
ತೇಜಸ್ ಕಿಡ್ನ್ಯಾಪ್ ಹಿಂದಿನ ಸತ್ಯ ಬಯಲಾಗಿದ್ದು, ಕರ್ಣ ನಿರಪರಾಧಿ ಎಂದು ಸಾಬೀತಾಗಿದೆ. ನಿತ್ಯಾ ಮತ್ತು ತೇಜಸ್ ಮದುವೆ ಮಾಡಿಸಲು ಕರ್ಣ ಮುಂದಾಗಿದ್ದು, ಈ ಪ್ರಸ್ತಾಪ ಕೇಳಿ ತೇಜಸ್ ಶಾಕ್ ಆಗಿದ್ದಾನೆ. ತೆರೆಮರೆಯಲ್ಲಿ ರಮೇಶ್ ನಕ್ಕಿರುವುದು ಕಥೆಗೆ ಹೊಸ ತಿರುವು ನೀಡಿದೆ.<img><p>ಕರ್ಣ ಸೀರಿಯಲ್ (Karna Serial Update) ಇದೀಗ ಕುತೂಹಲದ ಹಂತವನ್ನು ತಲುಪಿದೆ. ತೇಜಸ್ ಆಗಮನವಾಗಿದೆ. ಕರ್ಣನೇ ತನ್ನನ್ನು ಕಿಡ್ನ್ಯಾಪ್ ಮಾಡಿದ್ದು ಎಂದು ಅವನು ಅಂದುಕೊಂಡಿದ್ದ. ಏಕೆಂದರೆ ರಮೇಶ್ ಮತ್ತು ಸಂಜಯ್ ಸೇರಿ ಅದೇ ರೀತಿ ಪ್ಲ್ಯಾನ್ ಮಾಡಿದ್ದರು.</p><img><p>ಇದೀಗ ಕರ್ಣನ ಮೇಲೆಯೇ ತೇಜಸ್ ಆರೋಪ ಹೊರಿಸಿದಾಗ ನಿತ್ಯಾ ಎಲ್ಲಾ ಸತ್ಯವನ್ನೂ ಹೇಳಿದ್ದಾಳೆ. ತಾನು ಗರ್ಭಿಣಿ ಎನ್ನುವ ವಿಷಯವನ್ನು ಕೂಡ ಅವಳು ಬಹಿರಂಗಪಡಿಸಿದ್ದಾಳೆ. ಆದರೆ ಇದನ್ನೆಲ್ಲಾ ಮರೆಯಲ್ಲಿಯೇ ನಿಂತು ರಮೇಶ್, ಸಂಜಯ್ ಗ್ಯಾಂಗ್ ಕೇಳಿಸಿಕೊಂಡಿದೆ.</p><img><p>ಅಸಲಿ ವಿಷಯ ತಿಳಿಯುತ್ತಲೇ ಕರ್ಣನ ಬಳಿ ಕ್ಷಮೆ ಕೋರಿದ್ದಾನೆ ತೇಜಸ್. ನಿತ್ಯಾಳಿಗೆ ಮಾಡಿರುವ ಸಹಾಯದ ಬಗ್ಗೆ ಅವನು ಕರ್ಣನ ಋಣಿಯಾಗಿದ್ದಾನೆ.</p><img><p>ಈಗ ಎಲ್ಲವೂ ಸರಿಯಾಗಿದೆ ಎನ್ನಿಸುತ್ತಿದೆ. ಆದ್ದರಿಂದ ಕರ್ಣ ನಾಳೆ ಎಲ್ಲರೂ ಹೋಗೋಣ. ನಿತ್ಯಾ ಮತ್ತು ತೇಜಸ್ ಮದುವೆ ಮಾಡಿಸೋಣ ಎಂದಿದ್ದಾನೆ. ಅಲ್ಲಿಗೆ ನಿಧಿ ಮತ್ತು ಕರ್ಣ ಒಂದಾಗೋದು ಗ್ಯಾರೆಂಟಿ ಎಂದಾಗಿದೆ.</p><img><p>ಆದರೆ ಇದನ್ನು ಕೇಳುತ್ತಲೇ ತೇಜಸ್ ಶಾಕ್ ಆಗಿದ್ದಾನೆ. ಮಾತ್ರವಲ್ಲದೇ, ಇದನ್ನು ತೆರೆಮರೆಯಲ್ಲಿ ಕೇಳಿಸಿಕೊಳ್ತಿರೋ ರಮೇಶ್ ಮಾತ್ರ ನಕ್ಕಿದ್ದಾನೆ.</p><img><p>ಇದರ ಅರ್ಥ ಏನೋ ಎಡವಟ್ಟು ಆದಂತಿದೆ. ತೇಜಸ್ ನಿತ್ಯಾಳ ಜೊತೆ ಮದುವೆಯ ವಿಷಯ ಕೇಳುತ್ತಲೇ ಶಾಕ್ ಆಗಿದ್ದು ಯಾಕೆ? ನಿತ್ಯಾ ಮತ್ತು ತೇಜಸ್ ಮದುವೆ ಸಾಧ್ಯವಿಲ್ಲ ಎನ್ನುವಂತೆ ತೆರೆಮರೆಯಲ್ಲಿದ್ದ ರಮೇಶ್ ವ್ಯಂಗ್ಯವಾಗಿ ನಕ್ಕಿದ್ದು ಏಕೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.</p>
Source link
Karna Serial: ಯಾರೂ ಊಹಿಸದ ಟ್ವಿಸ್ಟ್! ಅಪ್ಪ ಆಗ್ತಿರೋ ಸತ್ಯ ತಿಳಿದ್ರೂ ಮದ್ವೆಗೆ ನಿರಾಕರಿಸ್ತಾನಾ ತೇಜಸ್?