Headlines

ಜಯಂತ್ ವಿರುದ್ಧ ಸೇಡಿಗೆ ಇಳಿದ ಚಿನ್ನುಮರಿ; ಮುಂದಿದೆ ಮಾರಿಹಬ್ಬ

ಜಯಂತ್ ವಿರುದ್ಧ ಸೇಡಿಗೆ ಇಳಿದ ಚಿನ್ನುಮರಿ; ಮುಂದಿದೆ ಮಾರಿಹಬ್ಬ


ಜಯಂತ್ ವಿರುದ್ಧ ಸೇಡಿಗೆ ಇಳಿದ ಚಿನ್ನುಮರಿ; ಮುಂದಿದೆ ಮಾರಿಹಬ್ಬ

‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಅತ್ಯುತ್ತಮ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಧಾರಾವಾಹಿ ಒಂದು ಕುಟುಂಬದ ಕಥೆ ಹೇಳಲಾಗದು. ಅದರಲ್ಲಿ ಜಯಂತ್ ಹಾಗೂ ಜಾಹ್ನವಿ ಕಥೆ ಕೂಡ ಒಂದು. ದೂರ ಆಗಿದ್ದ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಇನ್ಮೇಲೆ ಜಯಂತ್ ಗೆ ನರಕ ತೋರಿಸಲು ಜಾಹ್ನವಿ ರೆಡಿ ಆದಂತೆ ಇದೆ. ಈ ಸಂದರ್ಭದ ಪ್ರೋಮೋ ಜೀ ಕನ್ನಡ ಹಂಚಿಕೊಂಡಿದೆ.

ಜಾಹ್ನವಿಯನ್ನು ಪ್ರೀತಿಸಿ ಮದುವೆ ಆದನು ಜಯಂತ್. ಈ ಮದುವೆ ನಡೆಯುವುದಕ್ಕೂ ಮೊದಲು ಜಯಂತ್ ಒಳ್ಳೆಯವನು ಎಂದು ಜಾಹ್ನವಿ ಅಂದುಕೊಂಡಿದ್ದಳು. ಆದರೆ, ಮದುವೆ ಆದ ಬಳಿಕ ಆತನ ನಿಜವಾದ ಬಣ್ಣ ಗೊತ್ತಾಯಿತು. ಸದಾ ಜಾಹ್ನವಿಯನ್ನು ಚಿನ್ನುಮರಿ ಕರೆಯುತ್ತಿದ್ದ ಜಯಂತ್, ಆಕೆಗೆ ಪ್ರೀತಿ ಹೆಸರಲ್ಲಿ ಟಾರ್ಚರ್ ಕೊಡಲು ಆರಂಭಿಸಿದ.

ಈ ಟಾರ್ಚರ್ ತಡೆಯಲು ಸಾಧ್ಯವಾಗಿಲ್ಲ. ಒಂದು ದಿನ ಹೊರಗೆ ಹೋಗುವ ನೆಪದಲ್ಲಿ ನೀರಿಗೆ ಹಾರಿದಳು ಜಾಹ್ನವಿ. ಈ ಮೂಲಕ ಪತಿಯಿಂದ ತಪ್ಪಿಸಿಕೊಂಡಳು. ಇಷ್ಟು ದಿನ ಕಾಲ ಜಾಹ್ನವಿ ತಲೆಮರೆಸಿಕೊಂಡೇ ಬಳಲುತ್ತಿದ್ದಳು. ಆದರೆ, ಈಗ ಕೊನೆಗೂ ಆಕೆ ಸಿಕ್ಕಿದ್ದಾಳೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಜೀ ಕನ್ನಡ (@zeekannada) ಹಂಚಿಕೊಂಡ ಪೋಸ್ಟ್

ಇಷ್ಟು ದಿನ ಜಾಹ್ನವಿಗೆ ಜಯಂತ್ ಕಾಟ ಕೊಡುತ್ತಿದ್ದನು. ಈಗ ಜಾಹ್ನವಿಯೇ ಕಾಟ ಕೊಡಲು ನಿರ್ಧರಿಸಿದ್ದಾಳೆ. ಯಾವ ಟೆಕ್ನಿಕ್ ಉಪಯೋಗಿಸಿ ಪತಿ ಟಾರ್ಚರ್ ಕೊಡುತ್ತಿದ್ದನೋ ಅದೇ ಮಾರ್ಗದಲ್ಲಿ ಜಾಹ್ನವಿ ಟಾರ್ಚರ್ ನೀಡಲು ಆರಂಭಿಸಿದ್ದಾಳೆ. ಇದು ಧಾರಾವಾಹಿ ದಿಕ್ಕನ್ನೇ ಬದಲಿಸಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್ ನಿಂದ ಹೊರ ಬಂದಿದ್ದೇಕೆ? ಕಾರಣ ಬಿಚ್ಚಿಟ್ಟ ಭವಿಷ್

‘ಲಕ್ಷ್ಮೀ ನಿವಾಸ’ ಧಾರಾವಾಹಿ ಒಳ್ಳೆಯ ಟಿಆರ್ ಪಿಗಾಗಿ ಸಾಗಿದೆ. ಈಗ ಧಾರಾವಾಹಿ ಹೊಸ ರೀತಿಯಲ್ಲಿ ಸಾಗುತ್ತಿದೆ ಧಾರಾವಾಹಿ ಮತ್ತಷ್ಟು ಟಿಆರ್ ಪಿ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಜಾಹ್ನವಿಯ ಹೊಸ ಅವತಾರವನ್ನು ಅನೇಕರು ಹೊಗಳಿದ್ದಾರೆ. ‘ಕೇವಲ ಚಿನ್ನು ಮರಿ ಅಲ್ಲ ಈಗ ಅವರ ಬೆಂಕಿಮರಿ’ ಎಂದೆಲ್ಲ ಹೊಗಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *