
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಯೋಜನೆಯಾದ ಡಾ. ಬಸವರಾಜ ಗುರೂಜಿಅವರು 2026ರ ಕೇತುಗ್ರಸ್ತ ಚಂದ್ರಗ್ರಹಣದ ಕನ್ಯಾ ರಾಶಿಯವರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕುರಿತು ಮಾಹಿತಿ ನೀಡಲಾಗಿದೆ. ಕನ್ಯಾ ರಾಶಿಪತಿ ಬುಧ ಗ್ರಹಣವನ್ನು ವೀಕ್ಷಿಸುತ್ತಿದ್ದಾನೆ. ಉತ್ತರ, ಹಸ್ತಾ, ಚಿತ್ತಾ ನಕ್ಷತ್ರದವರಿಗೆ ಇದು ಅನ್ವಯಿಸುತ್ತದೆ. ಗ್ರಹಣವು 1ನೇ ಮನೆ, ದುಃಸ್ಥಾನದಲ್ಲಿ ಸಂಭವಿಸುವುದರಿಂದ ಕನ್ಯಾ ರಾಶಿಯವರು ಜಾಗ್ರತೆಯಿಂದ ಇರಬೇಕು. ಅಧಿಕ ಖರ್ಚು, ಕಣ್ಣಿನ ಸಮಸ್ಯೆ, ಕಣ್ಣಿನ ಸಮಸ್ಯೆ, ನಿದ್ರಾಹೀನತೆ, ಆತಂಕ, ಮತ್ತು ಆತುರದ ನಿರ್ಧಾರಗಳಿಂದ ದೂರವಿರುವುದು ಉತ್ತಮ.
ಆದರೆ, ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗಲಿದೆ. ಸಿಕ್ಕಿಬಿದ್ದ ಹಣ ವಾಪಸ್ ಬರುತ್ತದೆ ಮತ್ತು ವಿದೇಶದಿಂದ ಶುಭ ಸುದ್ದಿಯಾಗುವ ಸಾಧ್ಯತೆ ಇದೆ. ಸಾಲದ ಆತಂಕವೂ ನಿವಾರಣೆಯಾಗಲಿದೆ. ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ತಯಾರಿಸುವುದು ಒಳ್ಳೆಯದು. ಸರ್ಕಾರಿ ನೌಕರರು, ವೈದ್ಯರುಗಳು ಶುಭ ಮತ್ತು ರೈತಾಪಿ ವರ್ಗದವರಿಗೆ ಫಲಗಳಿವೆ. ವ್ಯಾಪಾರಸ್ಥರಿಗೆ ವ್ಯಾಪಾರ ವಿಸ್ತರಣೆಯ ಸಾಧ್ಯತೆಯಿದೆ. ಗ್ರಹಣ ಕಾಲದಲ್ಲಿ ನರಸಿಂಹ ದೇವರನ್ನು ಆರಾಧಿಸುವುದು ಮತ್ತು ಗ್ರಹಣದ ನಂತರ ಪಾರ್ವತಿ ದರ್ಶನ ಮಾಡಿ ಕುಂಕುಮಾರ್ಚನೆ ಮಾಡಿಸುವುದು ಶುಭಕರ. ವಿಶೇಷವಾಗಿ ವೃದ್ಧರು, ಅನಾರೋಗ್ಯ ಪೀಡಿತರು, ಮತ್ತು ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಗುರೂಜಿ ಸಲಹೆ.
ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ