Karnataka Budget 2026: ಬಜೆಟ್​ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?

Karnataka Budget 2026: ಬಜೆಟ್​ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?


ಕರ್ನಾಟಕ ಬಜೆಟ್ 2026: ಬಜೆಟ್ ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?

ಬೆಂಗಳೂರು, ಮಾ.6: ಇಂದು (ಮಾ.6) ಮಂಡನೆಯಾದ 2026-27ನೇ ಸಾಲಿನ ರಾಜ್ಯ ಬಜೆಟ್ ಒಟ್ಟು ಸರಿಸುಮಾರು 4.48 ಲಕ್ಷ ಕೋಟಿ ರೂ. ಹಲವು ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರವು ವಿವಿಧ ಇಲಾಖೆಗಳಿಗೆ ಹಣವನ್ನು ನೀಡಿದೆ. ಯಾವೆಲ್ಲ ಇಲಾಖೆಗಳಿಗೆ ಎಷ್ಟು ಅನುದಾನವನ್ನು ನೀಡಲಾಗಿದೆ ಎಂದು ಹೇಳಲಾಗಿದೆ.

ಇನ್ನು ಈ ಬಜೆಟ್ ನಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ರಾಜ್ಯದ ಇತಿಹಾಸದಲ್ಲೇ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಗರಿಷ್ಠ ಮೊತ್ತವನ್ನು ಮೀಸಲಿಡಲಾಗಿದೆ. 800 ಕೆಪಿಎಸ್ (ಕೆಪಿಎಸ್) ಶಾಲೆಗಳ ಸ್ಥಾಪನೆ ಮತ್ತು 15,000 ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗಿದೆ. ಇದರೊಂದಿಗೆ ಗ್ಯಾರಂಟಿಗೂ ಬಲ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾದ ದೊಡ್ಡ ಮೊತ್ತವು ‘ಗೃಹಲಕ್ಷ್ಮಿ’ ಅಂತಹ ಗ್ಯಾರಂಟಿ ಯೋಜನೆಗಳ ಮುಂದುವರಿಕೆಯನ್ನು ಖಚಿತಪಡಿಸಲಾಗಿದೆ.

ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೂ ಹೆಚ್ಚು ಅನುದಾನಗಳನ್ನು ನೀಡಲಾಗುತ್ತದೆ. ಕೃಷಿ ಮತ್ತು ಗ್ರಾಮೀಣ ಭಾಗದ ಮೂಲಸೌಕರ್ಯಕ್ಕೆ ಸರಿಸುಮಾರು 50,000 ಕೋಟಿಗಳಷ್ಟು ಅಧಿಕ ಹಣವನ್ನು ವಿವಿಧ ಇಲಾಖೆಗಳ ಮೂಲಕ ಹಂಚಲಾಗಿದೆ.

ಇಲಾಖಾವಾರು ಅನುದಾನ:

ಇಲಾಖೆಯ ಹೆಸರು ಹಂಚಿಕೆಯಾದ ಅನುದಾನ (ಕೋಟಿ ರೂ.ಗಳಲ್ಲಿ)
ಶಿಕ್ಷಣ ಇಲಾಖೆ 47,224
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 34,929
ಇಂಧನ ಇಲಾಖೆ 29,947
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 26,559
ಒಳಾಡಳಿತ ಮತ್ತು ಸಾರಿಗೆ ಇಲಾಖೆ 23,100
ಜಲಸಂಪನ್ಮೂಲ (ನೀರಾವರಿ) 22,436
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ 22,203
ಶಿಕ್ಷಣ ಇಲಾಖೆ 19,843
ಸಮಾಜ ಕಲ್ಯಾಣ ಇಲಾಖೆ 18,612
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 17,817
ಲೋಕೋಪಯೋಗಿ ಇಲಾಖೆ (PWD) 11,424
ಕೃಷಿ ಇಲಾಖೆ 8,373
ಆಹಾರ ಮತ್ತು ನಾಗರಿಕ ಸರಬರಾಜು 7,942
ಪಶುಸಂಗೋಪನೆ ಮತ್ತು ಮೀನುಗಾರಿಕೆ 4,084
ಇತರ ಇಲಾಖೆಗಳು 1,72,757

ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ

ಇದರೊಂದಿಗೆ ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದ ನಗರವನ್ನಾಗಿ ರೂಪಿಸಲು ‘ನಮ್ಮ ಬೆಂಗಳೂರು’ ಮತ್ತು ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಬೆಂಗಳೂರಿನ ಪ್ರಮುಖ ಟ್ರಾಫಿಕ್ ಪಾಯಿಂಟ್‌ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ (ಸುರಂಗ ರಸ್ತೆಗಳು) ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಯೋಜನೆ ವೇಗಕ್ಕೆ ಒತ್ತು ನೀಡಲಾಗಿದೆ.

ಮೆಟ್ರೋ 3ನೇ ಕಾಮಗಾರಿಗಳಿಗೆ ಮತ್ತು ಹೊಸ ಮಾರ್ಗಗಳ ಸಮೀಕ್ಷೆಗಾಗಿ ಸುಮಾರು 5,000 ಕೋಟಿ ರೂ. ಗೂ ಅಧಿಕ ಹಣವನ್ನು ಮೀಸಲಿಡಲಾಗಿದೆ. ವಿಮಾನ ನಿಲ್ದಾಣದ ಮಾರ್ಗವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚುವುದು, ಬಿಳಿ ರಸ್ತೆ ನಿರ್ಮಾಣ ಮತ್ತು ಮಳೆನೀರು ಕಾಲುವೆಗಳ ಅಭಿವೃದ್ಧಿಗೆ ಸುಮಾರು 3,000 ಕೋಟಿ ರೂ. ಅನುದಾನ ನೀಡಲಾಗಿದೆ. ಬಹುಕಾಲದ ಬೇಡಿಕೆಯಾದ ಪೆರಿಫೆರಲ್ ರಿಂಗ್ ರೋಡ್ (PRR) ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಹಣಕಾಸಿನ ನೆರವು ನೀಡಲಾಗಿದೆ. ಬೆಂಗಳೂರಿನ 110 ಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಯನ್ನು ಅಂತಿಮ ಹಂತದ ಯೋಜನೆ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಮಾಡಿ ಸಿಎಂ ಘೋಷಣೆ

ಯಾವೆಲ್ಲ ಮೂಲಗಳಿಂದ ತೆರಿಗೆ ಬಂದಿದೆ:

ರಾಜ್ಯ ತೆರಿಗೆ ಆದಾಯ: 49 ಶೇಕಡ

ಬಂಡವಾಳ ಜಮೆ ಮತ್ತು ಸಾಲಗಳು: 29 ಶೇಕಡ

ಕೇಂದ್ರ ತೆರಿಗೆ ಪಾಲು: 14 ಶೇಕಾಡ

ಕೇಂದ್ರ ಸರ್ಕಾರದ ಸಹಾಯದಾನ: 4 ಶೇಕಡ

ರಾಜ್ಯ ತೆರಿಗೆಯೇತರ ರಾಜಸ್ವ: 4 ಶೇಕಡ

ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳ ವಿವರ

ವಾಣಿಜ್ಯ ತೆರಿಗೆಗಳು: ರೂ. 1,25,000 (57%).

ರಾಜ್ಯ ಅಬಕಾರಿ: ರೂ. 45,000 (20%).

ನೋಂದಣಿ ಮತ್ತು ಮುದ್ರಾಂಕ: ರೂ. 29,000 (13%).

ಮೋಟಾರು ವಾಹನ ತೆರಿಗೆ: ರೂ. 15,500 (7%).

ಇತರೆ: ರೂ. 5,500 (3%).

ವೆಚ್ಚದ ಹಂಚಿಕೆ

ಸಾಲ ಮರುಪಾವತಿ: 20 ಶೇಕಾಡ

ಇತರ ಸಾಮಾನ್ಯ ಸೇವೆಗಳು: 18 ಶೇಕಡ

ಸಮಾಜ ಕಲ್ಯಾಣ: 15 ಶೇಕಡ

ಇತರ ಆರ್ಥಿಕ ಸೇವೆಗಳು: 14 ಶೇಕಡ

ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ: 13 ಶೇಕಡ

ಶಿಕ್ಷಣ: 10 ಶೇಕಾಡ

ಆರೋಗ್ಯ: 4 ಶೇಕಾಡ

ನೀರು ಪೂರೈಕೆ ಮತ್ತು ನೈರ್ಮಲ್ಯ: 3 ಶೇಕಾಡ

ಇತರ ಸಾಮಾಜಿಕ ಸೇವೆಗಳು: 3 ಶೇಕಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *