
ಕರ್ಣ ಸೀರಿಯಲ್ನಲ್ಲಿ, ಕರ್ಣನ ಒಳ್ಳೆಯತನಕ್ಕೆ ನಿತ್ಯಾ ಮಾರುಹೋಗುತ್ತಿದ್ದಾಳೆ. ಅತ್ತ, ತಾನೂ ಕರ್ಣನನ್ನು ಪ್ರೀತಿಸುತ್ತಿದ್ದರೂ, ಅಕ್ಕನ ಖುಷಿಗಾಗಿ ನಿಧಿ ತ್ಯಾಗ ಮಾಡುತ್ತಿದ್ದಾಳೆ. ಅಕ್ಕನ ಮುಂದೆ ಕರ್ಣನನ್ನು ಹೊಗಳುವ ಮೂಲಕ ನಿಧಿ ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ.<img><p>ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಕರ್ಣ ಈಗ ಎರಡು ಅವತಾರ ಎತ್ತಿದ್ದಾರೆ. ಒಂದೆಡೆ ನಿತ್ಯಾ ಮತ್ತು ನಿಧಿಯನ್ನು ಕೇರ್ ಮಾಡುತ್ತಿದ್ದರೆ, ಇನ್ನೊಂದೆಡೆ ವಿಲನ್ ರಮೇಶ್ಗೆ ಉಲ್ಟಾ ಹೊಡೆಯುತ್ತಿದ್ದಾನೆ.</p><img><p>ಇದಾಗಲೇ ನಿತ್ಯಾ ಕರ್ಣನ ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾಳೆ. ಎಲ್ಲರನ್ನೂ ಎದುರು ಹಾಕಿಕೊಂಡು ನಿತ್ಯಾಳ ಕ್ಷೇಮಕ್ಕಾಗಿ, ಆಕೆಯ ಖುಷಿಗಾಗಿ ಈ ಹುದ್ದೆಯನ್ನು ಕರ್ಣ ನೀಡಿದ್ದಾನೆ.</p><img><p>ಇದಾಗಲೇ ಕರ್ಣನ ಒಳ್ಳೆಯತನದ ಬಗ್ಗೆ ನಿತ್ಯಾ ಮಾರು ಹೋಗಿದ್ದಾಳೆ. ಆತನಿಂದ ದೂರವಾಗಿ ತೇಜಸ್ ಬಳಿಗೆ ಹೋಗುವ ಕನಸು ಕಾಣ್ತಿದ್ದ ಅವಳಿಗೆ ಸದ್ಯದ ಮಟ್ಟಿಗೆ ಅದು ಮರೀಚಿಕೆ ಆಗಿದೆ. ಆದರೆ ಕರ್ಣನ ಮೇಲೆ ಒಲವು ಹೆಚ್ಚುತ್ತಿದೆ.</p><img><p>ನಿತ್ಯಾಳಿಗೆ ನಿಧಿ ಕರ್ಣನನ್ನು ಲವ್ ಮಾಡ್ತಿರೋ ವಿಷ್ಯ ಗೊತ್ತಿಲ್ಲ. ಆದರೆ, ಅಕ್ಕ ಖುಷಿಯಾಗಿ ಇರಲೆಂದು ನಿಧಿ ಕೂಡ ಈ ವಿಷಯವನ್ನು ಬಾಯಿ ಬಿಟ್ಟಿಲ್ಲ. ನಿತ್ಯಾಳಿಗಾಗಿ ಕರ್ಣ ಮಾಡುತ್ತಿರೋ ತ್ಯಾಗವನ್ನು ನೋಡಿ ನಿಧಿ ಕೂಡ ಖುಷಿ ಪಟ್ಟುಕೊಳ್ಳುತ್ತಿದ್ದಾಳೆ.</p><img><p>ಇದೀಗ ಕರ್ಣ ತನಗಾಗಿ ಮಾಡ್ತಿರೋ ಸಹಾಯಕ್ಕೆ ನಿತ್ಯಾ ಫುಲ್ ಫಿದಾ ಆಗಿದ್ದಾಳೆ. ಅದಕ್ಕೆ ಇಂಬುಕೊಡಲು ಎಂಬಂತೆ, ನಿಧಿ ಅಕ್ಕನ ಎದುರೇ ಕರ್ಣನನ್ನು ಹಾಡಿ ಹಾಡಿ ಹೊಗಳುತ್ತಿದ್ದಾಳೆ. ಇಷ್ಟೊಂದು ಕರ್ಣನನ್ನು ಹೊಗಳಿದರೆ, ಖಂಡಿತವಾಗಿಯೂ ನಿತ್ಯಾಳ ಮನದಲ್ಲಿ ಕರ್ಣನ ಮೇಲೆ ಪ್ರೀತಿ ಮೂಡದೇ ಇರಲಾರದು.</p><img><p>ಅದಕ್ಕಾಗಿ, ನಿಧಿ ತನ್ನ ಹಳ್ಳವನ್ನು ತಾನೇ ತೋಡಿಕೊಳ್ತಾ ಇದ್ದಾಳಾ ಎಂದು ಸೀರಿಯಲ್ ಪ್ರೇಮಿಗಳಿಗೆ ಆತಂಕ ಉಂಟಾಗಿದೆ. ಇಷ್ಟೊಂದು ಹೊಗಳಿಬಿಟ್ಟರೆ ನಿತ್ಯಾಳಿಗೆ ಕರ್ಣನ ಮೇಲೆ ಗ್ಯಾರೆಂಟ್ ಲವ್ ಆಗತ್ತೆ. ಆಗ ನಿನ್ನ ಕಥೆ ಅಷ್ಟೇ ಎನ್ನುತ್ತಿದ್ದಾರೆ.</p>
Source link
Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?