Headlines

Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!

Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!



Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!
<p>ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಮತ್ತು ತೇಜಸ್ ಮದುವೆಗೆ ಸಿದ್ಧತೆ ನಡೆಯುತ್ತಿರುವಾಗ, ವಿಲನ್‌ಗಳು ನಿತ್ಯಾಳನ್ನು ಅಪಾಯಕ್ಕೆ ಸಿಲುಕಿಸಲು ಸಂಚು ರೂಪಿಸುತ್ತಾರೆ. ಅವರು ತೋಡಿದ ಗುಂಡಿಗೆ ನಿತ್ಯಾ ಬಿದ್ದರೂ, ಕರ್ಣ ಆಕೆಯನ್ನು ರಕ್ಷಿಸುತ್ತಾನೆ. &nbsp;</p><img><p>ಕರ್ಣ ಸೀರಿಯಲ್​ (Karna Serial)ನಲ್ಲಿ ನಿತ್ಯಾ ಮತ್ತು ತೇಜಸ್​ ಒಂದಾಗಿದ್ದು, ನಿಧಿ ಮತ್ತು ಕರ್ಣ ಲವ್​ಸ್ಟೋರಿ ಶುರು ಮಾಡಿಕೊಂಡಿದ್ದಾರೆ ಎಂದುಕೊಂಡರೂ ಎಲ್ಲವೂ ಅಂದುಕೊಂಡಂತೆ ಆಗುತ್ತಿಲ್ಲ.</p><img><p>ನಿಧಿ ಮತ್ತು ಕರ್ಣ ಇನ್ನೂ ತಮ್ಮ ಪ್ರೀತಿಯ ವಿಷಯವನ್ನು ಯಾರ ಮುಂದೂ ಹೇಳಿಕೊಂಡಿಲ್ಲ. ತೇಜಸ್​ ಮತ್ತು ನಿತ್ಯಾರ ಮದುವೆ ಮಾಡಿದ ಬಳಿಕ ಹೇಳುವ ಪ್ಲ್ಯಾನ್​ ಮಾಡಿದ್ದಾರೆ. ಆದರೆ, ಮದುವೆಗೆ ಸಿದ್ಧತೆ ನಡೆಸಿದ್ದರೂ ಅದ್ಯಾಕೋ ಸುಸೂತ್ರವಾಗಿ ನಡೆಯುವಂತೆ ಕಾಣುತ್ತಿಲ್ಲ. ಅದಕ್ಕೆ ಕಾರಣ ವಿಲನ್​ಗಳಾದ ರಮೇಶ್​, ಸಂಜಯ್​.</p><img><p>ಇದೀಗ ಈ ವಿಲನ್​ಗಳು ಸೇರಿ ನಿತ್ಯಾಳ ಕಥೆ ಫಿನಿಷ್​ ಮಾಡಲು ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಸುಪಾರಿ ನೀಡಲಾಗಿದೆ. ಬಾಲಕಿಯೊಬ್ಬಳು ಬಂದು ನಿತ್ಯಾಳ ಸಹಾಯ ಕೇಳಿದ್ದಾಳೆ. ಅಮ್ಮನಿಗೆ ಏನೋ ಆಗಿದೆ ಎಂದಿದ್ದಾಳೆ.</p><img><p>ಅದನ್ನು ಕೇಳಿ ಎಲ್ಲರೂ ಬಂದಿದ್ದಾರೆ. ಆದರೆ ನಿತ್ಯಾ ಮುಂದೆ ಬಂದಿದ್ದಾಳೆ. ಅಲ್ಲಿ ವಿಲನ್​ಗಳು ಗುಂಡಿ ತೋಡಿ ಎಲೆ ಹಾಕಿಟ್ಟಿದ್ದಾರೆ. ಅದನ್ನು ನಿತ್ಯಾ ಗಮನಿಸಲಿಲ್ಲ. ಆಕೆ ಹೋಗುತ್ತಿರುವುದನ್ನು ನೋಡಿದ ಕರ್ಣನಿಗೆ ಅನುಮಾನ ಬಂದು ಹಿಂದೆಯೇ ಹೋಗಿದ್ದಾನೆ.</p><img><p>ಅಷ್ಟರಲ್ಲಿ ನಿತ್ಯಾ ಅದರ ಮೇಲೆ ಕಾಲಿಟ್ಟು ಜಾರಿಬಿದ್ದುಬಿಟ್ಟಿದ್ದಾಳೆ. ಓಡಿ ಬಂದ ಕರ್ಣ ಆಕೆಯನ್ನು ಕೈಹಿಡಿದು ಕಾಪಾಡಲು ಪ್ರಯತ್ನಿಸಿದ್ದಾನೆ. ಕೊನೆಗೆ ತೇಜಸ್ ಮತ್ತು ನಿಧಿ ಕೂಡ ಓಡಿಬಂದಿದ್ದಾರೆ.</p><img><p>ತುಂಬಾ ಕಷ್ಟಪಟ್ಟ ಬಳಿಕ ನಿತ್ಯಾ ಮೇಲಕ್ಕೆ ಬಂದಿದ್ದಾಳೆ. ಇದನ್ನು ಕಂಡು ಸುಪಾರಿ ಕೊಟ್ಟಾತ ಶಾಕ್​ ಆಗಿದ್ದಾನೆ. ಆದರೆ ಪ್ರಪಾತಕ್ಕೆ ಬಿದ್ದ ಭಯದಲ್ಲಿ ನಿತ್ಯಾ ತತ್ತರಿಸಿಹೋಗಿದ್ದಾಳೆ.</p><img><p>ಈ ಜಾಗ ಸೇಫ್​ ಅಲ್ಲ ಎಂದು ನಿಧಿ ಹೇಳಿದ್ದರಿಂದ ಅಲ್ಲಿಗೆ ಮದುವೆಗೆ ವಿಘ್ನ ಬಂದಂತೆ ಆಗಿದೆ. ಅಲ್ಲಿಂದ ಎಲ್ಲರೂ ಜಾಗ ಖಾಲಿ ಮಾಡುತ್ತಾರೆ. ಮದುವೆಯ ಕನಸು ಸದ್ಯ ಕನಸಾಗಿಯೇ ಉಳಿದಿದೆ. ನಿತ್ಯಾ ಭಾರಿ ದುರಂತದಿಂದ ಪಾರಾಗಿದ್ದರೂ ಮದುವೆಯೆನ್ನುವುದು ಮಾತ್ರ ಮರೀಚಿಕೆಯಾಗಿದೆ. ಮುಂದೇನಾಗುತ್ತೋ ನೋಡಬೇಕಿದೆ.</p>



Source link

Leave a Reply

Your email address will not be published. Required fields are marked *