
ವಿಲನ್ಗಳ ಕುತಂತ್ರದಿಂದ ಕರ್ಣ ಜೈಲು ಸೇರಿದ್ದು, ಆತನ ಆಸ್ಪತ್ರೆ ಸೀಜ್ ಆಗಿದೆ. ಒಂದೆಡೆ ಕರ್ಣನನ್ನು ಉಳಿಸಲು ಬೇರೆ ಸೀರಿಯಲ್ಗಳ ನಾಯಕಿಯರು ಬರುತ್ತಿದ್ದರೆ, ಮತ್ತೊಂದೆಡೆ ಗರ್ಭಿಣಿ ನಿತ್ಯಾಳಿಗೆ ಇನ್ನೂ ಹೊಟ್ಟೆ ಬಂದಿಲ್ಲವೇಕೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.<img><p>ಕರ್ಣ ಸೀರಿಯಲ್ (Karna Serial)ನಲ್ಲಿ ರಮೇಶ್, ನಯನತಾರಾ, ಸಂಜಯ್ ಎಲ್ಲರ ಕುತಂತ್ರದಿಂದಾಗಿ ಕರ್ಣ ಜೈಲು ಸೇರಿದ್ದಾರೆ. ಆಸ್ಪತ್ರೆಯಲ್ಲಿ ಎಕ್ಸ್ಪೈರಿ ಡೇಟ್ ಇರೋ ಮಾತ್ರೆ ಇಟ್ಟು ಕುತಂತ್ರಿಗಳು ಹೀಗೆ ಮಾಡಿದ್ದಾರೆ.</p><img><p>ವಿಲನ್ಸ್ ಕೈ ಮೇಲಾಗಿದೆ. ಅದೇ ಇನ್ನೊಂದೆಡೆ, ಆಸ್ಪತ್ರೆಯ ಲೈಸೆನ್ಸ್ ಕಿತ್ತು ಹಾಕಲಾಗಿದ್ದು, ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ನಿತ್ಯಾ ಎಷ್ಟೇ ಬೇಡಿಕೊಂಡರೂ ಅಧಿಕಾರಿಗಳು ತಮಗೆ ಬಂದಿರುವ ಆದೇಶವನ್ನು ಪಾಲಿಸಿ ಹೋಗಿದ್ದಾರೆ.</p><img><p>ಇದೇ ಅವಕಾಶ ಎಂದುಕೊಂಡು ನಯನತಾರಾ, ನಿತ್ಯಾಳಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾಳೆ. ನೀನು ಆಸ್ಪತ್ರೆಗೆ ಬಂದ ಮೇಲೆ ಈ ಘಟನೆ ನಡೆದಿದೆ. ನೀನು ಬರದೇ ಇದ್ದರೆ ಹೀಗೆ ಆಗುತ್ತಿರಲಿಲ್ಲ ಎಂದಿದ್ದಾಳೆ. ಅಲ್ಲಿಗೆ ನಿತ್ಯಾ ಕುಸಿದು ಹೋಗಿದ್ದಾಳೆ.ಅತ್ತೆಯ ಮಾತು ಅವಳಿಗೆ ನೆನಪಿಗೆ ಬಂದಿದೆ. ಈ ಆಸ್ಪತ್ರೆಯ ಮೇಲೆ ಮನೆಯವರು ಇಟ್ಟಿರುವ ವಿಶ್ವಾಸ ನೆನಪಿಸಿಕೊಂಡು ಅವಳು ಕುಗ್ಗಿ ಹೋಗಿದ್ದಾಳೆ.</p><img><p>ಅತ್ತ ಕರ್ಣನ ಕಾಪಾಡಲು ವಿವಿಧ ಸೀರಿಯಲ್ಗಳ ನಟಿಯರು ಬಂದಿದ್ದಾರೆ. ಇದಾಗಲೇ ರೋಗಿಗಳ ಜೀವನದಲ್ಲಿ ಚೆಲ್ಲಾಟ ಆಡುವ ಟಿಪ್ಸ್ ಕೊಟ್ಟ ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ ಆಗುತ್ತಿದ್ದಾರೆ..</p><img><p>ಇದೀಗ ಈ ಪ್ರೊಮೋ ಬಿಡುಗಡೆಯಾಗುತ್ತಲೇ, ಗರ್ಭಿಣಿ ನಿತ್ಯಾಳಿಗೆ ಇನ್ನೂ ಯಾಕೆ ಹೊಟ್ಟೆ ಬಂದಿಲ್ಲ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಆಕೆಗೆ ಹೊಟ್ಟೆ ಬಂದಿದ್ದರೆ ಈ ಸಮಸ್ಯೆ ಆಗ್ತಿರಲಿಲ್ಲ. ಸುಮ್ಮನೇ ರೆಸ್ಟ್ ಮಾಡಿಕೊಂಡು ಮನೆಯಲ್ಲಿ ಇರುತ್ತಿದ್ದಳು. ಇದಾಗಲೇ ನಾಲ್ಕೈದು ತಿಂಗಳ ಗರ್ಭಿಣಿ ಆದ್ರೂ ಹೊಟ್ಟೆ ಮಾತ್ರ ಸ್ವಲ್ಪವೂ ಬರಲಿಲ್ಲ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.</p><img><p>ಒಟ್ಟಿನಲ್ಲಿ ಸೀರಿಯಲ್ ಸೀರಿಯಸ್ ಆಗಿ ಹೋಗುತ್ತಿದ್ದರೆ, ಇತ್ತ ನೆಟ್ಟಿಗರು ಮಾತ್ರ ತಮಾಷೆ ಮಾಡುತ್ತಿದ್ದಾರೆ. ಅದರಲ್ಲಿಯೂ ಕರ್ಣನ ಕಾಪಾಡಲು ಬೇರೆ ಬೇರೆ ಸೀರಿಯಲ್ಗಳ ನಾಯಕಿಯರು ಬಂದಿರುವ ಬಗ್ಗೆ ಇದಾಗಲೇ ಮೀಮ್ಸ್ಗಳು ಸುರಿಮಳೆಯೂ ಆಗುತ್ತಿದೆ.</p>
Source link
Karna Serial: ಆಸ್ಪತ್ರೆ ಸೀಜ್! ನಿತ್ಯಾಗೆ ಹೊಟ್ಟೆ ಬಂದಿದ್ರೆ ಹೀಗೆ ಆಗ್ತಿರಲಿಲ್ಲ ಎನ್ನೋದಾ ನೆಟ್ಟಿಗರು?