Headlines

Karna Serial: ತೇಜಸ್‌ ಕಣ್ಣಿಗೆ ಬಿದ್ದಾಯ್ತು, ನಿತ್ಯಾಗೆ ಭೂಮಿ ಇಬ್ಭಾಗ ಆಗುವಂತ ಸುದ್ದಿ ಗೊತ್ತಾಯ್ತು

Karna Serial: ತೇಜಸ್‌ ಕಣ್ಣಿಗೆ ಬಿದ್ದಾಯ್ತು, ನಿತ್ಯಾಗೆ ಭೂಮಿ ಇಬ್ಭಾಗ ಆಗುವಂತ ಸುದ್ದಿ ಗೊತ್ತಾಯ್ತು



Karna Serial: ತೇಜಸ್‌ ಕಣ್ಣಿಗೆ ಬಿದ್ದಾಯ್ತು, ನಿತ್ಯಾಗೆ ಭೂಮಿ ಇಬ್ಭಾಗ ಆಗುವಂತ ಸುದ್ದಿ ಗೊತ್ತಾಯ್ತು
<p>Karna Serial Today Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ನಿಧಿ, ಕರ್ಣನ ಬದುಕು ತ್ರಿಶಂಕು ಸ್ವರ್ಗವಾಗಿದೆ. ಚಿಕ್ಕಮಗಳೂರಿನಲ್ಲಿ ಕರ್ಣ, ನಿತ್ಯಾ ಇಬ್ಬರೂ ಸೇರಿಕೊಂಡು ತೇಜಸ್‌ನನ್ನು ಹುಡುಕುತ್ತಿದ್ದಾರೆ. ಆ ವೇಳೆ ನಿತ್ಯಾಗೆ ಭೂಮಿಯೇ ಇಬ್ಭಾಗ ಆಗುವಂತಹ ನ್ಯೂಸ್‌ ಸಿಕ್ಕಿದೆ.</p><img><p>ಕರ್ಣ ಧಾರಾವಾಹಿಯಲ್ಲಿ ಚಿಕ್ಕಮಗಳೂರಿನಲ್ಲಿ ನಿತ್ಯಾ, ಕರ್ಣ ಇಬ್ಬರೂ ತೇಜಸ್‌ಗೋಸ್ಕರ ಬೀದಿ ಬೀದಿ ಅಲೆದಾಡುತ್ತಿದ್ದಾರೆ. ತೇಜಸ್‌ ಸಿಕ್ಕಿದರೆ ಸಾಕು ಅಂತ ನಿತ್ಯಾ ಹಾತೊರೆಯುತ್ತಿದ್ದಾಳೆ. ಹೀಗಿರುವಾಗ ಒಂದು ಟ್ವಿಸ್ಟ್‌ ಎದುರಾಗಿದೆ.</p><img><p>ಹೌದು, ಕರ್ಣನ ತಂದೆ ಕರೆಸಿಕೊಳ್ಳುವ ರಮೇಶ್‌, ಪ್ಲ್ಯಾನ್‌ ಮಾಡಿ ತೇಜಸ್‌ನನ್ನು ಕಿಡ್ನ್ಯಾಪ್‌ ಮಾಡಿದ್ದನು. ಇದರಿಂದಲೇ ತೇಜಸ್‌, ನಿತ್ಯಾ ಮದುವೆ ಮುರಿದು ಹೋಯ್ತು, ಕರ್ಣ, ನಿತ್ಯಾ ಮದುವೆ ಆಗಬೇಕು ಎನ್ನೋದಾಯ್ತು.</p><img><p>ಈಗ ಚಿಕ್ಕಮಗಳೂರಿನಲ್ಲಿ ನಿತ್ಯಾ, ಕರ್ಣ ಇಬ್ಬರೂ ತೇಜಸ್‌ ಹುಡುಕಾಟದಲ್ಲಿದ್ದಾರೆ. ಆಗ ನಿತ್ಯಾಗೆ ತೇಜಸ್‌ ಕಾರಿನಲ್ಲಿರೋದು ಗೊತ್ತಾಗಿದೆ. ಒಂದು ಮಹಿಳೆ ಪ್ಲ್ಯಾನ್‌ ಮಾಡಿ ತೇಜಸ್‌ನನ್ನು ಅಲ್ಲಿಂದ ಕಾರ್‌ನಲ್ಲಿ ಬೇರೆ ಕಡೆ ಕರೆದುಕೊಂಡು ಹೋಗಿದ್ದಾಳೆ. ಅದನ್ನು ನಿತ್ಯಾ ನೋಡಿದಳು.</p><img><p>ತೇಜಸ್‌ ಎಂದು ಅವಳು ಓಡಿದಳು. ಅದೇ ಟೈಮ್‌ಗೆ ಒಂದು ವಾಹನ ಕೂಡ ಅಲ್ಲಿಗೆ ಬಂತು. ಇನ್ನೇನು ಆ ವಾಹನ ನಿತ್ಯಾಗೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಕರ್ಣ ಕಾಪಾಡಿದ್ದಾನೆ. ಇನ್ನೇನು ಓಡಿಹೋಗಿ ಆ ಕಾರ್‌ ನಿಲ್ಲಿಸಬೇಕು ಎಂದು ನಿತ್ಯಾ ಅಂದುಕೊಂಡಿದ್ದಳು. ಆದರೆ ಕರ್ಣ ಅವಳನ್ನು ತಡೆದಿದ್ದನು.&nbsp;</p><img><p>“ನನ್ನ ಬಗ್ಗೆ ಕೇರ್‌ ಮಾಡೋದು ಬಿಡಿ, ನನ್ನ ಬಿಟ್ಟುಬಿಡಿ” ಎಂದು ನಿತ್ಯಾ ಕೂಗಿದ್ದಾಳೆ. ಆಗ ಕರ್ಣ, “ನನಗೆ ನಿಮ್ಮ ಬಗ್ಗೆ ಕೇರ್‌ ಇಲ್ಲ, ನಿಮ್ಮ ಹೊಟ್ಟೆಯೊಳಗಡೆ ಇರೋ ಮಗು ಬಗ್ಗೆ ಚಿಂತೆ” ಎಂದು ಹೇಳಿದ್ದಾನೆ.</p><img><p>ಪ್ರಗ್ನೆಂಟ್‌ ಅಂತ ಗೊತ್ತಾದಮೇಲೆ ನಿತ್ಯಾ ಹೇಗೆ ರಿಯಾಕ್ಟ್‌ ಮಾಡ್ತಾಳೋ ಏನೋ! ಇನ್ನೊಂದು ಕಡೆ ಮದುವೆ ಮುರಿದಿರೋದು, ಪ್ರೀತಿಸಿದ ಹುಡುಗ ದೂರ ಹೋಗಿರೋದು ನಿತ್ಯಾಗೆ ಬೇಸರ ತಂದಿದೆ. ಹಾಗಾದರೆ ಮುಂದೆ ಏನಾಗುವುದು?</p>



Source link

Leave a Reply

Your email address will not be published. Required fields are marked *