ಬೆಂಗಳೂರು, ಫೆ.24: ಸ್ಟಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದ ಹೈಟೆಕ್ ವಂಚಕರ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಕಂಡುಕೊಂಡಿದೆ. ಜಯನಗರದಲ್ಲಿ ಕಾಲ್ ಸೆಂಟರ್ ರೂಪದಲ್ಲಿ (stock market scam) ಕಾರ್ಯನಿರ್ವಹಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸುತ್ತಿರುವ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರದ 9 ನೇ ಬ್ಲಾಕ್ನ ಅಂಜನಾದ್ರಿ ಅವೆನ್ಯೂನಲ್ಲಿರುವ ‘ಮಲ್ಟಿವೇವ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ.
ಈ ಸಂಸ್ಥೆಯು ಹೊರರಾಜ್ಯದ 15 ಮಂದಿ ಎಕ್ಸಿಕ್ಯೂಟಿವ್ಗಳನ್ನು ಕೆಲಸಕ್ಕೆ ಇಟ್ಟುಕೊಂಡಿತ್ತು. ಇವರು ಅಮಾಯಕರಿಗೆ ಕರೆ ಮಾಡಿ, ಬಂಡವಾಳ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭವನ್ನು ನೀಡುವುದಾಗಿದೆ. ಗ್ರಾಹಕರು ಹಣ ವರ್ಗಾವಣೆ ಮಾಡಿದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗುವಂತೆ. ಗುಜರಾತ್ನ ಸೂರತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ (ಪ್ರಸ್ತುತನಗರ ನಿವಾಸಿ) ಮತ್ತು ದೆಹಲಿಯ ಹಜರತ್ ನಿಜಾಮುದ್ದೀನ್ ಮೂಲದ ಇಮ್ರಾನ್ (ಬಿಟಿಎಂ ಲೇಔಟ್ ನಿವಾಸಿ) ಬಂಧಿತ ಆರೋಪಿಗಳು.
ಇದನ್ನೂ ಓದಿ: ಸಾರ್ವಜನಿಕರ ಪ್ರಾಣ ತೆಗೆಯಲು ಕಾಯುತ್ತಿದೆ ಈ ರಸ್ತೆ: ತೆರೆದ ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಜನ
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್;
ಬೆಂಗಳೂರು ಸೈಬರ್ ಕಮಾಂಡ್ನಿಂದ ನಕಲಿ ಕಾಲ್ ಸೆಂಟರ್ ಪತ್ತೆ; ಷೇರುಪೇಟೆ ಹೂಡಿಕೆ ಹಗರಣದಲ್ಲಿ ಇಬ್ಬರ ಬಂಧನ
ಬೆಂಗಳೂರು
ಕರ್ನಾಟಕ ರಾಜ್ಯ #ಸೈಬರ್ ಕಮಾಂಡ್ ನಲ್ಲಿ ಅತ್ಯಾಧುನಿಕ ನಕಲಿ ಕಾಲ್ ಸೆಂಟರ್ ಕಾರ್ಯಾಚರಣೆಯನ್ನು ಕಿತ್ತುಹಾಕಿದೆ #ಬೆಂಗಳೂರು ಷೇರುಪೇಟೆಯ ನೆಪದಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ… pic.twitter.com/GIOE3ZWurJ
– ಯಾಸಿರ್ ಮುಷ್ತಾಕ್ (@path2shah) ಫೆಬ್ರವರಿ 24, 2026
ಬಿಟಿಎಂ ಲೇಔಟ್ನಿಂದ ಬರುತ್ತಿದ್ದ ಕರೆಗಳನ್ನು ಡಿಜಿಟಲ್ ಫೋರೆನ್ಸಿಕ್ ಮೂಲಕ ಪತ್ತೆ ಮಾಡಿದ ಸಂಸ್ಥೆ, ಐಎಂಐಐ (IMEI) ಸಂಖ್ಯೆ ಮತ್ತು ಗೂಗಲ್ ಇಮೇಲ್ ಐಡಿಗಳ ಮೂಲಕ ಆರೋಪಿ ಅಮರರಾಮ್ನನ್ನು ಟ್ರೇಸ್ ಮಾಡಲಾಗಿದೆ. ಆರೋಪಿಗಳು ಗೂಗಲ್ ಮೂಲಕ ಸಂಭಾವ್ಯ ಗ್ರಾಹಕರು ಡೇಟಾ ಸಂಗ್ರಹಿಸುತ್ತಾರೆ. ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಮತ್ತು ಹೊರರಾಜ್ಯದ ಬ್ಯಾಂಕ್ ಖಾತೆಗಳನ್ನು ವಂಚನೆಗೆ ಬಳಸಿಕೊಳ್ಳಲಾಗಿದೆ. ವಂಚಿಸಿದ ಹಣವನ್ನು ಹಲವು ‘ಮ್ಯೂಲ್’ (ಮೂಲ್) ಖಾತೆಗಳಿಗೆ ವರ್ಗಾಯಿಸಿ, ನಂತರ ಎಟಿಎಂ ಮೂಲಕ ಡ್ರಾ ಮಾಡಿ ಹಂಚಿಕೊಳ್ಳಲಾಗಿದೆ. ದಾಳಿಯ ವೇಳೆ ದಾಖಲೆ 31 ಮೊಬೈಲ್ ಫೋನ್ಗಳು, 13 ಲ್ಯಾಪ್ಟಾಪ್ಗಳು, 16 ಸಿಮ್ ಕಾರ್ಡ್ಗಳು, ಕಂಪನಿಯ ಲೆಟರ್ಹೆಡ್ಗಳು ಸಂತ್ರಸ್ತರ ವಿವರಗಳ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ