ಬೆಂಗಳೂರು, ಅಕ್ಟೋಬರ್ 23: ಕಾರ್ತಿಕ ಮಾಸವು ಧಾರ್ಮಿಕವಾಗಿ ಅತ್ಯಂತ ಶ್ರೇಷ್ಠ ಮಾಸಗಳಲ್ಲಿ ನೆಲೆಸಿದೆ. ತುಲಾ ರಾಶಿಯಲ್ಲಿ ಸೂರ್ಯನು ಸಂಚರಿಸುವ ಈ ಅವಧಿಯನ್ನು ತುಲಾ ಮಾಸ ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ನಡೆಸುವ ಆಚರಣೆಗಳು ನಮ್ಮ ಜೀವನವನ್ನು ಸುಭಿಕ್ಷಗೊಳಿಸಿ, ಉತ್ತಮ ಆರೋಗ್ಯ ಮತ್ತು ಮೋಕ್ಷವನ್ನು ನೀಡುತ್ತವೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ತಣ್ಣೀರಿನ ಸ್ನಾನಕ್ಕೆ ವಿಶೇಷ ಮಹತ್ವವಿದೆ. ನದಿ, ಕ್ಷೇತ್ರ ಅಥವಾ ಮನೆಯಲ್ಲೇ ಸಪ್ತ ನದಿಗಳ ಸ್ಮರಣೆಯೊಂದಿಗೆ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಶುದ್ಧೀಕರಣಕ್ಕೆ ಸಹಾಯಕವಾಗಿದೆ. ಸ್ನಾನದ ನಂತರ ಸೂರ್ಯ ಭಗವಾನನಿಗೆ ಅರ್ಘ್ಯ ಅರ್ಪಿಸುವುದು ಮತ್ತು ಕುಲದೇವರು, ಇಷ್ಟದೇವರ ಪೂಜೆ ಮಾಡುವುದು ಶುಭ.