Daily Devotional: ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?

Daily Devotional: ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?


ಬೆಂಗಳೂರು, ಮಾರ್ಚ್ 03: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಈ ಗ್ರಹಣ ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ನಡೆಯುತ್ತಿದೆ. ಗ್ರಹಣದ ಸ್ಪರ್ಶ ಕಾಲವು ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ, ಮಧ್ಯಮ ಕಾಲವು ಸಂಜೆ 4 ಗಂಟೆ 29 ನಿಮಿಷಕ್ಕೆ ಮತ್ತು ಮೋಕ್ಷ ಕಾಲವು ಸಂಜೆ 6 ಗಂಟೆ 19 ನಿಮಿಷಕ್ಕೆ ಆಗಿರುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲಾಗುವುದು ಮತ್ತು ಹೆಚ್ಚು ಪ್ರಯಾಣಿಸುವುದು ಶುಭಕರವಲ್ಲ ಎಂದು ಗುರೂಜಿ ಹೇಳಿದರು.

ಗ್ರಹಣದ ಮೊದಲು ಆಹಾರ ಸೇವಿಸುವುದು, ಸ್ನಾನ ಮಾಡುವುದು ಮತ್ತು ಗ್ರಹಣದ ನಂತರ ಸ್ನಾನ ಮಾಡಿ ಪಂಚಗವ್ಯಗಳಿಂದ ಮನೆಯನ್ನು ಶುದ್ಧೀಕರಿಸುವುದು ಸಾಂಪ್ರದಾಯಿಕ ಪದ್ಧತಿ. ದರ್ಬೆ ಮತ್ತು ತುಳಸಿ ಇಡುವುದು. ಮಂತ್ರ ಜಪಗಳನ್ನು ಗ್ರಹಣ ಕಾಲದಲ್ಲಿ ಮಾಡುವುದು ಉತ್ತಮ. ಗರ್ಭಿಣಿಯರು, ವೃದ್ಧರು, ರೋಗಿಗಳು ಈ ಅವಧಿಯಲ್ಲಿ ಸಂಚಾರ ಮಾಡಿರುವುದು ಒಳ್ಳೆಯದು. ದ್ವಾದಶ ರಾಶಿಗಳ ಮೇಲೆ ಈ ಗ್ರಹಣ ವಿಭಿನ್ನ ಪರಿಣಾಮಗಳನ್ನು ಹೊಂದಿದೆ. ಮೇಷ, ಕರ್ಕಾಟಕ, ಸಿಂಹ, ಕನ್ಯಾ, ಧನುಸ್ಸು, ಮಕರ ರಾಶಿಗಳಿಗೆ ಜಾಗರೂಕತೆ ಅಗತ್ಯ, ವೃಷಭ, ಮಿಥುನ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಗಳಿಗೆ ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಗ್ರಹಣ ದೋಷಗಳಿದ್ದರೆ, ಒಂದು ವಾರದೊಳಗೆ ಶಾಂತಿ ಕರ್ಮಗಳನ್ನು ಮಾಡಿಸುವುದು ಶ್ರೇಯಸ್ಕರ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *