
ರೈತ ಬಸವಣ್ಣ ಸುಮ್ಮನೆ ಈ ಬೆಳೆ ಬೆಳೆದಿರಲಿಲ್ಲ. ಒಂದೆಡೆ ಪಾತಾಳಕ್ಕೆ ಕುಸಿದಿರುವ ಅಂತರ್ಜಲ, ಮತ್ತೊಂದೆಡೆ ಕಾಡು ಹಂದಿಗಳ ಕಾಟ, ಇದರ ನಡುವೆ ಅಸಮರ್ಪಕ ವಿದ್ಯುತ್ ಪೂರೈಕೆಯ ಕಣ್ಣಾಮುಚ್ಚಾಲೆ. ಇಷ್ಟೆಲ್ಲಾ ಸವಾಲುಗಳ ನಡುವೆ ನಿದ್ದೆಗೆಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ ಹೂಕೋಸು ಬೆಳೆದಿದ್ದರು. ಬೆಳೆಯೂ ಅದ್ಭುತವಾಗಿ ಬಂದಿತ್ತು, ಆದರೆ ಅದೃಷ್ಟ ಮಾತ್ರ ಕೈಕೊಟ್ಟಿದೆ. ಹೂಕೋಸು ಮಾತ್ರವಲ್ಲದೆ ಟೊಮ್ಯಾಟೊ, ಸಣ್ಣ ಈರುಳ್ಳಿ, ಬೀಟ್ ರೂಟ್ ಬೆಳೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಾರುಕಟ್ಟೆಯಲ್ಲಿ ಕೇಳುವವರಿಲ್ಲದಂತಾಗಿದೆ.