ವಸಾಯಿ, ನವೆಂಬರ್ 20: ಶಾಲೆಯಲ್ಲಿ ಶಿಕ್ಷಕರು ನೀಡಿದ ಶಿಕ್ಷೆಯಿಂದ ವಿದ್ಯಾರ್ಥಿನಿ(ವಿದ್ಯಾರ್ಥಿ) ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ವಸಾಯಿಯಲ್ಲಿ ನಡೆದಿದೆ. ಶಾಲೆಗೆ ತಡವಾಗಿ ಬಂದಿದ್ದಕ್ಕೆ ವಿದ್ಯಾರ್ಥಿಗೆ 100 ಬಸ್ಸು ಹೊಡೆಯುವ ಶಿಕ್ಷೆಯನ್ನು ಶಿಕ್ಷಕರು ನೀಡಿದ್ದರು. ಬಳಿಕ ಆಕೆ ಅಸ್ವಸ್ಥಳಾಗಿದ್ದರೆ, ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಣ್ಣಪ್ಪಿದ್ದಾಳೆ. ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಶಾಲಾ ಆಡಳಿತದಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಡಿಲೀಪ್ ಹೊರಡಿಸಲಾಗಿದೆ.
ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶಾಲಾ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳ ಹೇಳಿಕೆಗಳು ಸೇರಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಶಿಕ್ಷಕರನ್ನು ಬಂಧಿಸಲಾಗಿದೆ. ಶಾಲೆಯ ನಿರ್ಲಕ್ಷ್ಯವಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು.
ಬಾಲಕಿ ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಇತರ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಗೆ ಬಸ್ಸು ಹೊಡೆಯುವಂತೆ ಒತ್ತಾಯಿಸಲಾಗಿದೆ. ಮನೆಗೆ ತಲುಪಿದ ನಂತರ ಆಕೆಗೆ ಅಸ್ವಸ್ಥತೆ ಮತ್ತು ಕಾಲಿನಲ್ಲಿ ಕಾಣಿಸಿಕೊಂಡಿತು ಮತ್ತು ಅಂತಿಮವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ನವೆಂಬರ್ 13 ರಂದು ಆಕೆಯನ್ನು ಉನ್ನತ ಚಿಕಿತ್ಸೆಗೆಂದು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಲೆಗೆ ತಡವಾಗಿ ಬಂದ ಕಾರಣ ಬಸ್ಕಿಹೊಡೆಯುವ ಶಿಕ್ಷೆಯನ್ನು ಶಿಕ್ಷಕರು ನೀಡಿದ್ದರು ಅದೇ ಮಗಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಕೇವಳ ವಿದ್ಯಾರ್ಥಿನಿಮಾತ್ರವಲ್ಲಆಕೆಯ ಬ್ಯಾಗ್ ಕೂಡ ಬೆನ್ನಿಗೆ ಹಾಕಿಕೊಂಡು ಬಸ್ಕಿ ಹೊಡೆಯುವಂತೆ ಸೂಚಿಸಲಾಗಿದೆ.
ಕೆಲವು ವಿದ್ಯಾರ್ಥಿಗಳು 100, ಕೆಲವರು 50, ಕೆಲವರು 60 ಬಸ್ಕಿ ಹೊಡೆದಿದ್ದರು, ಅದೇ ರೀತಿ ನಮ್ಮ ಮಗಳು ಕೂಡ ಬಸ್ಕಿ ಹೊಡೆದಿದ್ದಳು. ಆಕೆ ಮನೆಗೆ ಬಂದಾಗ ವಿಪರೀತ ಬೆನ್ನು ನೋವೆಂದು ಹೇಳುತ್ತಾ ಮಲಗಿದವಳು ಮೇಲೆ ಏಳಲೇ ಇಲ್ಲ ಎಂದು ವಿದ್ಯಾರ್ಥಿನಿ ತಾಯಿ ಅಳಲು ತೊಡಿಕೊಡಿದ್ದಾಳೆ.
ಮತ್ತಷ್ಟು ಓದಿ: ಬೆಳಗ್ಗೆ ನನಗೆ ಬರ್ತೇನೆಂದು ತಾಯಿಗೆ ಮಾತು ಕೊಟ್ಟಿದ್ದ ಮಗಳು ಆಸ್ಪತ್ರೆಯಲ್ಲಿ ನಿಗೂಢ ಸಾವು
ಆಕೆಯ ಕಾಲುಗಳು ಊದಿಕೊಂಡಿತ್ತು ಬೆನ್ನು ನೋವುಪರೀತವಾಗಿತ್ತು, ಮೊದಲು ಆಸ್ಪತ್ರೆಗೆ ಸೇರಿಸಲಾಯಿತು ನಂತರ ಬೇರೆ ಆಸ್ಪತ್ರೆಗೆ ದಾಖಲಿಸಲಾಯಿತು.ಶಾಲೆಯು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ತನ್ನ ಮಗಳ ಸ್ಥಿತಿ ಗಂಭೀರವಾಗಿದ್ದರೂ ಶಾಲೆಯ ವೆಚ್ಚವನ್ನು ಭರಿಸಲು ಸಿದ್ಧವಿರಲಿಲ್ಲ ಎಂದು ಬಾಲಕಿಯ ತಾಯಿ ವಿವರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ