
<p>ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ, ಜಯಂತ್ ಲಲಿತಮ್ಮನ ಸಾವಿಗೆ ಕಾರಣನಾಗಿ ಸಂತೋಷ್ನಿಂದ ಬ್ಲ್ಯಾಕ್ಮೇಲ್ಗೆ ಒಳಗಾಗಿದ್ದಾನೆ. ಈ ಸತ್ಯ ಯಾರಿಗೂ ತಿಳಿಯದಂತೆ, ಜಾಹ್ನವಿಯ ಪೋಷಕರು ಆತನಿಗೆ ಮರುಮದುವೆ ಮಾಡಲು ಮುಂದಾಗಿದ್ದಾರೆ. </p><img><p>ಲಕ್ಷ್ಮಿ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಸದ್ಯ ಜಯಂತ್, ಲಲಿತಮ್ಮನ ಕೊ*ಲೆ ಮಾಡಿ ಏನೂ ಆಗದವರ ರೀತಿಯಲ್ಲಿ ಇದ್ದಾನೆ. ಜಾಹ್ನವಿಯನ್ನು ಹುಡುಕಿ ವಿಶ್ವನ ಮನೆಗೆ ಹೋದಾಗ, ಅಡ್ಡ ಬಂದ ಲಲಿತಮ್ಮನನ್ನು ದೂಕುವ ಭರದಲ್ಲಿ ಅವರ ಸಾವಿಗೆ ಕಾರಣನಾಗಿದ್ದಾನೆ ಜಯಂತ್.</p><img><p>ಇದರ ವಿಡಿಯೋ ಮಾಡಿರುವ ಸಂತೋಷ್ ಜಯಂತ್ನ ಬ್ಲ್ಯಾಕ್ಮೇಲ್ ಮಾಡುತ್ತಾ, ದುಡ್ಡು ವಸೂಲಿ ಮಾಡುತ್ತಿದ್ದಾನೆ, ಅದೇ ದುಡ್ಡಿನಲ್ಲಿ ಭರ್ಜರಿ ಮನೆಯ ಸಾಲವನ್ನೂ ತೀರಿಸಿದ್ದಾನೆ. ಆದರೆ ಜಯಂತ್ಗೆ ಇನ್ನೂ ಅವನು ಯಾರು ಎನ್ನುವುದು ತಿಳಿದಿಲ್ಲ.</p><img><p>ಇದೀಗ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ಆಕೆಯ ಅಪ್ಪ-ಅಮ್ಮನಿಗೆ ಸೇರಿ ಬಹುತೇಕ ಯಾರಿಗೂ ಗೊತ್ತಿಲ್ಲ. ಆದರೆ ವಿಶ್ವನ ಮೂಲಕ ಜಯಂತ್ಗೆ ಆ ಸತ್ಯ ಗೊತ್ತಿದೆ. ಆದರೆ ಅದನ್ನು ಆತ ಆಕೆಯ ಅಪ್ಪ-ಅಮ್ಮನ ಎದುರು ಬಾಯಿ ಬಿಡುತ್ತಿಲ್ಲ.</p><img><p>ಮನೆಗೆ ಬಂದಿರುವ ಅಳಿಯ ತುಂಬಾ ಒಳ್ಳೆಯವ ಎಂದುಕೊಂಡಿದ್ದಾರೆ ಜಾಹ್ನವಿ ಅಪ್ಪ-ಅಮ್ಮ. ಅದೇ ಕಾರಣಕ್ಕೆ ಇನ್ನೂ ವಯಸ್ಸು ಇರುವ ಅಳಿಯನಿಗೆ ಮತ್ತೊಂದು ಮದುವೆ ಮಾಡಿಸಬೇಕು, ತನ್ನ ಮಗಳ ನೆನಪಿನಲ್ಲಿಯೇ ಆತ ಒಬ್ಬಂಟಿಯಾಗಿ ಇರುವುದು ಬೇಡ ಎನ್ನುವುದು ಅವರ ಕಳಕಳಿ.</p><img><p>ಅದೇ ಮಾತನ್ನು ಜಯಂತ್ ಮುಂದಿಟ್ಟಿದ್ದಾನೆ ಜಾಹ್ನವಿ ಅಪ್ಪ. ಆದರೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿರುವ ಜಯಂತ್, ಅದನ್ನು ಹೇಳಲಿಲ್ಲ. ಆದರೆ ನಾನು ಜಾಹ್ನವಿ ನೆನಪಿನಲ್ಲಿಯೇ ಇರುತ್ತೇನೆ. ಮತ್ತೊಂದು ಮದುವೆ ಬೇಡ ಎಂದು ತಿರಸ್ಕರಿಸಿದ್ದಾನೆ.</p><img><p>ಒಟ್ಟಿನಲ್ಲಿ ಈಗ ಜಯಂತ್ ಮತ್ತು ಜಾಹ್ನವಿ ಮುಂದಿನ ಸ್ಟೋರಿ ಮಾತ್ರ ನಿಗೂಢವಾಗಿದೆ. ಲಲಿತಾಳ ಸಾವಿಗೆ ಕಾರಣ ಆಗಿರೋ ಜಯಂತ್ ಸಿಕ್ಕಿಬಿದ್ದರೆ ಆತನಿಗೆ ಭಾರಿ ಶಿಕ್ಷೆ ಆಗುವುದಂತೂ ಗ್ಯಾರೆಂಟಿ. ಒಟ್ಟಿನಲ್ಲಿ ಇವರಿಬ್ಬರ ಕಥೆ ಏನು ಎನ್ನುವುದು ವೀಕ್ಷಕರಿಗೂ ಅರ್ಥ ಮಾಡಿಕೊಳ್ಳಲು ಆಗ್ತಿಲ್ಲ.</p>
Source link
Lakshmi Nivasa: ಜಯಂತ್ಗೆ 2ನೇ ಮದುವೆ ಆಫರ್: ಅಳಿಯನ ಮದುವೆಗೆ ಮುಂದಾದ ಜಾಹ್ನವಿ ಅಪ್ಪ!