
ರಮೇಶ್ನ ಕುತಂತ್ರದಿಂದ ‘ಕರ್ಣ’ ಧಾರಾವಾಹಿಯ ನಾಯಕ ಕರ್ಣ ಜೈಲು ಸೇರಿದ್ದಾನೆ. ಆದರೆ ಅದಕ್ಕೂ ಮುನ್ನ, ನಿತ್ಯಾ ತನ್ನ ಕೈಯಾರೆ ಮಾಡಿದ ಮೊದಲ ಕಾಫಿಯನ್ನು ಕರ್ಣ ಮನಸಾರೆ ಹೊಗಳಿದ್ದ. ಆ ರುಚಿಕರ ಕಾಫಿಯ ಹಿಂದಿದ್ದ, ಕೆಲಸದವಳು ಹೇಳಿಕೊಟ್ಟ ಸರಳ ತಂತ್ರವನ್ನು ಇಲ್ಲಿ ಬಹಿರಂಗಪಡಿಸಲಾಗಿದೆ.<img><p>ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ರಮೇಶ್ನ ಕುತಂತ್ರಕ್ಕೆ ಕರ್ಣ ಜೈಲುಪಾಲಾಗಿದ್ದಾನೆ. ಡೇಟ್ ಬಾರ್ ಆಗಿರೋ ಮೆಡಿಸಿನ್ ಕೊಟ್ಟ ಕಾರಣ, ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕರ್ಣ ಬಲಿಪಶುವಾಗಿದ್ದಾನೆ.</p><img><p>ಆದರೆ, ಇದಕ್ಕೂ ಮುನ್ನ ನಿತ್ಯಾ ತನ್ನ ಕೈಯಾರೇ ಕರ್ಣನಿಂದ ಕಾಫಿ ಮಾಡಿಕೊಟ್ಟಿದ್ದಳು. ಇದು ಅವಳ ಜೀವನದಲ್ಲಿ ಮಾಡಿರೋ ಮೊದಲ ಕಾಫಿಯಾಗಿತ್ತು. ಇದನ್ನು ಕುಡಿದು ಕರ್ಣ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ.</p><img><p>ಕರ್ಣ ಏನಂದುಕೊಳ್ಳುತ್ತಾನೋ ಎಂದುಕೊಂಡಿದ್ದ ನಿತ್ಯಾಳಿಗೆ ಅವಳು ಮೊದಲ ಬಾರಿಗೆ ಮಾಡಿದ ಕಾಫಿಯನ್ನು ಕರ್ಣ ಹೊಗಳಿದ್ದನ್ನು ನೋಡಿ ಎಲ್ಲೋ ಕಳೆದುಹೋದಳು ನಿತ್ಯಾ.</p><img><p>ಹಾಗಿದ್ದರೆ ನಿತ್ಯಾ ಕಾಫಿ ಮಾಡುವಾಗ ಏನು ಮಾಡಿದ್ಲು? ಮೊದಲ ಸಲವೇ ಇಷ್ಟೊಂದು ಟೇಸ್ಟಿಯಾಗಿ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಜೀ ವಾಹಿನಿಯೇ ಕಾಫಿ ಟ್ರಿಕ್ಸ್ ಹೇಳಿಕೊಟ್ಟಿರೋ ಪ್ರೊಮೋ ಶೇರ್ ಮಾಡಿಕೊಂಡಿದೆ.</p><img><p>ನಿತ್ಯಾಳಿಗೆ ಕಾಫಿ ಮಾಡಲು ಬರದೇ ಇರುವ ಕಾರಣದಿಂದ ಮನೆಯ ಕೆಲಸದಾಕೆ ಹೇಳಿಕೊಟ್ಟಿರುವ ಸಿಂಪಲ್ ಟ್ರಿಕ್ಸ್ ಇದಾಗಿದೆ.</p><img><p>ಮೊದಲು ಹಾಲು ಫುಲ್ ಬಿಸಿ ಇರುವಾಗಲೇ ಡಿಕಾಕ್ಷನ್ ಹಾಕಬೇಕು. ಆಮೇಲೆ ಕಾಫಿಯನ್ನು ಎತ್ತಿ ಎತ್ತಿ ಲೋಟದಿಂದ ಲೋಟಕ್ಕೆ ಬದಲಾಯಿಸಬೇಕು. ಹೀಗೆ ಎತ್ತಿ ಹಾಕಿದಾಗ ನೊರೆ ಬರತ್ತೆ. ಆಗಲೇ ಕಾಫಿ ತುಂಬಾ ಟೇಸ್ಟಿಯಾಗಿರೋದು ಎನ್ನುವ ಟಿಪ್ಸ್ ಹೇಳಿದ್ದಾಳೆ.</p>
Source link
'ಘಂ' ಎನ್ನೋ ಟೇಸ್ಟಿ ಟೇಸ್ಟಿ ಕಾಫಿ ಮಾಡೋ ಸಿಂಪಲ್ ಟ್ರಿಕ್ಸ್ ಹೇಳಿದ Karna Serial- ನಿತ್ಯಾ ಕೈಯಿಂದ ರೆಡಿ!