
<p> ಕರ್ಣ ಜೈಲು ಸೇರಿದ್ದಾನೆ. ಅವನನ್ನು ಪಾರು ಮಾಡಲು ‘ಬ್ರಹ್ಮಗಂಟು’, ‘ಅಮೃತಧಾರೆ’ ಸೇರಿದಂತೆ ವಿವಿಧ ಸೀರಿಯಲ್ಗಳ ನಾಯಕಿಯರು ಒಂದಾಗಿದ್ದಾರೆ. ಅವರು ಸಾಕ್ಷಿದಾರರನ್ನು ರಕ್ಷಿಸಿದ್ದು, ಕರ್ಣನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ.</p><img><p>ಕರ್ಣ ಸೀರಿಯಲ್ನಲ್ಲಿ ಇದೀಗ ಕುತಂತ್ರಿಗಳ ಕುತಂತ್ರದಿಂದ ಕರ್ಣ ಜೈಲುಪಾಲಾಗಿದ್ದಾನೆ. ಅವನನ್ನು ಈ ಕೇಸ್ನಲ್ಲಿ ಫಿಕ್ಸ್ ಮಾಡಿ, ದೊಡ್ಡ ಜೈಲಿಗೆ ಕಳುಹಿಸುವಂತೆ ಆರೋಗ್ಯ ಸಚಿವ ಪೊಲೀಸರಿಗೆ ಆರ್ಡರ್ ಕೊಟ್ಟೂ ಆಗಿದೆ. ಕರ್ಣ ತಪ್ಪು ಮಾಡದಿದ್ರೂ ಅವನನ್ನು ಫಿಕ್ಸ್ ಮಾಡುವಂತೆ ಹೇಳಲಾಗಿದೆ.</p><img><p>ಅದೇ ಇನ್ನೊಂದೆಡೆ, ಆಸ್ಪತ್ರೆಯಲ್ಲಿ ನಕಲಿ ಮಾತ್ರೆಗಳನ್ನು ಇಟ್ಟಿದ್ದು, ನಯನತಾರಾ ಆ್ಯಂಡ್ ಗ್ಯಾಂಗ್ ಎನ್ನುವುದರನ್ನು ಅರಿತಿರುವ ಮಹಿಳೆಯರನ್ನು ಕಿಡ್ನ್ಯಾಪ್ ಮಾಡಿಸಿ ಅವರನ್ನು ಕಟ್ಟಿ ಹಾಕಲಾಗಿದೆ.</p><img><p>ಕರ್ಣನನ್ನು ಜೈಲಿನಿಂದ ಬಿಡಿಸಲು ವಿವಿಧ ಸೀರಿಯಲ್ ನಾಯಕಿಯರು ಒಟ್ಟಿಗೇ ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ, ಅಮೃತಧಾರೆ ಮಲ್ಲಿ, ಅಣ್ಣಯ್ಯ ರಾಣಿ ಎಲ್ಲರೂ ಬಂದಿದ್ದಾರೆ. ಇದು ವೀಕ್ಷಕರನ್ನು ರೋಮಾಂಚನಗೊಳಿಸಿದೆ.</p><img><p>ಇದೇ ವೇಳೆ ರೌಡಿಗಳು ನಿತ್ಯಾಳನ್ನು ಸಾಯಿಸಲು ಹೋಗಿದ್ದಾರೆ. ಆ ಸಮಯದಲ್ಲಿ ಬಂದ ಉಳಿದ ಮಹಿಳಾಮಣಿಗಳು ಸೀರೆಯಲ್ಲಿಯೇ ಭರ್ಜರಿ ಫೈಟಿಂಗ್ ಮಾಡಿದ್ದಾರೆ.</p><img><p>ಅಮೃತಧಾರೆಯ ಮಲ್ಲಿ ಬಿಟ್ಟು ಉಳಿದವರೆಲ್ಲರೂ ಸೀರೆಯಲ್ಲಿಯೇ ಫೈಟಿಂಗ್ ಮಾಡಿರುವುದು ವಿಶೇಷ. ಎಲ್ಲರೂ ರೌಡಿಗಳನ್ನು ಬಗ್ಗು ಬಡಿಸಿದ್ದಾರೆ.</p><img><p>ಕಿಡ್ನ್ಯಾಪ್ ಮಾಡಿ ಇಡಲಾದ ಸಾಕ್ಷಿದಾರ ಮಹಿಳೆಯರನ್ನು ಇದೇ ನಾಯಕಿಯರು ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಇನ್ನೇನಿದ್ದರೂ ಅವರ ಬಾಯಿಯಿಂದ ಸತ್ಯ ಹೇಳಿಸುವುದು, ಕರ್ಣನನ್ನು ನಿರಪರಾಧಿ ಎಂದು ಪ್ರೂವ್ ಮಾಡುವುದು ಬಾಕಿ ಇದೆ.</p>
Source link
Karna Serial ರೋಚಕ ಎಪಿಸೋಡ್: ಸೀರೆಯುಟ್ಟ ನೀರೆಯರ ಭರ್ಜರಿ ಫೈಟಿಂಗ್- ಹಾರಿ ಹಾರಿ ಬಿದ್ದ ರೌಡಿಗಳು!