
‘ಕರ್ಣ’ ಧಾರಾವಾಹಿಯಲ್ಲಿ, ನಿಧಿ ಮತ್ತು ಕರ್ಣ ತಮ್ಮ ಪ್ರೀತಿಯನ್ನು ನಿಧಿಯ ಅಕ್ಕ ನಿತ್ಯಾಳಿಂದ ಮುಚ್ಚಿಟ್ಟಿದ್ದಾರೆ. ಆದರೆ, ಕರ್ಣನ ಕಾಳಜಿಯಿಂದಾಗಿ ನಿತ್ಯಾಳಿಗೆ ತಿಳಿಯದಂತೆಯೇ ಅವನ ಮೇಲೆ ಪ್ರೀತಿ ಮೂಡುತ್ತಿದ್ದು, ಇದು ಅಕ್ಕ-ತಂಗಿಯರ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸೂಚನೆ ನೀಡಿದೆ.<img><p>ಕರ್ಣ ಸೀರಿಯಲ್ (Karna Serial)ನಲ್ಲಿ ಇದುವರೆಗೂ ನಿಧಿ ಮತ್ತು ಕರ್ಣನ ಲವ್ಸ್ಟೋರಿ ನಿತ್ಯಾಗೆ ಗೊತ್ತೇ ಆಗಲಿಲ್ಲ. ನಿಧಿಯ ಲೈಫ್ ಒಂದು ಹಂತಕ್ಕೆ ಬಂದ ಮೇಲೆ ಈ ವಿಷ್ಯವನ್ನು ರಟ್ಟು ಮಾಡೋಣ ಎಂದು ಕರ್ಣ ಮತ್ತು ನಿಧಿ ಇದ್ದಾರೆ.</p><img><p>ಆದರೆ ಅದರ ನಡುವೆಯೇ, ಕರ್ಣ ತೋರುವ ಕಾಳಜಿಗೆ ಇದಾಗಲೇ ನಿತ್ಯಾಳಿಗೆ ಕರ್ಣನ ಮೇಲೆ ಅರಿವೇ ಇಲ್ಲದಂತೆ ಲವ್ ಶುರುವಾಗಿದೆ. ಅಷ್ಟಕ್ಕೂ ಅವಳಿಗೆ ಕರ್ಣ ತನ್ನ ತಂಗಿಯನ್ನೇ ಪ್ರೀತಿಸ್ತಾ ಇರೋ ವಿಷ್ಯ ಗೊತ್ತೇ ಇಲ್ವಲ್ಲಾ.</p><img><p>ಇದೀಗ ಮೊದಲ ಬಾರಿಗೆ ಬೇಗ ಎದ್ದು ಕರ್ಣನಿಗಾಗಿ ಕಾಫಿ ಮಾಡಿಕೊಂಡು ಬಂದಿದ್ದಾಳೆ. ಹೇಗಿದೆ ಕಾಫಿ ಎಂದು ಕೇಳಿದ್ದಾಳೆ. ಕರ್ಣ ಸುಮ್ಮನಾದಾಗ, ಕಾಫಿ ಚೆನ್ನಾಗಿಲ್ಲ ಎಂದು ತಿಳಿದು ನಿಧಿ ಬೇಸರಪಟ್ಟುಕೊಂಡಿದ್ದಾಳೆ.</p><img><p>ಕೊನೆಗೆ, ಕರ್ಣ ಸೂಪರ್ ಆಗಿದೆ. ಮೊದಲ ಬಾರಿಗೆ ಇಷ್ಟು ಚೆನ್ನಾಗಿ ಕಾಫಿ ಮಾಡಿದ್ದೀರಾ ಎಂದಾಗ ಕರ್ಣನ ಪ್ರೀತಿಯ ಮಾತು ಕೇಳಿ ನೀರಾಗಿ ಹೋಗಿದ್ದಾಳೆ ನಿತ್ಯಾ.</p><img><p>ಕರ್ಣ ತನಗೆ ಬೇರೆ ಕೆಲಸ ಇದೆ ಎಂದು ಹೊರಟಾಗ ಆತ ಹೊರಟ ದಾರಿಯನ್ನೇ ನೋಡುತ್ತಾ ನಿಂತಿದ್ದಾಳೆ ನಿತ್ಯಾ. ಅವಳಿಗೆ ಅರಿವೇ ಇಲ್ಲದೇ ಕರ್ಣನ ಮೇಲೆ ಲವ್ ಶುರುವಾದಂತಿದೆ. ಕರ್ಣ ತೋರಿಸ್ತಿರೋ ಪ್ರೀತಿಗೆ ಆಕೆ ಕರಗಿ ಹೋಗಿದ್ದಾಳೆ.</p><img><p>ಇನ್ನು ಹೀಗಾದರೆ ನಿಧಿಯ ಕಥೆ ಗೋವಿಂದ. ಹೀಗೆ ಆಗೋದು ಬೇಡ. ಯಾವತ್ತೂ ಕರ್ಣ ಮತ್ತು ನಿಧಿ ಒಂದಾಗಬೇಕು. ಕಥೆ ದಾರಿ ತಪ್ಪಬಾರದು ಎಂದು ಕಮೆಂಟ್ಗಳಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.</p>
Source link
Karna Serial: ಕರ್ಣನ ನೋಡಿ ನಿತ್ಯಾ ಹಾರ್ಟ್ಬೀಟ್ ಜೋರಾಯ್ತು: ಮನಸ್ಸು ತಾಳತಪ್ಪೋಯ್ತು! ನಿಧಿ ಕಥೆ?