Headlines

Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ | Karna Kannada Serial Written Update Nidhi See Tejas In Front Of Icecream Parlour

Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ | Karna Kannada Serial Written Update Nidhi See Tejas In Front Of Icecream Parlour


15

ಐಸ್‌ಕ್ರೀಂ ಪಾರ್ಲರ್‌ನಲ್ಲಿ ಚರ್ಚೆ

Image Credit : zee5

ಐಸ್‌ಕ್ರೀಂ ಪಾರ್ಲರ್‌ನಲ್ಲಿ ಚರ್ಚೆ

ಮದುವೆ ಎನ್ನೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿಧಿ, ನಿತ್ಯಾ, ಕರ್ಣ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಯೋಚನೆ ಮಾಡುತ್ತಿದ್ದಾರೆ. ಹೇಗೆ ಸಂಜಯ್‌ ಪ್ಲ್ಯಾನ್‌ ಹಾಳು ಮಾಡೋದು ಎಂದು ಮತ್ತೊಂದು ಪ್ಲ್ಯಾನ್‌ ಮಾಡಿದ್ದಾರೆ. ಇದರಿಂದ ಕರ್ಣನ ಮೇಲೆ ಇನ್ನೊಂದಿಷ್ಟು ಆರೋಪ ಬರುವುದು.

25

ಸುಳ್ಳಿನ ಮದುವೆ

Image Credit : zee5

ಸುಳ್ಳಿನ ಮದುವೆ

ಪ್ರೀತಿಸಿ ಮದುವೆ ಆಗಬೇಕಿದ್ದ ತೇಜಸ್‌ ಓಡಿ ಹೋದನು. ನಿತ್ಯಾ ಹಾಗೂ ಕರ್ಣ ಸುಳ್ಳಿನ ಮದುವೆ ಆಗಿದ್ದರು. ನಿತ್ಯಾ ತನಗೆ ತಾನೇ ತಾಳಿ ಕಟ್ಟಿಕೊಂಡಳು. ಈ ವಿಷಯ ನಿಧಿಗೆ ಗೊತ್ತಾಗಿದೆ. ಉಳಿದಂತೆ ಯಾರಿಗೂ ಗೊತ್ತಿಲ್ಲ. ಈ ಸತ್ಯ ಹೊರಬಂದರೆ ಇನ್ನಷ್ಟು ಸಮಸ್ಯೆ ಆಗುವುದು.

35

ರಮೇಶ್‌ ಮಹಾ ಸಂಚು

Image Credit : zee5

ರಮೇಶ್‌ ಮಹಾ ಸಂಚು

ಇನ್ನೊಂದು ಕಡೆ ಇವರ ಖುಷಿಯನ್ನು ಹಾಳು ಮಾಡಲು ರಮೇಶ್‌ ಮಹಾ ಸಂಚು ಮಾಡಿದ್ದಾನೆ. ತೇಜಸ್‌ನನ್ನು ಮದುವೆ ಮನೆಯಿಂದ ಕಿಡ್ನ್ಯಾಪ್‌ ಮಾಡಿಸಿದ್ದ ರಮೇಶ್‌, ಅವನ ಬಳಿ ಸುಳ್ಳು ವಿಷಯಗಳನ್ನು ಹೇಳಿಸಿದ್ದನು. ತನ್ನನ್ನು ಕಿಡ್ನ್ಯಾಪ್‌ ಮಾಡಿರೋದು ಕರ್ಣ ಎಂದು ತೇಜಸ್‌ ನಂಬುವಂತೆ ಮಾಡಿದ್ದೇ ರಮೇಶ್.‌ ಈಗ ತೇಜಸ್‌ ಎಂಟ್ರಿ ಆದರೆ ಹೇಗಿರುತ್ತದೆ?

45

ತೇಜಸ್‌ ಎಂಟ್ರಿಯಾಗಿದೆ

Image Credit : zee5

ತೇಜಸ್‌ ಎಂಟ್ರಿಯಾಗಿದೆ

ಸದ್ಯ ವಾಹಿನಿಯು ಪ್ರಸಾರ ಮಾಡಿರುವ ಪ್ರೋಮೋದಲ್ಲಿ ತೇಜಸ್‌ ಎಂಟ್ರಿಯಾಗಿದೆ. ರಮೇಶ್‌ ಪ್ಲ್ಯಾನ್‌ ಮಾಡಿ ತೇಜಸ್‌ನನ್ನು ಎಸ್ಕೇಪ್‌ ಆಗುವಂತೆ ಮಾಡುತ್ತಾನೆ. ತೇಜಸ್‌ ಎಸ್ಕೇಪ್‌ ಆಗಿ ಹೊರಗಡೆ ಬರುತ್ತಾನೆ. ಅಲ್ಲಿ ಅವನನ್ನು ನಿಧಿ ನೋಡುತ್ತಾಳೆ. ಆಗ ತೇಜಸ್‌, ನಿಧಿ ಮಾತುಕತೆ ಆದಾಗ ಇದೆಲ್ಲ ಮಾಡಿಸಿದ್ದು ಕರ್ಣ ಎಂದರೆ ಏನು ಕತೆ?

55

ಸಮಸ್ಯೆ ಮತ್ತಷ್ಟು ಜಟಿಲ

Image Credit : zee5

ಸಮಸ್ಯೆ ಮತ್ತಷ್ಟು ಜಟಿಲ

ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದಾರೆ ಎಂದು ತೇಜಸ್‌ಗೆ ಗೊತ್ತಾಗಬಹುದು. ನಿತ್ಯಾ ಹೊಟ್ಟೆಯಲ್ಲಿರುವುದು ಕರ್ಣನ ಮಗು ಎಂದು ಅವನು ಅಂದುಕೊಳ್ಳಬಹುದು. ಒಟ್ಟಿನಲ್ಲಿ ಕರ್ಣನ ಮೇಲೆ ನಿತ್ಯಾ, ತೇಜಸ್‌, ನಿಧಿ ಸಿಟ್ಟಾದರೂ ಆಶ್ಚರ್ಯವಿಲ್ಲ. ತೇಜಸ್‌ ಸಿಕ್ಕಿದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಹೀಗೆ ಆಗೋದಿಲ್ಲ, ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *