
<p>ಕರ್ಣ ಧಾರಾವಾಹಿಯಲ್ಲಿ, ನಿಧಿಯಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ನಿಧಿ ಸತ್ತೇ ಹೋದಳೆಂದು ಕರ್ಣ ಆಘಾತಕ್ಕೆ ಒಳಗಾಗುತ್ತಾನೆ. ಆದರೆ, ಅಲ್ಲಾಗಿದ್ದೇ ಬೇರೆ. ನಿಧಿ ಏನಾದಳು? ರೋಚಕ ತಿರುವು ಇಲ್ಲಿದೆ!</p><img><p>ಕರ್ಣ ಸೀರಿಯಲ್ (Karna Serial) ಇದೀಗ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಅತ್ತ ನಿತ್ಯಾ, ನಿಧಿ, ತೇಜಸ್ ಅಥವಾ ಕರ್ಣ ಯಾರನ್ನಾದರೂ ಮುಗಿಸಲು ವಿಲನ್ಗಳು ಸ್ಕೆಚ್ ಹಾಕುತ್ತಲೇ ಇದ್ದಾರೆ.</p><img><p>ಅದೇ ಇನ್ನೊಂದೆಡೆ, ಈ ನಾಲ್ವರೂ ಬೇರೆ ಊರಿಗೆ ಹೋದಾಗ ಒಂದರ ಮೇಲೊಂದರಂತೆ ಅವಘಡಗಳು ಸಂಭವಿಸುತ್ತಿವೆ. ನಯನತಾರಾ ಮೊದಲು ನಿತ್ಯಾಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಳು. ಆದರೆ ಕರ್ಣ ಬಂದು ರಕ್ಷಿಸಿದ್ದ.</p><img><p>ಇದೀಗ ನಿತ್ಯಾಳಿಗೆ ಐಸ್ಕ್ರೀಮ್ ತಿನ್ನುವ ಆಸೆಯಾಗಿತ್ತು. ಅದನ್ನು ತರಲು ಕರ್ಣ ಮತ್ತು ನಿಧಿ ಹೋಗಿದ್ದರು. ಸುಪಾರಿ ಪಡೆದುಕೊಂಡಿರುವ ವಿಲನ್ ಇದನ್ನೇ ಬಂಡವಾಳ ಮಾಡಿಕೊಂಡ.</p><img><p>ನಿಧಿ ಕಾರಿನಲ್ಲಿ ಇದ್ದಳು. ಕರ್ಣ ಇಳಿದು ಐಸ್ಕ್ರೀಮ್ ತರಲು ಹೋದಾಗ, ಲಾರಿಯಿಂದ ನಿಧಿ ಇರುವ ಕಾರಿಗೆ ಗುದ್ದಿಸಿದ್ದಾನೆ. ಕಾರು ಧಗಧಗ ಹೊತ್ತಿ ಉರಿದಿದೆ.</p><img><p>ಇದನ್ನು ನೋಡಿದ ಕರ್ಣನ ನೆಲವೇ ಅಲುಗಾಡಿ ಹೋಗಿದೆ. ಓಡೋಡಿ ಬಂದು ಕಾರಿನಲ್ಲಿ ನೋಡಿದಾಗ ಅಲ್ಲಿಂದ ಸೌಂಡ್ ಬರಲಿಲ್ಲ. ತನ್ನ ಪ್ರಾಣವನ್ನೂ ಲೆಕ್ಕಿಸದೇ ಆತ ಗ್ಲಾಸ್ ಒಡೆಯಲು ಮುಂದಾದಾಗ ಗಾಜಿನ ಚೂರುಗಳೆಲ್ಲಾ ಕೈಹೊಕ್ಕಿದೆ.</p><img><p>ಆದರೆ, ಅದೇ ಇನ್ನೊಂದೆಡೆ, ಅದಾಗಲೇ ಕಾರಿನಿಂದ ಇಳಿದುಹೋಗಿದ್ದ ನಿಧಿ ಬಂದಾಗ, ಕರ್ಣನಿಗೆ ಮಾತೇ ಹೊರಳದೆ ಆಕೆಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ನಿಮ್ಮನ್ನು ಮತ್ತೊಮ್ಮೆ ಕಳೆದುಕೊಳ್ಳಲು ನಾನು ತಯಾರಿಲ್ಲ ಎಂದಿದ್ದಾರೆ.</p><img><p>ಒಟ್ಟಿನಲ್ಲಿ, ಕ್ಷಣ ಕ್ಷಣಕ್ಕೂ ಈ ಜೋಡಿಗೆ ಆತಂಕ ಎದುರಾಗಿದೆ. ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಭಯವಿದೆ. ಅದೇ ಇನ್ನೊಂದೆಡೆ, ಕರ್ಣ ನಿತ್ಯಾಳ ಮೇಲೆ ತೋರಿಸುತ್ತಿರುವ ಪ್ರೀತಿ ತೇಜಸ್ಗೆ ಹೊಟ್ಟೆ ಉರಿ ತರಿಸುತ್ತಿರುವುದು ಕೂಡ ಮುಂದೇನಾಗತ್ತೆ ಎಂದು ನೋಡಬೇಕಿದೆ.</p>
Source link
Karna Serial: ವಿಲನ್ ಕುತಂತ್ರಕ್ಕೆ ನಿಧಿ ಇದ್ದ ಕಾರು ಧಗಧಗ- ಕುಸಿದು ಬಿದ್ದ ಕರ್ಣ! ಮುಂದಾಗಿದ್ದು ಊಹಿಸದ ತಿರುವು