
<p>Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ತೇಜಸ್, ನಿತ್ಯಾಗೆ ಮದುವೆ ಆದರೆ ಎಲ್ಲವೂ ಸರಿ ಹೋಗುತ್ತದೆ. ನನ್ನ-ನಿಧಿ ಜೀವನ ಸೆಟಲ್ ಆಗುತ್ತದೆ ಎಂದು ಕರ್ಣ ಅಂದುಕೊಂಡಿದ್ದಾನೆ. ಈಗ ಇನ್ನೊಂದು ಸಮಸ್ಯೆ ಆಗುವ ಥರ ಕಾಣ್ತಿದೆ. ಹಾಗಾದರೆ ಮುಂದೆ ಏನಾಗುವುದು? </p><p> </p><img><p>ಹೌದು, ತೇಜಸ್ ಮನೆಗೆ ಬಂದಾಗಿದೆ, ತನ್ನನ್ನು ಯಾರು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನೋದು ಅವನಿಗೆ ಗೊತ್ತೇ ಆಗಿಲ್ಲ. ಇನ್ನೊಂದು ಕಡೆ ಈ ಕಿಡ್ನ್ಯಾಪ್ನಲ್ಲಿ ಅವನ ತಂದೆ-ತಾಯಿ ಕೂಡ ಶಾಮೀಲಾಗಿದ್ದರು. ಈಗ ತೇಜಸ್ ತಂದೆ-ತಾಯಿ ಏನು ಹೇಳಿದರು? ಅವನ ಮನೆಯಲ್ಲಿ ಏನಾಯ್ತು ಎಂದು ತೋರಿಸಿಯೇ ಇಲ್ಲ.</p><img><p>ಅಂದಹಾಗೆ ಅಜ್ಜಿಯಂದಿರಿಗೆ ನಿತ್ಯಾ ಆದಷ್ಟು ಬೇಗ ಮಗುವನ್ನು ಮಾಡಿಕೊಳ್ಳಬೇಕು ಎಂಬ ಆಸೆ. ಇದನ್ನೇ ಅವರು ನಿತ್ಯಾಗೆ ಹೇಳುತ್ತಿದ್ದಾರೆ. ನಿತ್ಯಾ-ಕರ್ಣ ಮದುವೆಯಾಗಿದೆ ಎಂದು ಅಜ್ಜಿಯಂದಿರು ಅಂದುಕೊಂಡಿದ್ದಾರೆ. ಮತ್ತೆ ನಿತ್ಯಾ ಬದುಕಿಗೆ ತೇಜಸ್ ಬರೋದು ಶಾಂತಿಗೂ ಕೂಡ ಇಷ್ಟ ಇಲ್ಲ.</p><img><p>ನಿತ್ಯಾ, ನಿಧಿ, ಕರ್ಣ ಮೂವರು ಮನೆಯಿಂದ ಹೊರಗಡೆ ಹೊರಟಿರೋದು ಸಂಜಯ್, ರಮೇಶ್, ನಯನತಾರಾಗೆ ಗೊತ್ತಾಗಿದೆ. ಇವರು ಮನೆಯಿಂದ ಹೊರಟು, ಏನ್ ಮಾಡೋಕೆ ಹೊರಟಿದ್ದಾರೆ ಎಂಬ ಯೋಚನೆ ಶುರುವಾಗಿದೆ, ಆದರೆ ಏನು ಮಾಡ್ತಾರೆ ಎಂಬ ತಲೆಬಿಸಿ ಶುರುವಾಗಿದೆ. ಆದರೆ ರಮೇಶ್ ಯೋಜನೆ ಬೇರೆ ಇದೆ.</p><img><p>ಕರ್ಣನ ಲೈಫ್ನಲ್ಲಿ ನಿತ್ಯಾ ಇರೋದು ಡೌಟ್ ಎಂದು ಸಂಜಯ್ಗೆ ಡೌಟ್ ಬಂದಿದೆ. ಇನ್ನೊಂದು ಕಡೆ ಸಂಜಯ್ ಮಾತು ಕೇಳಿ ರಮೇಶ್ ಕೂಡ ನಕ್ಕಿದ್ದಾನೆ. ರಮೇಶ್ ಇನ್ನೇನೋ ಪ್ಲ್ಯಾನ್ ಮಾಡಿದಂತಿದೆ. ಅಲ್ಲಿಗೆ ಕರ್ಣ ಹೇಳಿದಂತೆ ಎಲ್ಲವೂ ನಡೆಯೋದಿಲ್ಲ ಎಂದಾಯ್ತು.</p><img><p>ಕರ್ಣ ಹಾಗೂ ನಿಧಿ ಬದುಕಿಗೆ ಸಾಕಷ್ಟು ಕಷ್ಟ ಕೊಟ್ಟಿದ್ದು, ನೋವು ಕೊಡಲಾಗಿದೆ. ರಮೇಶ್ ಈಗ ಅವರಿಗೆ ಇನ್ನೊಂದು ಕಷ್ಟವನ್ನು ನೀಡಲು ರೆಡಿಯಾಗಿದ್ದಾನೆ. ಅವನು ಇನ್ನೊಂದು ಪ್ಲ್ಯಾನ್ ಮಾಡಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?</p><img><p>ಕರ್ಣ ಪಾತ್ರಧಾರಿಯಾಗಿ ಕಿರಣ್ ರಾಜ್, ನಿಧಿಯಾಗಿ ಭವ್ಯಾ ಗೌಡ, ನಿತ್ಯಾಳಾಗಿ ನಮ್ರತಾ ಗೌಡ ಅವರು ನಟಿಸುತ್ತಿದ್ದಾರೆ. </p>
Source link
Karna Serial: ಕರ್ಣನ ಖುಷಿಗೆ ಕೊಳ್ಳಿ ಇಡೋಕೆ ಸಜ್ಜಾದ ರಮೇಶ್; ಬರೀ ಇದೇ ಆಯ್ತಲ್ರೋ…!