Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​

Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​



Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​
ಕರ್ಣ ಸೀರಿಯಲ್ ರೋಚಕ ಹಂತ ತಲುಪಿದ್ದು, ರಮೇಶನ ದುಷ್ಟತನವನ್ನು ಅರಿತ ಕರ್ಣ ಪ್ರತೀಕಾರಕ್ಕೆ ಇಳಿದಿದ್ದಾನೆ. ಪೂಜೆಯ ನೆಪದಲ್ಲಿ ರಮೇಶ್‌ಗೆ ಉಪವಾಸ ಮಾಡಿಸಿ, ಹಸಿವಿನಿಂದ ತಲೆತಿರುಗಿ ಪತ್ನಿಯ ಕಾಲಿಗೆ ಬೀಳುವಂತೆ ಮಾಡುವ ಮೂಲಕ ತನ್ನ ಆಟವನ್ನು ಶುರುಮಾಡಿದ್ದಾನೆ.<img><p>ಕರ್ಣ ಸೀರಿಯಲ್​ ಇದೀಗ ರೋಚಕ ಹಂತ ತಲುಪಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಕರ್ಣನ ಒಳ್ಳೆಯತನ ಅತಿಯಾಗಿ ಅದು ಅವನಿಗೇ ಮುಳುವಾಗಿತ್ತು. ಸಮಯ ಬಂದಾಗ ಒಳ್ಳೆಯದ್ದನ್ನು ಮಾಡುವುದಕ್ಕಾಗಿಯಾದರೂ ಸ್ವಲ್ಪ ಕೆಟ್ಟವರೂ ಆಗುವ ಅಗತ್ಯ ಇದೆ ಎಂದು ಕರ್ಣ ಸೀರಿಯಲ್​ ತೋರಿಸುತ್ತಿದೆ.</p><img><p>ರಮೇಶನ ದುರ್ಗಣ ಕರ್ಣನಿಗೆ ತಿಳಿಯುತ್ತಲೇ ಅವನು ಆಟ ಶುರುವಿಟ್ಟುಕೊಂಡಿದ್ದಾರೆ. ನಿಧಿ, ನಿತ್ಯಾ ಮತ್ತು ತನ್ನ ಬಾಳಿನಲ್ಲಿ ಮಾತ್ರವಲ್ಲದೇ ಅಮ್ಮನಿಗೂ ನೀಡ್ತಿರೋ ದೌರ್ಜನ್ಯದ ಬಗ್ಗೆ ಆತನಿಗೆ ತಿಳಿಯುತ್ತಲೇ ತಕ್ಕಶಾಸ್ತಿ ಮಾಡಲು ಶುರು ಮಾಡಿದ್ದಾನೆ.</p><img><p>ಇದೀಗ ಪೂಜೆಯ ನೆಪದಲ್ಲಿ ಪೂಜೆಗೆ ಕುಳಿತುಕೊಳ್ಳುವವರು ಉಪವಾಸ ಇರಬೇಕು ಎಂದಿದ್ದಾನೆ. ಮನೆಯವರ ಒಳ್ಳೆಯತನಕ್ಕಾಗಿ ತಾನು ಒಳ್ಳೆಯವನಂತೆ ಪೋಸ್​​ ಕೊಡುವುದು ರಮೇಶ್​ಗೆ ಅನಿವಾರ್ಯವಾಗಿದೆ.</p><img><p>ಉಪವಾಸ ಇರುವುದು ಎಂದರೆ ಸುಮ್ನೇನಾ? ರಮೇಶ್​ಗೆ ಬಾಯಾರಿಕೆ ಆಗಿದೆ. ಆದರೆ ಕರ್ಣ ಅವನ ಎದುರೇ ಎಲ್ಲರಿಗೂ ಜ್ಯೂಸ್​ ತಂದುಕೊಟ್ಟಿದ್ದಾನೆ. ಹೇಳಲು ಆಗದೇ, ಬಿಡಲೂ ಆಗದ ಸ್ಥಿತಿ ರಮೇಶ್​ದ್ದು.</p><img><p>ಆರತಿ ಮಾಡುವ ಸಮಯದಲ್ಲಿ ಹಸಿವೆಯಿಂದ ತಲೆತಿರುಗಿ ಬಿದ್ದ ರಮೇಶ್​, ಸೀದಾ ಪತ್ನಿಯ ಕಾಲ ಕೆಳಗೆ ಬಿದ್ದಿದ್ದಾನೆ. ಇಬ್ಬರೂ ಸೇರಿ ಆರತಿ ಮಾಡುತ್ತಿದ್ದರಿಂದ ಇದನ್ನು ಮೊದಲೇ ಊಹಿಸಿ ಕರ್ಣ ಪ್ಲ್ಯಾನ್​ ಮಾಡಿದ್ದ.</p><img><p>ಅವನು ಪತ್ನಿಯ ಕಾಲ ಕೆಳಗೆ ಬಿದ್ದದ್ದರಿಂದ ಕರ್ಣ, ಮನಸ್ಸಿನಲ್ಲಿಯೇ ತಕ್ಕ ಶಾಸ್ತಿಯಾಯ್ತು ಎಂದಿದ್ದಾನೆ. ಪತ್ನಿ ಸೇರಿದಂತೆ ಎಲ್ಲರೂ ಗಾಬರಿಯಾಗಿದ್ದಾರೆ. ಆಕೆ ಪತಿಯನ್ನು ಎತ್ತಲು ಹೋಗಿದ್ದಾಳೆ. ಅಲ್ಲಿಗೆ ಕರ್ಣ ಹೆಜ್ಜೆಹೆಜ್ಜೆಗೂ ಪ್ರತಿಕಾರ ತೆಗೆದುಕೊಳ್ಳುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *