ಜೈಲಿಗೆ ಬಂದ ಆರೋಗ್ಯ ಸಚಿವ! ಕೇಸ್​ನಲ್ಲಿ ಫಿಕ್ಸ್​- ಭ್ರಷ್ಟ ರಾಜಕಾರಣಿಗಳ ಬಟಾ ಬಯಲು ಮಾಡ್ತಿದ್ಯಾ Karna Serial?

ಜೈಲಿಗೆ ಬಂದ ಆರೋಗ್ಯ ಸಚಿವ! ಕೇಸ್​ನಲ್ಲಿ ಫಿಕ್ಸ್​- ಭ್ರಷ್ಟ ರಾಜಕಾರಣಿಗಳ ಬಟಾ ಬಯಲು ಮಾಡ್ತಿದ್ಯಾ Karna Serial?



ಜೈಲಿಗೆ ಬಂದ ಆರೋಗ್ಯ ಸಚಿವ! ಕೇಸ್​ನಲ್ಲಿ ಫಿಕ್ಸ್​- ಭ್ರಷ್ಟ ರಾಜಕಾರಣಿಗಳ ಬಟಾ ಬಯಲು ಮಾಡ್ತಿದ್ಯಾ Karna Serial?
<p>ಜೀ ಕನ್ನಡದ ‘ಕರ್ಣ’ ಧಾರಾವಾಹಿಯ ಕೆಲವ ದೃಶ್ಯಗಳು ಸದ್ದು ಮಾಡುತ್ತಿದೆ. ಅವಧಿ ಮೀರಿದ ಮಾತ್ರೆಗಳ ಪ್ರಕರಣದಲ್ಲಿ ಜೈಲು ಸೇರಿರುವ ಕರ್ಣನ ವಿರುದ್ಧ ಆರೋಗ್ಯ ಸಚಿವರೇ ಪಿತೂರಿ ನಡೆಸಿ, ಆತನನ್ನು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.</p><img><p>ಒಂದು ಸೀರಿಯಲ್​ ಎಂದರೆ, ಅದರಲ್ಲಿ ಸಮಾಜದ ವಿವಿಧ ಮುಖಗಳನ್ನು ತೋರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ದೃಶ್ಯಗಳು ನೆಗೆಟಿವ್​ ರೂಪದಲ್ಲಿ ವೀಕ್ಷಕರ ಮನಸ್ಸಿನ ಮೇಲೆ ನಾಟುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಸಾಕಷ್ಟು ಟೀಕೆಗಳು ಬಂದರೆ, ಒಳ್ಳೆಯ ದೃಶ್ಯಗಳಿಗೆ ಉತ್ತಮ ಪ್ರತಿಕ್ರಿಯೆಯೂ ಬರುತ್ತದೆ.</p><img><p>ಅದೇ ರೀತಿ ಜೀ ಕನ್ನಡದ ಕರ್ಣ ಸೀರಿಯಲ್​ (Karna Serial) ಬಗ್ಗೆ ಇದಾಗಲೇ ಹಲವಾರು ರೀತಿಯಲ್ಲಿ ಪರ- ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಕೆಲವೊಮ್ಮೆ ಆ ಪಾತ್ರಗಳನ್ನು ಮಾಡುವ ನಟ-ನಟಿಯರ ಮೇಲೂ ಇದು ಪರಿಣಾಮ ಬೀರುತ್ತದೆ. ಇದೊಂದು ಸೀರಿಯಲ್​, ಅವರು ಪಾತ್ರಧಾರಿಗಳು ಎನ್ನುವುದನ್ನೂ ಮರೆತು ಜನರು ವೈಯಕ್ತಿಕವಾಗಿಯೇ ತೆಗೆದುಕೊಳ್ಳುವುದೂ ಇದೆ.</p><img><p>ಈ ಸೀರಿಯಲ್​ನ ವಿಲನ್​ ರಮೇಶ್​ (ನಟ ಟಿ. ನಾಗಾಭರಣ) ಕಸದ ಬುಟ್ಟಿಯಲ್ಲಿ ಅನ್ನ ಚೆಲ್ಲುವುದು, ಕರ್ಣನಿಗೆ ಆಹಾರ ಸಿಗದಂತೆ ಉಳಿದ ಆಹಾರ ಚೆಲ್ಲಲು ಪತ್ನಿಯನ್ನು ಪ್ರೇರೇಪಿಸಿದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಕೆಲವರು ನೇರವಾಗಿ ನಟನ ವಿರುದ್ಧವೇ ಅಸಮಾಧಾನವನ್ನು ಸೋಷಿಯಲ್​ ಮೀಡಿಯಾದಲ್ಲಿ ಹೊರ ಹಾಕಿದ್ದು ಇವೆ.</p><img><p>ಆ ಬಳಿಕ ರಮೇಶ್​ ಸೇರಿದಂತೆ ಇತರ ವಿಲನ್​ಗಳಾದ ನಯನತಾರಾ, ಸಂಜಯ್​ ಎಲ್ಲಾ ಸೇರಿ ಡೇಟ್​ ಬಾರ್​ ಆಗಿರೋ ಮಾತ್ರೆಗಳನ್ನು ಇಟ್ಟು, ರೋಗಿಗಳನ್ನು ಸಾಯಿಸಿರುವುದು ಕೂಡ ಸಾಕಷ್ಟು ಟ್ರೋಲ್​ ಆಗುತ್ತಿದೆ. ಕರ್ಣನ ಹೆಸರಿಗೆ ಮಸಿ ಬಳಿಯುವ ನೆಪದಲ್ಲಿ ಈ ರೀತಿ ವರ್ತಿಸಿರುವ ದೃಶ್ಯದ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿವೆ. ಆದರೆ, ಸೀರಿಯಲ್​ನಲ್ಲಿ ಸದ್ಯ ಇದೇ ಕಾರಣಕ್ಕೆ ಕರ್ಣ ಜೈಲುಪಾಲಾಗಿದ್ದಾನೆ.</p><img><p>ಆದರೆ, ಇದೇ ವೇಳೆ ಕೆಲವು ದುಷ್ಟ, ಭ್ರಷ್ಟ ರಾಜಕಾರಣಿಗಳನ್ನು ಅನಾವರಣಗೊಳಿಸುತ್ತಿದೆ ಈ ಸೀರಿಯಲ್​ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ, ಕರ್ಣ ಸೀರಿಯಲ್​ನಲ್ಲಿ, ಜೈಲುಪಾಲಾಗಿರುವ ಕರ್ಣನನ್ನು ನೋಡಲು ಸೀರಿಯಲ್​ನ ಆರೋಗ್ಯ ಸಚಿವ ಜೈಲಿಗೆ ಬಂದಿರುವುದು.</p><img><p>ಪೊಲೀಸ್​ ಬಳಿ ಈ ಸೀರಿಯಲ್​ ಆರೋಗ್ಯ ಸಚಿವ, ಈ ವಿಷಯದಲ್ಲಿ ಕರ್ಣನ ತಪ್ಪು ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಈತನಿಗೆ ಸಿಕ್ಕಾಪಟ್ಟೆ ಕಠಿಣ ಶಿಕ್ಷೆ ಆಗುವ ಹಾಗೆ ಮಾಡಬೇಕು. ಈ ಕೇಸ್​ನಲ್ಲಿ ಇವನನ್ನು ಫಿಕ್ಸ್ ಮಾಡಬೇಕು. ದೊಡ್ಡ ಜೈಲಿನಲ್ಲಿ ಇವನನ್ನು ಇಡುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ಪೊಲೀಸ್​ ಅಧಿಕಾರಿಗೆ ಹೇಳಿ ಹೋಗುತ್ತಾನೆ.</p><img><p>ಅಲ್ಲಿಗೆ ಈ ಸೀರಿಯಲ್​ ಆರೋಗ್ಯ ಸಚಿವ ರಮೇಶ್​, ನಯನತಾರಾ ಪರವಾಗಿ ಅಲ್ಲಿಗೆ ಬಂದಿದ್ದಾನೆ. ಆ ವಿಲನ್​ಗಳ ನಿಯತ್ತಿನ ಮನುಷ್ಯನಾಗಿ ಕರ್ಣನನ್ನು ಫಿಕ್ಸ್​ ಮಾಡಲು ನೋಡುತ್ತಿದ್ದಾರೆ. ರೌಡಿಗಳ, ವಿಲನ್​ಗಳು, ಆಗರ್ಭ ಶ್ರೀಮಂತರ ಕೈಯಾಳಾಗಿರುವ ವ್ಯಕ್ತಿಯಾಗಿ ಈ ರಾಜಕಾರಣಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಎನ್ನುವ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ ನಿಜ ಜೀವನದಲ್ಲಿಯೂ ಇಂಥ ಅದೆಷ್ಟೋ ಘಟನೆಗಳು, ಪ್ರಕರಣಗಳು ಕಣ್ಣಾರೆ ಕಾಣುತ್ತೇವೆ ಅಲ್ಲವೇ ಎನ್ನುವುದು ಅವರ ಪ್ರಶ್ನೆ.</p>



Source link

Leave a Reply

Your email address will not be published. Required fields are marked *