Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ

Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ



Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ
ರಮೇಶ್ ಕುತಂತ್ರದಿಂದಾಗಿ ನಿತ್ಯಾಳು ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸುವ ನಾಟಕವಾಡುತ್ತಾಳೆ. ನಂತರ, ನಿಜವಾಗಿಯೂ ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಹೋದ ನಿಧಿಯು, ಅವನೊಂದಿಗೆ ರೊಮ್ಯಾನ್ಸ್ ಮಾಡುವಾಗ ನಿತ್ಯಾಳ ಕೈಗೆ ಸಿಕ್ಕಿಬೀಳುತ್ತಾಳೆ.<img><p>ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಕರ್ಣ ಮತ್ತು ನಿಧಿಯನ್ನು ದೂರ ದೂರ ಮಾಡಲು ರಮೇಶ್​ ಸಾಕಷ್ಟು ಪ್ರಯತ್ನ ಪಟ್ಟು ಒಂದು ಹಂತಕ್ಕೆ ಯಶಸ್ವಿಯನ್ನೂ ಆಗಿದ್ದಾರೆ. ಇದರ ಹೊರತಾಗಿಯೂ ಅವನಿಗೆ ಇನ್ನಷ್ಟು ಹಿಂಸೆ ನೀಡಬೇಕು ಎನ್ನುವ ಆಸೆ.</p><img><p>ಇದೇ ಕಾರಣಕ್ಕೆ ನಿಧಿಯ ಎದುರು ನಿತ್ಯಾಳಿಗೆ, ಯುಗಾದಿ ಹಬ್ಬದ ಸಂಪ್ರದಾಯ ಮುರಿಯಬಾರದು. ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸು ಎಂದಿದ್ದಾನೆ ರಮೇಶ. ನಿತ್ಯಾ ಬೇಡ ಎಂದರೂ ಕೇಳದೇ ನಿಧಿಗೆ ಹೊಟ್ಟೆ ಉರಿ ಆಗಲಿ ಎಂದು ಹೀಗೆ ಮಾಡಿಸಿದ್ದಾನೆ.</p><img><p>ಅತ್ತ ಬಾತ್​ರೂಮ್​ಗೆ ಹೋದ ನಿತ್ಯಾ, ಕರ್ಣನಿಗೆ ಸನ್ನೆ ಮಾಡುವ ಮೂಲಕ ಸುಮ್ಮನೇ ಇರುವಂತೆ ಹೇಳಿ, ಎಣ್ಣೆ ಹಚ್ಚಿ ಸ್ನಾನ ಮಾಡಿಸೋ ರೀತಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದನ್ನು ಅರೆ ಕ್ಷಣ ನಿಧಿ ಕೂಡ ನಿಜ ಎಂದು ನಂಬಿದ್ದಾಳೆ.</p><img><p>ಕೊನೆಗೆ ಕರ್ಣನ ಸತ್ಯ ನಿಧಿಗೆ ಗೊತ್ತಾಗಿದೆ. ನಿತ್ಯಾ ಹೊರಕ್ಕೆ ಬರುತ್ತಲೇ ತಾನು ಹೋಗಿ ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಮುಂದಾಗಿದ್ದಾಳೆ.</p><img><p>ಅಲ್ಲಿಗೆ ನಿತ್ಯಾ ಬಂದು ಬಿಟ್ಟಿದ್ದಾಳೆ. ಕರ್ಣ ಮತ್ತು ನಿಧಿ ರೊಮಾನ್ಸ್​ ಮಾಡಲು ಹತ್ತಿರ ಬರುತ್ತಿರುವುದನ್ನು ಅವಳು ನೋಡಿದ್ದಾಳೆ.</p><img><p>ಹಾಗಿದ್ರೆ ನಿತ್ಯಾಳಿಗೆ ಈಗಾದ್ರೂ ಸತ್ಯ ಗೊತ್ತಾಗತ್ತಾ ಎನ್ನುವ ಪ್ರಶ್ನೆ ಇದೆ. ಬೇಗ ಗೊತ್ತಾಗಲಿ ಎಂದು ಫ್ಯಾನ್ಸ್​ ಹೇಳ್ತಿದ್ರೆ, ಇಬ್ಬರ ಕೈಯಿಂದ ಎಣ್ಣೆ ಹಚ್ಚಿಕೊಳ್ಳುವ ಸೌಭಾಗ್ಯ ಅಲ್ವಾ ಎಂದು ನಟನ ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು.</p>



Source link

Leave a Reply

Your email address will not be published. Required fields are marked *