ್ದು ತಪ್ಪು ಎನ್ನಿಸಿದೆ. ಕ್ರಷ್​ ಶುರುವಾಗಿದೆ. ಈಗ ಮುಂಚೆಗಿಂತಲೂ ನಮ್ಮ ಪ್ರೀತಿ ಹೆಚ್ಚಾಗಿದೆ ಅಂತಾರೆ ಗುಲ್ಶನ್.</p><img><p>ಇವರೀಗ ಡಿವೋರ್ಸ್​ ಆದ್ಮೇಲೆ ಮತ್ತೆ ಆಕೆಯ ಜೊತೆಯೇ ಕ್ರಷ್​ ಆಗಿರುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಡುವೆ ಏನೋ ಡಿಫರೆನ್ಸ್​ ಆಯ್ತು. ಅದಕ್ಕೇ ಡಿವೋರ್ಸ್​ ತೆಗೆದುಕೊಂಡ್ವಿ. ಎಲ್ಲಾ ರಿಲೇಷನ್​ಷಿಪ್​ಗಳಲ್ಲಿಯೂ ಒಂದು ಆತ್ಮ ಎಂದು ಇರುತ್ತದೆ. ಅಲ್ಲಿ ನಾವು ಮಾಡಿರೋದು ತಪ್ಪು ಎಂದು ತಿಳಿಯುತ್ತದೆ. ಇಬ್ಬರ ನಡುವೆ ಪ್ರೀತಿ ಇದ್ದರೆ ರಿಲೇಷನ್​ಷಿಪ್​ ಮುಂದುವರೆಯುತ್ತದೆ. ಆ ಪ್ರೀತಿ ನಮ್ಮಲ್ಲಿ ಇತ್ತು ಎಂದು ತಿಳಿಯಿತು. ಅದಕ್ಕಾಗಿಯೇ ಮತ್ತೆ ಒಂದಾದ್ವಿ ಎಂದಿದ್ದಾರೆ.</p><img><p>ಇದೇ ವೇಳೆ ತಮ್ಮ ಹೆಲ್ತ್​ ಸೀಕ್ರೇಟ್​ ಕೂಡ ಬಿಚ್ಚಿಟ್ಟಿದ್ದಾರೆ ನಟ. ಒಂದೇ ಹೊತ್ತು ಊಟ. ಮಾಡುವ ಊಟವನ್ನು ಚೆನ್ನಾಗಿ ಅಗಿದರೆ, ಅದರಷ್ಟು ಆರೋಗ್ಯ ಮತ್ತೊಂದಿಲ್ಲ ಎನ್ನುತ್ತದೆ ಆಯುರ್ವೇದ.</p>



Source link

Leave a Reply

Your email address will not be published. Required fields are marked *