ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡೋದು ಹೇಗೆ? Karna Serial ಈ ದೃಶ್ಯಕ್ಕೆ ಭಾರಿ ಆಕ್ರೋಶ

ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡೋದು ಹೇಗೆ? Karna Serial ಈ ದೃಶ್ಯಕ್ಕೆ ಭಾರಿ ಆಕ್ರೋಶ



ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡೋದು ಹೇಗೆ? Karna Serial ಈ ದೃಶ್ಯಕ್ಕೆ ಭಾರಿ ಆಕ್ರೋಶ
<p>‘ಕರ್ಣ’ &nbsp;ಸೀರಿಯಲ್​ ಖಳನಾಯಕಿ ನಯನತಾರಾ, ಕರ್ಣ ಮತ್ತು ನಿತ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ನಡೆಸಿರುವ ಕುತಂತ್ರದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂಥ ಕೆಟ್ಟ ಘಟನೆಗಳು ಸಮಾಜದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಚರ್ಚೆ ನಡೆಯುತ್ತಿದೆ.&nbsp;</p><img><p>ಇಂದು ಸೀರಿಯಲ್​ ಎಂದರೆ ಕೇವಲ ಸೀರಿಯಲ್​ ಆಗಿ ಉಳಿದಿಲ್ಲ. ಅಲ್ಲಿ ಕಥೆಯನ್ನು ಮುಂದುವರೆಸಲು, ನಾಯಕ-ನಾಯಕಿಯರನ್ನು ಸಮಸ್ಯೆಗೆ ಸಿಲುಕಿಸಲು ವಿಲನ್​ಗಳು ಕುತಂತ್ರ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇದೇ ಕುತಂತ್ರ, ಸೀರಿಯಲ್​, ಸಿನಿಮಾಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಹಲವು ವೀಕ್ಷಕರ ಮನಸ್ಸಿನ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವ ಬಗ್ಗೆ ಇದಾಗಲೇ ಸಾಕಷ್ಟು ಅಧ್ಯಯನಗಳಲ್ಲಿ ತಿಳಿದು ಬಂದಿದೆ.</p><img><p>ಇದೀಗ ಜನರು ಮೆಚ್ಚಿಕೊಂಡಿರುವ ಕೆಲವೇ ಕೆಲವು ಸೀರಿಯಲ್​​ಗಳ ಪೈಕಿ ಜೀ ಕನ್ನಡದ ಕರ್ಣ ಸೀರಿಯಲ್​ (Karna Serial) ಕೂಡ ಒಂದು. ಇದರಲ್ಲಿ ಕೂಡ ಹೀರೋ, ವಿಲನ್​​ ಎಲ್ಲರೂ ಇದ್ದಾರೆ. ಇದಾಗಲೇ ವಿಲನ್​ ರಮೇಶ್​ನಿಗೆ ತಿರುಗೇಟು ಕೊಟ್ತಿದ್ದಾನೆ ಕರ್ಣ.</p><img><p>ಅಷ್ಟಕ್ಕೂ ರಮೇಶ್​ ಇಲ್ಲಿಯವರೆಗೆ ಮಾಡಿರುವ ಕಿತಾಪತಿಗಳು ಒಂದೆರಡಲ್ಲ. ಆದರೆ ಅವು ಕೇವಲ ಕರ್ಣ, ನಿಧಿ ಮತ್ತು ನಿತ್ಯಾ ಮೇಲೆ ಪ್ರಭಾವ ಬೀರುತ್ತಿತ್ತೇ ವಿನಾ ಅದೊಂದು ರೀತಿಯಲ್ಲಿ ಸಮಾಜ ಘಾತುಕ ಎಂದು ಎನ್ನಿಸಿಕೊಂಡಿರಲಿಲ್ಲ.</p><img><p>ಆದರೆ ಇದೀಗ, ನಯನತಾರಾ ಮಾಡಿರುವ ಕಿತಾಪತಿ ಬಗ್ಗೆ ಇದೀಗ ಭಾರಿ ಚರ್ಚೆ ನಡೆಯುತ್ತಿದೆ. ಅದೇನೆಂದರೆ, ಕರ್ಣ ಮತ್ತು ಆಸ್ಪತ್ರೆಯಲ್ಲಿ ಡೈರೆಕ್ಟರ್​ ಆಗಿ ನೇಮಕಗೊಂಡಿರುವ ನಿತ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ನಯನತಾರಾ ಅಲ್ಲಿರುವ ಮಾತ್ರೆಗಳನ್ನು ಬದಲಿಸಿ, ಎಲ್ಲಾ ಡೇಟ್​ ಬಾರ್​ ಆಗಿರೋ ಮಾತ್ರೆ ಹಾಕಲು ಹೇಳಿದ್ದಾಳೆ. ಅದರಂತೆ ಎಲ್ಲಾ ನಡೆದಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಕಾಲ್​ ಮಾಡಿ ಹೇಳಿದ್ದಾನೆ.</p><img><p>ಇದು ಸೀರಿಯಲ್​ ಬಿಡಿ, ಇಲ್ಲಿ ಏನು ಬೇಕಾದರೂ ನಡೆಯತ್ತೆ ಎನ್ನುವ ಸ್ಥಿತಿ ಇದಲ್ಲ. ಏಕೆಂದರೆ, ಇಂಥ ಕೆಟ್ಟ ವಿಷಯಗಳು ವೀಕ್ಷಕರಿಗೆ ಬಹುಬೇಗನೇ ತಲೆಗೆ ಹೋಗಿ, ಅಲ್ಲಿ ಆಗುವುದು ಕೆಟ್ಟದ್ದೇ. ಅಷ್ಟಕ್ಕೂ ಸೀರಿಯಲ್​ನಲ್ಲಿ ಕೊನೆಗೆ ವಿಲನ್​ಗಳ ನಾಶವಾಗಿ, ನಾಯಕ-ನಾಯಕಿಗೇ ಜಯ ಆಗುವುದು ಇದ್ದೇ ಇದೆ. ಆದರೆ ನಿಜ ಜೀವನದಲ್ಲಿ ಹಾಗಲ್ಲವಲ್ಲ!</p><img><p>ಇಲ್ಲಿ ಎಕ್ಸ್​ಪೈರಿ ಆಗಿರುವ ಮಾತ್ರೆಗಳನ್ನು ಒಂದಿಷ್ಟು ರೋಗಿಗಳಿಗೆ ಕೊಡಲಾಗುತ್ತದೆ. ಅದು ಅವರ ಜೀವಕ್ಕೆ ಅಪಾಯವಾಗುತ್ತದೆ. ಕರ್ಣ, ನಿತ್ಯಾ ಮೇಲೆ ಒಂದಿಷ್ಟು ಕೇಸು ಬರುತ್ತದೆ ಅಥವಾ ಇವೆಲ್ಲಾ ಆಗುವ ಮೊದಲೇ ಕರ್ಣನಿಗೆ ವಿಷಯ ತಿಳಿಯಬಹುದು. ಸೀರಿಯಲ್​ನಲ್ಲಿ ಏನಾದರೂ ಆಗಬಹುದು. ಆದರೆ ಮಾತ್ರೆಗಳನ್ನು ಬದಲಿಸಿ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುವಂಥ ಪ್ಲ್ಯಾನ್​ ಹೇಳುವ ದೃಶ್ಯಗಳು ಬೇಕೇ, ಸೀರಿಯಲ್​ಗಳು ಇಂಥದ್ದನ್ನು ಕಲಿಸಬೇಕೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ವಿಲನ್ ರಮೇಶ್​, ಆಹಾರವನ್ನು ಕಸದ ಬುಟ್ಟಿಗೆ ಚೆಲ್ಲಿದಾಗಲೂ ಇಂಥ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಮಾತ್ರೆಗಳ ದೃಶ್ಯ ಜನರ ಜೀವದ ಜೊತೆ ಚೆಲ್ಲಾಟ ಆಡುವಂತಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.</p>



Source link

Leave a Reply

Your email address will not be published. Required fields are marked *