
ಮಾಡದ ತಪ್ಪಿಗೆ ಕರ್ಣ ಜೈಲು ಸೇರಿದ್ದು, ಆತನ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಈ ವಿಷಯವನ್ನು ಪತ್ನಿ ನಿಧಿ ಜೈಲಿನಲ್ಲಿರುವ ಕರ್ಣನಿಗೆ ತಿಳಿಸಿದಾಗ ಆತ ಕುಸಿದು ಹೋಗುತ್ತಾನೆ. ಈ ಬೆಳವಣಿಗೆಯು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.<img><p>ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ತಾನು ಮಾಡದ ತಪ್ಪಿಗೆ ಕರ್ಣ ಜೈಲುಪಾಲಾಗಿದ್ದಾನೆ. ಡೇಟ್ ಬಾರ್ ಆಗಿರೋ ಮೆಡಿಸಿನ್ ಆಸ್ಪತ್ರೆಯಲ್ಲಿ ವಿಲನ್ಸ್ ತಂದಿಟ್ಟು ರೋಗಿಗಳ ಪ್ರಾಣಕ್ಕೆ ಕುತ್ತಾಗಿದ್ದರಿಂದ ಕರ್ಣನನ್ನು ಅರೆಸ್ಟ್ ಮಾಡಲಾಗಿದೆ.</p><img><p>ಅದೇ ಇನ್ನೊಂದೆಡೆ, ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಎಲ್ಲಾ ಪೇಷಂಟ್ಗಳನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಅಜ್ಜಿಯ ಆರೋಗ್ಯವೂ ಹಾಳಾಗಿ ಆಸ್ಪತ್ರೆ ಸೇರಿದ್ದಾಳೆ.</p><img><p>ಒಮ್ಮೆ ಅಜ್ಜಿಯನ್ನು ಮಾತನಾಡಿಸುವುದಾಗಿ ಕರ್ಣ ಪೊಲೀಸ್ ಬಳಿ ಕೇಳಿಕೊಂಡರೂ ಅದು ನಿಯಮದ ಉಲ್ಲಂಘನೆ ಆಗಿರುವ ಕಾರಣ ಫೋನ್ ಕೊಟ್ಟಿಲ್ಲ.</p><img><p>ಇದೀಗ, ನಿಧಿ ಕರ್ಣನನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾಳೆ. ಅಜ್ಜಿಯ ವಿಷಯವನ್ನು ಕರ್ಣ ಕೇಳಿದಾಗ, ಅವರು ಚೆನ್ನಾಗಿದ್ದಾರೆ ಎಂದು ಹೇಳಿದ್ದಾಳೆ ನಿಧಿ.</p><img><p>ಆದರೆ, ಇದೇ ವೇಳೆ ಆಸ್ಪತ್ರೆ ಸೀಜ್ ಆಗಿದ್ದು, ಪೇಷಂಟ್ಗಳನ್ನು ಬೇರೆ ಕಡೆ ಶಿಫ್ಟ್ ಮಾಡಿರೋ ವಿಷಯಗಳನ್ನೆಲ್ಲಾ ಕರ್ಣನಿಗೆ ಹೇಳಿದಾಗ ಆತ ಕುಸಿದು ಹೋಗಿದ್ದಾನೆ.</p><img><p>ಇದನ್ನು ನೋಡಿ ಸೀರಿಯಲ್ ಪ್ರೊಮೋ ವೀಕ್ಷಕರು ನಿಧಿಯ ಕ್ರಮಕ್ಕೆ ಗರಂ ಆಗಿದ್ದಾರೆ. ಇಂಥ ಸ್ಥಿತಿಯಲ್ಲಿ ಇದನ್ನೆಲ್ಲಾ ಕರ್ಣನಿಗೆ ನಿಧಿ ಯಾಕೆ ಹೇಳಬೇಕಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿಧಿ ಕರ್ಣನನ್ನು ಕಾಪಾಡ್ತಾಳಾ ನೋಡಬೇಕಿದೆ.</p>
Source link
Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್ ಪ್ರೇಮಿಗಳು ಗರಂ