
ತೇಜಸ್ ಮೋಸಗಾರ ಎಂದು ಭಾವಿಸಿರುವ ಅಜ್ಜಿ, ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದಾರೆ. ಅಲ್ಲಿ, ನಿತ್ಯಾಳೊಂದಿಗಿನ ಮದುವೆಯನ್ನು ಉಳಿಸಿಕೊಳ್ಳುವಂತೆ ಕರ್ಣನಿಂದ ಮಾತು ಪಡೆದುಕೊಳ್ಳುತ್ತಾರೆ. ನಿಧಿ ಇದಕ್ಕೆ ಒಪ್ಪಿಗೆ ಸೂಚಿಸುವುದರಿಂದ, ಕರ್ಣ ಈಗ ಕೊಟ್ಟ ಮಾತಿಗೆ ಸಿಕ್ಕಿಹಾಕಿಕೊಂಡಿದ್ದಾನೆ.<img><p>ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ತೇಜಸ್ ಆಗಮನದಿಂದ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಎಲ್ಲವೂ ಸುಲಭವಾದಂತೆ ಕಾಣುತ್ತಿಲ್ಲ.</p><img><p>ಕರ್ಣನೇ ತನಗೆ ಕಿಡ್ನ್ಯಾಪ್ ಮಾಡಿರುವುದು ಎಂದು ತಿಳಿದಿದ್ದ ತೇಜಸ್ಗೆ ಅಸಲಿ ವಿಷ್ಯ ಗೊತ್ತಾಗಿದೆ. ಆದರೆ ಕಿಡ್ನ್ಯಾಪ್ ಮಾಡಿರುವವರು ಯಾರು ಎನ್ನುವುದು ತಿಳಿದಿಲ್ಲ. ನಿತ್ಯಾ ತನ್ನಿಂದ ಗರ್ಭಿಣಿಯಾಗಿರುವ ವಿಷಯವೂ ತೇಜಸ್ಗೆ ತಿಳಿಯುವುದರ ಜೊತೆಗೆ, ಈ ಗುಟ್ಟು ಇಡೀ ಮನೆಯಲ್ಲಿಯೂ ರಟ್ಟಾಗಿದೆ. ವಿಲನ್ಗಳ ಕಿವಿಗೂ ಬಿದ್ದಿದೆ.</p><img><p>ಆದರೆ, ನಿತ್ಯಾ ಮತ್ತು ಕರ್ಣ ನಿಜವಾಗಿಯೂ ಮದುವೆಯಾಗಿದ್ದಾರೆ, ತೇಜಸ್ ನಿತ್ಯಾಳಿಗೆ ಮೋಸ ಮಾಡಿದ್ದಾನೆ ಎಂದೇ ಅಂದುಕೊಂಡಿರುವ ಅಜ್ಜಿ, ತೇಜಸ್ಗೆ ಮುಖ ತೋರಿಸಬೇಡ ಎಂದು ಹೊಡೆಯಲು ಹೋದಾಗ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದಾಳೆ.</p><img><p>ನಿತ್ಯಾಳ ಸ್ಥಿತಿ ಅಜ್ಜಿಗೆ ತಿಳಿದಿಲ್ಲ. ತೇಜಸ್ ಮತ್ತು ನಿತ್ಯಾ ಒಂದಾಗೋದು ಅವಳಿಗೆ ಇಷ್ಟವಿಲ್ಲ. ತೇಜಸ್ ಮೋಸಗಾರ ಎಂದುಕೊಂಡಿದ್ದಾಳೆ. ಆದ್ದರಿಂದ ಕರ್ಣನಿಂದ ಒಂದು ಭಾಷೆಯನ್ನು ತೆಗೆದುಕೊಂಡು ಬಿಟ್ಟಿದ್ದಾಳೆ.</p><img><p>ನೀನು ನಿನ್ನ ಮತ್ತು ನಿತ್ಯಾಳ ಮದುವೆಯನ್ನು ಉಳಿಸಿಕೊಡುವ ಮಾತುಕೊಡು ಎಂದು ಹೇಳಿದ್ದಾಳೆ. ಭಾಷೆ ಕೊಡುವಂತೆ ಹೇಳಿದಾಗ, ಕರ್ಣನಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಆದರೆ ಸಾವಿನ ಹಾದಿ ಹಿಡಿದಿರೋ ಅಜ್ಜಿಯ ಮಾತನ್ನೂ ಆತನಿಗೆ ಇಲ್ಲ ಎನ್ನಲು ಆಗಲಿಲ್ಲ.</p><img><p>ಆದರೆ, ಅಲ್ಲಿಯೇ ಇರುವ ನಿಧಿ, ಕರ್ಣನ ಕೈಯನ್ನು ತಂದು ಅಜ್ಜಿಯ ಕೈ ಮೇಲೆ ಇಟ್ಟುಬಿಟ್ಟಿದ್ದಾಳೆ. ಇದರ ಅರ್ಥ ಈಗ ಕರ್ಣ ಆ ಮಾತನ್ನು ಪಾಲಿಸಿಕೊಡಬೇಕಿದೆ. ಇದು ನಿಜವಾದರೆ ನಿಧಿ ಮತ್ತು ಕರ್ಣ ಒಂದಾಗುವುದು ಕನಸೇ ಆಗುತ್ತದೆ.</p><img><p>ಇದೇನು ಮಾಡಿದಿರಿ ಎಂದು ಕರ್ಣ ಹೊರಬಂದಾಗ ನಿಧಿಯನ್ನು ಕೇಳಿದಾಗ, ನಿಮ್ಮ ಮದುವೆನೇ ಆಗಿಲ್ಲವಲ್ಲ, ಮದುವೆ ಉಳಿಸಿಕೊಳ್ಳುವ ಮಾತೆಲ್ಲಿ ಎಂದಿದ್ದಾಳೆ. ಆದರೆ ಅದು ಇಷ್ಟು ಸುಲಭನಾ? ಮಾತು ಕೊಟ್ಟು ಕರ್ಣ ಸಿಕ್ಕಾಕ್ಕೊಂಡನಾ?</p>
Source link
Karna Serial: ನಿತ್ಯಾ ಜೊತೆಗೆ ಮದುವೆ- ಅಜ್ಜಿಗೆ ಮಾತು ಕೊಟ್ಟೇ ಬಿಟ್ಟ ಕರ್ಣ! ನಿಧಿ- ಕರ್ಣ ಒಂದಾಗೋದು ಕನಸಾಗೋಯ್ತಾ?