ಬೆಂಗಳೂರು, (ಜನವರಿ 21): ಮನರೇಗಾ ಕಾನೂನು ಬದಲಾವಣೆ ಮಾಡಿ ವಿಬಿ ರಾಮ್ ಕಾಯಿದೆ ವಿರೋಧಿಸಿ ಖಂಡನಾ ನಿರ್ಣಯ ಕೈಗೊಳ್ಳಲು ಸಿದ್ದರಾಮಯ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದ್ದು, ನಾಳೆ (ಜನವರಿ 22) ಜ.31ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಆದರೆ, ಜಂಟಿ ಅಧಿವೇಶನ (ಜಂಟಿ ಅಧಿವೇಶನ) ಆರಂಭಕ್ಕೂ ಒಂದು ದಿನದ ಮುನ್ನವೇ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ (ಥಾವರ್ ಚಂದ್ ಗೆಹ್ಲೋಟ್) ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದೆ. ನಾಳಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಈ ಮೂಲಕ ತಮಿಳುನಾಡು (ತಮಿಳುನಾಡು) ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲರು Vs ಸರ್ಕಾರದ ಸಂಘರ್ಷ ಆರಂಭವಾಗಿದೆ.