
ಕರ್ಣ ನಿಧಿಯನ್ನು ಇಷ್ಟಪಡುತ್ತಿರುವುದು ಗೊತ್ತಿಲ್ಲದ ನಿಧಿ ಅಕ್ಕ, ನಿತ್ಯಾ ನಿಧಾನಕ್ಕೆ ಕರ್ಣನ ಮೇಲೆ ಪ್ರೀತಿ ಬೆಳೆಯಿಸಿಕೊಳ್ಳುತ್ತಿದ್ದಾಳೆ ಎಂದೆನಿಸುತ್ತದೆ. ಸಮಾಜದ ದೃಷ್ಟಿಯಲ್ಲಿ ಇವರಿಬ್ಬರು ಗಂಡ-ಹೆಂಡ್ತಿಯಾಗಿದ್ದು, ಬರ ಬರುತ್ತಾ ಬಹುಶಃ ನಿತ್ಯಾಳೇ ಕರ್ಣನನ್ನು ಗಂಡನೆಂದು ಒಪ್ಪಿಕೊಂಡು ಬಿಡಬಹುದು. ಆಗ ನಿಧಿ ಕಥೆ ಏನೋ ಗೊತ್ತಿಲ್ಲ. ಒಟ್ಟಿನಲ್ಲಿಈ ಸೀರಿಯಲ್ ವೀಕ್ಷಕರ ನೆಚ್ಚಿನ ಕಥೆಗಳಲ್ಲಿ ಒಂದಾಗಿದ್ದು, ಟಿಆರ್ಪಿಯಲ್ಲೂ ಸದಾ ಮೊದಲ ಸ್ಥಾನದಲ್ಲಿರುತ್ತದೆ.
ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್ನಲ್ಲಿ ಕಿರಣ್ ರಾಜ್ ಹರ್ಷನಾಗಿ ನಟಿಸುತ್ತಿದ್ದರು. ಭುವಿ ಮತ್ತು ಹರ್ಷ ಜೋಡಿ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು, ಇದೀಗ ನಿಧಿ ಹಾಗೂ ಕರ್ಣ ಜೋಡಿಯೂ ಜನಪ್ರಿಯವಾಗುತ್ತಿದೆ. ಕನ್ನಡತಿಯಲ್ಲಿ ಭುವಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದರು. ಸದಾ ಕನ್ನಡದಲ್ಲಿಯೇ ಮಾತನಾಡುವ, ಮಧ್ಯಮ ವರ್ಗದ ಈ ಹುಡುಗಿ ಮೇಲೆ ಸಿರಿವಂತೆ ಹರ್ಷ ಅಟ್ರಾಕ್ಟ್ ಆಗೋ ಕಥೆಯಾಗಿತ್ತು ಅದು.