ಅಯ್ಯೋ ಚಿನ್ನು ಪಾಪು ಬಿಟ್ಟೋಗ್ಬಿಟ್ಟೆಲ್ಲಾ ಆಂತಾ ಆಕೆ ಗೆಳೆಯನೂ ಪ್ರಾಣಬಿಟ್ಟ: ಪೊಲೀಸರಿಗೆ ಸಿಕ್ಕಿದ್ದು ಆತನ ಶವ!

ಅಯ್ಯೋ ಚಿನ್ನು ಪಾಪು ಬಿಟ್ಟೋಗ್ಬಿಟ್ಟೆಲ್ಲಾ ಆಂತಾ ಆಕೆ ಗೆಳೆಯನೂ ಪ್ರಾಣಬಿಟ್ಟ: ಪೊಲೀಸರಿಗೆ ಸಿಕ್ಕಿದ್ದು ಆತನ ಶವ!



ಅಯ್ಯೋ ಚಿನ್ನು ಪಾಪು ಬಿಟ್ಟೋಗ್ಬಿಟ್ಟೆಲ್ಲಾ ಆಂತಾ ಆಕೆ ಗೆಳೆಯನೂ ಪ್ರಾಣಬಿಟ್ಟ: ಪೊಲೀಸರಿಗೆ ಸಿಕ್ಕಿದ್ದು ಆತನ ಶವ!
<p>ಕಾಸರಗೋಡಿನ ಜನಪ್ರಿಯ ಇನ್‌ಸ್ಟಾಗ್ರಾಂ ತಾರೆ ಚಿನ್ನು ಪಾಪು ಅಲಿಯಾಸ್ ರೇಷ್ಮಾ ಅವರ ಆತ್ಮ*ಹತ್ಯೆಯ ಬೆನ್ನಲ್ಲೇ, ಆಕೆಯ ಆಪ್ತ ಸ್ನೇಹಿತ ಸಂದೇಶ್ ಕೂಡ ಸಾವಿಗೆ ಶರಣಾಗಿದ್ದಾರೆ. ಒಂದು ವಾರದ ಅಂತರದಲ್ಲಿ ನಡೆದ ಈ ಜೋಡಿ ಸಾವುಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.</p><img><p>ಗಡಿನಾಡು ಕಾಸರಗೋಡಿನ ಜನಪ್ರಿಯ ಸೋಶಿಯಲ್ ಮೀಡಿಯಾ ತಾರೆ ಚಿನ್ನು ಪಾಪು ಅಲಿಯಾಸ್ ರೇಷ್ಮಾ ಅವರ ಸಾವಿನ ಕರಾಳ ನೆರಳು ಮಾಸುವ ಮುನ್ನವೇ, ಆಕೆಯ ಆಪ್ತ ಸ್ನೇಹಿತನೂ ಆತ್ಮ*ಹತ್ಯೆಗೆ ಶರಣಾಗಿರುವುದು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಂದು ವಾರದ ಅಂತರದಲ್ಲಿ ನಡೆದ ಈ ಜೋಡಿ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.</p><img><p><strong>ಯಾರು ಈ ಚಿನ್ನು ಪಾಪು?</strong></p><p>ಕಾಸರಗೋಡು ಮೂಲದ 24 ವರ್ಷದ ಕೆ. ರೇಷ್ಮಾ, ಸೋಶಿಯಲ್ ಮೀಡಿಯಾ ಲೋಕದಲ್ಲಿ ‘ಚಿನ್ನು ಪಾಪು’ ಎಂದೇ ಚಿರಪರಿಚಿತರಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಇವರು, ಕಾಸರಗೋಡು ಶೈಲಿಯ ತುಳು ಹಾಗೂ ಮಲಯಾಳಂ ಭಾಷೆಯ ವಿಡಿಯೋಗಳ ಮೂಲಕ ಮನೆಮಾತಾಗಿದ್ದರು.</p><img><p>ಸ್ಥಳೀಯ ಸಂಸ್ಕೃತಿ, ಹಾಸ್ಯ ಪ್ರಜ್ಞೆ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯ ಬಗ್ಗೆ ಅವರು ಮಾಡುತ್ತಿದ್ದ ವಿಡಿಯೋಗಳಿಗೆ ಲಕ್ಷಾಂತರ ವೀಕ್ಷಣೆಗಳು ಬರುತ್ತಿದ್ದವು.</p><img><p>ವಿಚ್ಛೇದನದ ಬೆನ್ನಲ್ಲೇ ದುರಂತ ಅಂತ್ಯ</p><p>ಗಂಗಾಧರನ್ ಮತ್ತು ಶೈಲಜಾ ದಂಪತಿಯ ಪುತ್ರಿಯಾದ ರೇಷ್ಮಾ ಅವರ ವೈಯಕ್ತಿಕ ಜೀವನ ಅಂದುಕೊಂಡಷ್ಟು ಸುಖಮಯವಾಗಿರಲಿಲ್ಲ. ತೀರಾ ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿದ್ದ ರೇಷ್ಮಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.</p><img><p>ಕೌಟುಂಬಿಕ ಕಲಹಗಳಿಂದ ಬೇಸತ್ತಿದ್ದ ಅವರು, ಸಾವಿಗೂ ಒಂದು ತಿಂಗಳ ಮೊದಲು ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದರು. ಫೆಬ್ರವರಿ 9ರಂದು ಉಳ್ಳಿಯತ್ತಡ್ಕದ ತಮ್ಮ ಬಾಡಿಗೆ ಮನೆಯಲ್ಲಿ ರೇಷ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿಗೂ ಮುನ್ನ ಅವರು ತಮ್ಮ ನಾಲ್ಕು ವರ್ಷದ ಮಗನನ್ನು ಪೋಷಕರಿಗೆ ಒಪ್ಪಿಸಿ ಬಂದು ಈ ನಿರ್ಧಾರ ಕೈಗೊಂಡಿದ್ದರು.</p><img><p>ರಹಸ್ಯ ಹೆಚ್ಚಿಸಿದ ಆಪ್ತ ಸ್ನೇಹಿತನ ಸಾವು</p><p>ರೇಷ್ಮಾ ಅವರ ಸಾವಿನ ತನಿಖೆ ನಡೆಸುತ್ತಿದ್ದ ಪೊಲೀಸರು, ಆಕೆಯ ಆಪ್ತ ಸ್ನೇಹಿತ ಸಂದೇಶ್ ಕೆ. ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರ ವಿಚಾರಣೆ ಎದುರಿಸಿ ಬಂದಿದ್ದ ಸಂದೇಶ್ ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದರು ಎಂದು ಹೇಳಲಾಗುತ್ತಿದೆ.</p><img><p>ಭಾನುವಾರ (ಫೆಬ್ರವರಿ 15) ಮಧ್ಯಾಹ್ನ ಮನ್ನಿಪಾಡಿಯ ತಮ್ಮ ಮನೆಯಲ್ಲಿ ಸಂದೇಶ್ ಕೂಡ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.</p><img><p><strong>ಪೊಲೀಸ್ ತನಿಖೆ ಮತ್ತು ಅನುಮಾನಗಳು</strong></p><p>ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದ ರೇಷ್ಮಾ ಮತ್ತು ಸಂದೇಶ್ ನಡುವೆ ಯಾವುದೇ ರೀತಿಯ ಸಂಬಂಧವಿತ್ತೇ? ಅಥವಾ ಪೊಲೀಸರ ವಿಚಾರಣೆಯ ಭಯದಿಂದ ಸಂದೇಶ್ ಈ ಹಂತಕ್ಕೆ ಹೋದರೇ? ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ. ಪೊಲೀಸರು ಈ ಎರಡೂ ಪ್ರಕರಣಗಳನ್ನು ‘ಅಸ್ವಾಭಾವಿಕ ಸಾವು’ ಎಂದು ದಾಖಲಿಸಿಕೊಂಡಿದ್ದಾರೆ.</p><img><p>ರೇಷ್ಮಾ ಅವರ ಮೊಬೈಲ್ ಕರೆಗಳ ವಿವರ (CDR) ಮತ್ತು ಸಾಮಾಜಿಕ ಜಾಲತಾಣದ ಚಟುವಟಿಕೆಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಕಾಸರಗೋಡಿನ ಈ ಯುವ ಪ್ರತಿಭೆಗಳ ಸಾವು ಅವರ ಅಪಾರ ಅಭಿಮಾನಿ ಬಳಗದಲ್ಲಿ ಶೋಕದ ಮೌನ ಆವರಿಸುವಂತೆ ಮಾಡಿದೆ.</p>



Source link

Leave a Reply

Your email address will not be published. Required fields are marked *