
ಸಿಎಂ ಸಿದ್ದರಾಮಯ್ಯ ಅವರು ‘ಜೆಡಿಎಸ್ ಅಧಿಕಾರಕ್ಕೆ ಬರಲ್ಲ, ಕುಮಾರಸ್ವಾಮಿ ಸಿಎಂ ಆಗಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “2018ರಲ್ಲಿ ಕೂಡ ಇದೇ ಮಾತು ಹೇಳಿದ್ದರು. ಆದರೆ ನಂತರ ಅವರೇ ನನ್ನ ಮನೆಗೆ ಬಂದು ಮುಖ್ಯಮಂತ್ರಿ ಆಗುವಂತೆ ಕೇಳಿಕೊಂಡಿದ್ದರು. 2028ರಲ್ಲೂ ಇತಿಹಾಸ ಮರುಕಳಿಸುತ್ತದೆ” ಎಂದು ತಿರುಗೇಟು ನೀಡಿದರು.
‘ನನಗೆ ಸಿಎಂ ಆಗುವುದು ಮುಖ್ಯವಲ್ಲ’
ಕೊನೆಯಲ್ಲಿ ಮಾತನಾಡಿದ ಅವರು, “ನನಗೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ರಾಜ್ಯದಲ್ಲಿ ಜನತಾ ಸರ್ಕಾರ ಬರಬೇಕು. ಭ್ರಷ್ಟ ಸರ್ಕಾರವನ್ನು ಕಿತ್ತಾಕಬೇಕು ಎಂಬುದೇ ನನ್ನ ಹೋರಾಟ” ಎಂದು ಹೇಳಿದರು.
“ರಾಮನಗರದಿಂದ ನನ್ನನ್ನು ಯಾರೂ ಓಡಿಸಲು ಸಾಧ್ಯವಿಲ್ಲ. ನೋಟಿಫಿಕೇಷನ್ ಆಗಲಿ, ಒತ್ತಡ ಆಗಲಿ – ರೈತರ ಜೊತೆ ನಾನು ನಿಂತಿದ್ದೇನೆ. ಭೂಮಿ ಮತ್ತು ಚಿನ್ನದ ಬೆಲೆ ಎಂದಿಗೂ ಬೀಳುವುದಿಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದರು.