ಬೆಂಗಳೂರು, (ಫೆಬ್ರವರಿ 20): ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದು ನೆಟ್ಟಗಿಲ್ಲ. ಅಧಿಕಾರಿಗಳು(ವೈದ್ಯರು) ಸರಿಯಾದ ಸಮಯಕ್ಕೆ ಬರುವುದಿಲ್ಲ. ಇನ್ನು ಕೆಲವು ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಗೆ ಬಂದು ಬಯೋಮೆ ಪಂಚ್ ಮಾಡಿ ಬೇರೆ ಆಸ್ಪತ್ರೆಗೆ ಹೋಗುವುದು ಹಾಗೂ ಡ್ಯೂಟಿ ಬಿಟ್ಟು ಬೇರೆ ಪರ್ಸನಲ್ ಕೆಲಸದಲ್ಲಿ ಭಾಗವಹಿಸುವುದು ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ (ಕರ್ನಾಟಕ ಆರೋಗ್ಯ ಇಲಾಖೆ) ಸರ್ಜಿಕಲ್ ಸ್ಟ್ರೈಕ್ ಗೆ ಮುಂದಾಗಿದೆ.. ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫೇಸಿಯಲ್ ಅಟೆಂಡೆನ್ಸ್ ಮೂಲಕ ಮೊಬೈಲ್ ಹಾಜರಾತಿಗೆ ಸ್ಯಾಲರಿ ಲಂಕ್ ಮಾಡಲು ಮುಂದಾಗಿದೆ.
ಹೌದು…ಇದಕ್ಕೆ ಸ್ಯಾಲರಿ ಲಿಂಕ್ ಆಗಲಿದೆ ಹಾಜರಾತಿಯಾದಷ್ಟೇ ಸಂಬಂಳ ವೈದ್ಯರಿಗೆ ಸಿಗಲಿದೆ. ಆಸ್ಪತ್ರೆಗೆ ಜಿಪಿಎಸ್ ಫಿಕ್ಸ್ ಆಗಲಿದೆ, ವೈದ್ಯರ ಕಳ್ಳಾಟಕ್ಕೆ ಕಡಿವಾಣ ಬೀಳಲಿದೆ. ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆಯಪ್ ಮೂಲಕ ಟ್ರ್ಯಾಕಿಂಗ್ ಮಾಡಲು ಮುಂದಾಗಿದೆ. ಡ್ಯೂಟಿ ಟೈಮ್ ನಲ್ಲಿ ನಿಗಧಿತ ಆಸ್ಪತ್ರೆ ವೈದ್ಯರ ವ್ಯಾಪ್ತಿಯಿಂದ ಹೊರ ಹೋದರೆ ಮಾಹಿತಿ ಸಿಗಲಿದೆ.ಜೊತೆಗೆ ತಡವಾಗಿ ಕರ್ತವ್ಯಕ್ಕೆ ಬಂದ್ರೆ ಕೂಡ ಮಾಹಿತಿ ಸಿಗಲಿದೆ, ಹಾಜರಾತಿಗೆ ಸ್ಯಾಲರಿ ಲಿಂಕ್ ಮಾಡಿದ್ರೆ ಕೆಲಸ ಮಾಡಿದಷ್ಟು ವೇತನ ಸಿಗಲಿದೆ.ವೈದ್ಯರ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್ನ್ಯೂಸ್? ಸೀಲ್ಡ್ ಲಿಕ್ಕರ್ ಬಾಟಲ್ ಸಾಗಾಟಕ್ಕೆ ಅನುಮತಿ?
ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರೆ ಹೇಳೋರಿಲ್ಲ ಕೇಳೋರಿಲ್ಲ ಎಂಬಂತೆ ಇದ್ದು, ಎಷ್ಟೋ ವೈದ್ಯರು ಆಸ್ಪತ್ರೆಗೆ ಬಂದು ಅಟೆಂಡೆನ್ಸ್ ಪಂಚ್ ಮಾಡಿ ಹೋಗಿ ಬಿಡ್ತಾರೆ. ಹೀಗೆ ಕಳ್ಳಾಟವಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಈಗ ಆರೋಗ್ಯ ಇಲಾಖೆ ಬಿಸಿ ಮುಟ್ಟಿಸಲು ಮಂದಾಗಿದೆ.
ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದ ಸಮಯಕ್ಕೆ ಸಾಕಷ್ಟು ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿದೆ. ಇದೀಗ ಆರೋಗ್ಯ ಇಲಾಖೆಯು ಈ ಕ್ರಮವನ್ನು ಆಸ್ಪತ್ರೆಯಿಂದ ಮಾಡುತ್ತಿದೆಯಾದರೂ ಸರ್ಕಾರಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿದೆಯಾ ಎನ್ನುವುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.