
ಕೊಪ್ಪಳ, ಮಾರ್ಚ್ 11: ಜಿಲ್ಲೆಯ ಜನತೆಗೆ ಈಗ ಉಸಿರಾಡುವುದೇ ದೊಡ್ಡ ಸಾಹಸವಾಗಿದೆ. ಕಾರ್ಖಾನೆಗಳು (ಕಾರ್ಖಾನೆ) ಹೊರಸೂಸುವ ವಿಷಕಾರಿ ಹೊಗೆ ರೋಸಿ ಹೋಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿದೆ ಈಗ ಎಚ್ಚೆತ್ತುಕೊಂಡಿದೆ. ನಿಯಮ ಉಲ್ಲಂಘಿಸಿದ 5 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, 3 ಕಾರ್ಖಾನೆಗಳಿಗೆ ಬೀಗ ಬೀಳುವುದು ಫಿಕ್ಸ್ ಆಗಿದೆ. ಕಪ್ಪು ಹೊಗೆ ಉಗಳೋ ಕಾರ್ಖಾನೆಗಳು ಬಂದ್ ಆಗೋ ಸಾಧ್ಯತೆ ಇದೆ. ಕಾರ್ಖಾನೆಗಳು ಬಂದ್ ಆಗಿದ್ದರೆ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ಗವಿಸಿದ್ದೇಶ್ವರನ ನಾಡು ಕೊಪ್ಪಳದಲ್ಲಿ ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ತಲೆಯೆತ್ತಿರುವ ಬೃಹತ್ ಕಾರ್ಖಾನೆಗಳು, ಮತ್ತೊಂದು ಕಡೆ ಆ ಕಾರ್ಖಾನೆಗಳು ನಡೆಯುತ್ತಿರುವ ವಿಷಕಾರಿ ಹೊಗೆ. ಹಗಲು ಹೊತ್ತಿನಲ್ಲೇ ಆಕಾಶ ಕಪ್ಪಾಗಿ ಕಾಣುತ್ತಿದೆ. ಜನರ ಶ್ವಾಸಕೋಶಕ್ಕೆ ಗಾಳಿಯ ಬದಲು ವಿಷಕಾರಿ ಕೆಮಿಕಲ್ ಮಿಶ್ರಿತ ಧೂಳು ಸೇರುತ್ತಿದೆ. ಸ್ಥಳೀಯರ ಮನೆಯ ಅಂಗಳ, ಕುಡಿಯುವ ನೀರು, ರೈತರು ಬೆಳೆದ ಬೆಳೆಗಳ ಮೇಲೂ ಕಪ್ಪು ಬಣ್ಣದ ಬೂದಿ ಕುಳಿತುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಅಸ್ತಮಾ, ಚರ್ಮ ವ್ಯಾಧಿ ಮತ್ತು ತೊಂದರೆಗಳು ಕಾಡುತ್ತಿವೆ.
ಇದನ್ನೂ ಓದಿ: ಕಾರ್ಖಾನೆಗಳು ವಾಯುಮಾಲಿನ್ಯ ಕಡಿಮೆ ಮಾಡಬೇಕು: ಇಲ್ಲಾಂದ್ರೆ ಬಂದ್ ನಿಶ್ಚಿತ; ಶಾಸಕ ಎಚ್ಚರಿಕೆ
ವರ್ಷಗಳಿಂದ ಮನವಿ ಮಾಡಿದರೂ ಕೇಳಿದ ಅಧಿಕಾರಿಗಳ ವಿರುದ್ಧ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೀಗ ಜನರ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರು, ಡಿಸಿ ಸಭೆ ನಡೆಸಿದ್ದಾರೆ. ಎಲ್ಲವೂ ಇದೆ, ಆದರೆ ಆರೋಗ್ಯ ಇಲ್ಲ ಎಂದು ಹಿರಿಯ ಸಭೆಯಲ್ಲಿ ಅಳಲು ತೋಟ ಇದೆ.
ಶೋಕಾಸ್ ನೋಟಿಸ್ ಜಾರಿ: 3 ಫ್ಯಾಕ್ಟರಿಗಳ ಬಂದ್ಗೆ ಆದೇಶ
ಜನರ ಆಕ್ರೋಶಕ್ಕೆ ಬೆದರಿದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಳಕೆ, ಕೊನೆಗೂ ಕಾರ್ಯಾಚರಣೆಗೆ ಇಳಿದಿದೆ. ಪರಿಸರದ ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿದ್ದ 5 ಪ್ರಮುಖ ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ. ಅಷ್ಟೇ ಅಲ್ಲ, ಅತ್ಯಂತ ಅಪಾಯಕಾರಿ ಮಾಲಿನ್ಯ ಹರಡುತ್ತಿದ್ದ 3 ಫ್ಯಾಕ್ಟರಿಗಳನ್ನು ತಕ್ಷಣವೇ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.
ಡಿಸಿ ಸುರೇಶ್ ಇಟ್ನಾಳ್ ಹೇಳಿದಷ್ಟು
ನಾವು ನಿರಂತರವಾಗಿ ಮಾನಿಟರ್ ಮಾಡಬಹುದಾಗಿದೆ. ಯಾವ ಕಾರ್ಖಾನೆಗಳು ಫಿಲ್ಟರ್ ಬಳಸದೆ ಹೋಗುತ್ತವೆಯೋ ಅವುಗಳ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಈಗಲೇ 3 ಫ್ಯಾಕ್ಟರಿಗಳಿಗೆ ಕ್ಲೋಸರ್ ಆರ್ಡರ್ ನೀಡಿದ್ದೇವೆ ಎಂದು ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.
ಕೊಪ್ಪಳದಲ್ಲಿರುವ ಪಿಬಿಕೆಎಸ್, ಇಸ್ಪಾತ್, ವನ್ಯ ಸ್ಟೀಲ್ ಒಂದು ಎರಡು, ಹೆಆರ್ಜಿಗೆ ನೋಟಿಸ್ ಕೊಡಲಾಗಿದೆ. ಮೂರು ಕಾರ್ಖಾನೆಗಳ ತಪಾಸಣೆ ಮುಗದಿದ್ದು, ಎರಡು ಕಾರ್ಖಾನೆಗಳಿಗೆ ಕ್ಲೋಸರ್ ನೋಟಿಸ್ ನೀಡಲಾಗಿದೆ. ಇನ್ನೊಂದು ಕೂಡ ಕ್ಲೋಸ್ ಆಗಲಿದೆ ಎನ್ನುತ್ತಿದ್ದಾರೆ ಡಿಸಿ.
ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆಗೆ
ಕೈಗಾರಿಕೆಗಳು ಬೇಕು, ಆದರೆ ಜನರ ಜೀವ ಬಲಿ ಕೊಟ್ಟು ಅಲ್ಲ. ಈಗಲಾದರೂ ಎಚ್ಚೆತ್ತುಕೊಂಡಿರುವುದು ಸಮಾಧಾನದ ಸಂಗತಿ. ಆದರೆ ಈ ನೋಟಿಸ್ ಮತ್ತು ಬಂದ್ ಕೇವಲ ಕಣ್ಣೊರೆಸುವ ತಂತ್ರವಾಗಬಾರದು ಎಂಬುದು ಕೊಪ್ಪಳ ಜಿಲ್ಲೆಯ ಜನರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.