ರಾಜಮೌಳಿಯ ವಾರಣಾಸಿ ಚಿತ್ರದಲ್ಲಿ ಸುದೀಪ್‌: ಹನುಮಂತನಾಗಿ ಸಾಹಸ ಪ್ರದರ್ಶಿಸುತ್ತಾರಾ ಕಿಚ್ಚ!

ರಾಜಮೌಳಿಯ ವಾರಣಾಸಿ ಚಿತ್ರದಲ್ಲಿ ಸುದೀಪ್‌: ಹನುಮಂತನಾಗಿ ಸಾಹಸ ಪ್ರದರ್ಶಿಸುತ್ತಾರಾ ಕಿಚ್ಚ!



ರಾಜಮೌಳಿಯ ವಾರಣಾಸಿ ಚಿತ್ರದಲ್ಲಿ ಸುದೀಪ್‌: ಹನುಮಂತನಾಗಿ ಸಾಹಸ ಪ್ರದರ್ಶಿಸುತ್ತಾರಾ ಕಿಚ್ಚ!
<p>ಸುದೀಪ್‌ ಅವರನ್ನು ‘ಅದೃಷ್ಟ ತರುವ ಪ್ರತಿಭಾವಂತ ನಟ’ ಎಂದೇ ಗುರುತಿಸಿರುವ ರಾಜಮೌಳಿ ತನ್ನ ಹೊಸ ಸಿನಿಮಾ ವಾರಣಾಸಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್‌ ನೀಡಿದ್ದಾರೆ ಎನ್ನಲಾಗಿದೆ.</p><img><p>ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ವಾರಣಾಸಿ’ಯಲ್ಲಿ ಕಿಚ್ಚ ಸುದೀಪ್‌ ನಟಿಸುತ್ತಿದ್ದಾರೆ ಎಂಬ ಮಾತು ಹೇಳಿಬಂದಿದೆ. ಸುದೀಪ್‌ ಈ ಸಿನಿಮಾದಲ್ಲಿ ಹನುಮಂತನಾಗಿ ಸಾಹಸ ಪ್ರದರ್ಶಿಸಲಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.</p><img><p>ರಾಜಮೌಳಿ ಅವರ ‘ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಸುದೀಪ್‌ ನಟಿಸಿದ್ದಾರೆ. ಆರಂಭದಿಂದಲೂ ಸುದೀಪ್‌ ಅವರನ್ನು ‘ಅದೃಷ್ಟ ತರುವ ಪ್ರತಿಭಾವಂತ ನಟ’ ಎಂದೇ ಗುರುತಿಸಿರುವ ರಾಜಮೌಳಿ ತನ್ನ ಹೊಸ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್‌ ನೀಡಿದ್ದಾರೆ ಎನ್ನಲಾಗಿದೆ. 1300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ಸುದೀಪ್‌ ನಟನೆಯ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.</p><img><p>ಇನ್ನೊಂದೆಡೆ ‘ವಾರಣಾಸಿ’ ಟೈಟಲ್‌ ಬಗ್ಗೆ ವಿವಾದವೆದ್ದಿದೆ. ಈ ಶೀರ್ಷಿಕೆಯನ್ನು ತೆಲುಗಿನ ರಾಮ ಬ್ರಹ್ಮ ಹನುಮ ಕ್ರಿಯೇಶನ್ಸ್‌ನ ಸಿ.ಎಚ್‌. ಸುಬ್ಬಾ ರೆಡ್ಡಿ 2023ರಲ್ಲೇ ಖರೀದಿಸಿ, ಬಳಿಕ ಇದನ್ನು 2026ರವರೆಗೂ ನವೀಕರಿಸಿದ್ದರು ಎನ್ನಲಾಗಿದೆ. ಇದನ್ನು ವಿರೋಧಿಸಿ ಸುಬ್ಬಾ ರೆಡ್ಡಿ ದೂರು ನೀಡಲು ಮುಂದಾಗಿದ್ದಾರೆ.</p><img><p>ನನ್ನ ಸಿನಿಮಾದ ಕತೆಯನ್ನು, ಇದರ ವಿಸ್ತಾರವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಅದಕ್ಕಾಗಿ ಈ ಟೀಸರ್‌ ಸಿದ್ಧಗೊಳಿಸಿದ್ದೇವೆ. ಈ ಟೀಸರ್‌ ಎಲ್ಲವನ್ನೂ ಹೇಳುತ್ತದೆ. ಮಹೇಶ್‌ ಬಾಬು ಕೃಷ್ಣನ ಪಾತ್ರಕ್ಕೆ ಸೂಕ್ತವಾಗುತ್ತಾರೆ, ಶಾಂತರೂಪಿ ರಾಮನ ಪಾತ್ರಕ್ಕೆ ಹೊಂದುವುದಿಲ್ಲವೇನೋ ಎಂಬ ಅನುಮಾನವಿತ್ತು.</p><img><p>ರಾಮನ ದಿರಿಸು ಧರಿಸಿದ ಅವರನ್ನು ನೋಡಿದಾಗ ನನಗೇ ರೋಮಾಂಚನವಾಯಿತು. ಇದು ನನ್ನ ಮತ್ತು ಮಹೇಶ್‌ ಬಾಬು ವೃತ್ತಿಜೀವನದ ಅತಿದೊಡ್ಡ ಸಿನಿಮಾ ಆಗಲಿದೆ. ನನಗೆ ರಾಮಾಯಣ, ಮಹಾಭಾರತ ಇಷ್ಟ. ಇದರಲ್ಲಿ ರಾಮಾಯಣ ಅಂಶ ನಾನು ನಿರೀಕ್ಷಿಸದೇ ಬಂದಿದ್ದು ನನಗೇ ಖುಷಿ ಕೊಟ್ಟಿದೆ.</p><img><p>ಮಹೇಶ್‌ ತಂದೆ ಕೃಷ್ಣಂರಾಜು ಚಿತ್ರರಂಗಕ್ಕೆ ಅನೇಕ ಹೊಸತುಗಳನ್ನು ಕೊಟ್ಟವರು. ಈ ಸಿನಿಮಾ ಮೂಲಕ ಪ್ರೀಮಿಯಂ ಲಾರ್ಜ್‌ ಸ್ಕೇಲ್‌ ಫಾರ್ಮ್ಯಾಟ್‌ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ ಎಂದರು ರಾಜಮೌಳಿ.</p>



Source link

Leave a Reply

Your email address will not be published. Required fields are marked *