
ವೀಕ್ಷಕರ ಆಸೆಯಂತೆ, ಕರ್ಣ ತನ್ನ ಒಳ್ಳೆಯತನದಿಂದಲೇ ಕುತಂತ್ರಿ ರಮೇಶ್ಗೆ ತಿರುಗೇಟು ನೀಡುತ್ತಿದ್ದಾನೆ. ರಮೇಶನ ಕಿತಾಪತಿಗಳನ್ನು ಅರಿತ ಕರ್ಣ, ಮನೆಯ ಕೆಲಸಗಳನ್ನೆಲ್ಲಾ ಅವನಿಗೇ ನೀಡಿ, ಅವನಿಗೆ ಸ್ವಲ್ಪವೂ ಬಿಡುವು ಕೊಡದೆ ಸುಸ್ತು ಮಾಡಿಸುತ್ತಿದ್ದಾನೆ. ಕರ್ಣನ ಈ ಬದಲಾವಣೆ ಮನೆಯವರಿಗೆ ಅಚ್ಚರಿ ಮೂಡಿಸಿದೆ.<img><p>ಕರ್ಣ ಸ್ವಲ್ಪ ನಿನ್ನ ಈ ಅತಿಯಾದ ಒಳ್ಳೆತನ ಬಿಟ್ಟುಬಿಡಪ್ಪಾ ಎಂದು ಗೋಗರೆದ ವೀಕ್ಷಕರು ಅದೆಷ್ಟೋ ಮಂದಿ. ಅಂತೂ ಕೊನೆಗೆ ವೀಕ್ಷಕರ ಕನಸು ನನಸಾಗೋಯ್ತು! ಇದೀಗ ಕರ್ಣ ಪಾರ್ಟ್-2 ಶುರುವಾಗಿದೆ. ಅದೇ ಒಳ್ಳೆಯತನದಿಂದಲೇ ರಮೇಶ್ಗೆ ಏಟು ಕೊಡ್ತಿರೋ ಕರ್ಣನನ್ನು ನೋಡೋದೇ ಸಕತ್ ಮಜ ಕೊಡ್ತಿದೆ ವೀಕ್ಷಕರಿಗೆ.</p><img><p>ಅಷ್ಟಕ್ಕೂ ರಮೇಶ್ನ ಕುತಂತ್ರ ಕರ್ಣನಿಗೆ ತಿಳಿದೇ ಇರಲಿಲ್ಲ. ಆದರೆ ನಿಧಿಯ ಜೊತೆ ಲವ್ ಮಾಡ್ತಿರೋ ಗೊತ್ತಿದ್ದರೂ, ನಿತ್ಯಾ ಜೊತೆ ಮದುವೆಯಾಗುವಂತೆ ಮಾಡಿ, ಮೂವರ ಕನಸುಗಳನ್ನು ನುಚ್ಚುನೂರು ಮಾಡಿ, ಇನ್ನಿಲ್ಲದ ಕಿತಾಪತಿ ಮಾಡ್ತಿರೋ ರಮೇಶನ ಬಗ್ಗೆ ಇದೀಗ ಕರ್ಣನಿಗೆ ತಿಳಿದಿದೆ.</p><img><p>ಮನೆಯಲ್ಲಿ ಎಲ್ಲಾ ಹೆಂಗಸರಿಗೂ ತಾವು ಅಡುಗೆ ಮಾಡಿ ಬಡಿಸುವ ಟಾರ್ಗೆಟ್ ಕೊಟ್ಟಿರೋ ಕರ್ಣ, ರಮೇಶನನ್ನು ಸುಸ್ತು ಮಾಡಿಸುತ್ತಿದ್ದಾನೆ. ಅವನಿಗೆ ಕುತಂತ್ರ ಮಾಡಲು ಒಂದಿಂಚೂ ಅವಕಾಶ ನೀಡದಂತೆ, ಆ ಬಗ್ಗೆ ಒಂದು ಕ್ಷಣ ಯೋಚಿಸುವುದಕ್ಕೂ ಬಿಡದೇ ಮನೆಯ ಕೆಲಸವನ್ನೆಲ್ಲಾ ಮಾಡಿಸುತ್ತಿದ್ದಾನೆ.</p><img><p>ಆತನಿಗೊಬ್ಬನಿಗೆ ಎಲ್ಲಾ ಮಾಡಿಸಿದರೆ ಗುಟ್ಟು ತಿಳಿಯುತ್ತದೆ ಎನ್ನುವ ಕಾರಣಕ್ಕೆ, ಆತನ ಜೊತೆ ತಾನೂ ಸೇರಿದಂತೆ ಮನೆಯ ಎಲ್ಲಾ ಗಂಡಸರನ್ನೂ ಕೆಲಸಕ್ಕೆ ಕರೆಸಿಕೊಂಡಿದ್ದಾನೆ. ಮನೆಯ ಹೆಂಗಸರಿಗೆ ಫುಲ್ ರೆಸ್ಟ್ ಕೊಟ್ಟಿದ್ದಾನೆ. ಕರ್ಣನಲ್ಲಿ ಆಗ್ತಿರೋ ಈ ಬದಲಾವಣೆ ಕಂಡು ಮನೆಯ ಹೆಂಗಸರೂ ಶಾಕ್ ಆಗೋಗಿದ್ದಾರೆ.</p><img><p>ರಮೇಶ ಮದುವೆಯಾದಾಗಿನಿಂದಲೂ ಪತ್ನಿಗೆ ಕಿರುಕುಳ ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಇಲ್ಲ. ಆದರೆ ಅದಕ್ಕೆ ಈಗ ಅವಕಾಶವೇ ಇಲ್ಲ. ಅಮ್ಮನಿಗೆ ಕೈತುತ್ತು ತಿನ್ನಿಸುವಂತೆ ಕರ್ಣ ಹೇಳಿದ್ದು, ರಮೇಶನೂ ತತ್ತರಿಸಿ ಹೋಗಿದ್ರೆ ಎಲ್ಲರಿಗೂ ಶಾಕ್ ಆಗಿದೆ.</p><img><p>ಅಷ್ಟೇ ಅಲ್ಲದೇ ರಮೇಶ್ನಿಗೆ ಸ್ವಲ್ಪ ಹೊತ್ತು ಮಲಗಲೂ ಬಿಡದೇ ಅವನು ಹೇಳಿದ್ದ ಮಗನಿಗಾಗಿ ಏನು ಬೇಕಾದ್ರೂ ಮಾಡ್ತೇನೆ ಎನ್ನುವ ಡೈಲಾಗ್ ಅನ್ನೇ ಅವನಿಗೆ ತಿರುಗಿಸಿ ಎಲ್ಲಾ ಕೆಲಸ ಮಾಡಿಸಿಕೊಳ್ತಿರೋದನ್ನು ನೋಡಿ ವೀಕ್ಷಕರಿಗೆ ಹಬ್ಬವೋ ಹಬ್ಬ ಆಗಿದೆ.</p>
Source link
Karna Serial ವೀಕ್ಷಕರ ಕನಸು ನನಸಾಗೋಯ್ತು! ರಮೇಶ ಕುಂತ್ರೂ ತಪ್ಪು, ನಿಂತ್ರೂ ತಪ್ಪು: ಭಲೆ ಭಲೆ ಕರ್ಣ