ಬೆಂಗಳೂರು, ಡಿಸೆಂಬರ್ 08: ಹಸಿರು ಬಣ್ಣವು ಬುಧ ಗ್ರಹದ ಸಂಕೇತವಾಗಿದೆ, ಇದು ಮನೆಯಲ್ಲಿ ಧನಾತ್ಮಕ ಶಕ್ತಿ, ಶಾಂತಿ ಮತ್ತು ಸಂತೋಷವನ್ನು ತರುತ್ತದೆ. ಮನಿ ಪ್ಲಾಂಟ್ ಕೇವಲ ಸೌಂದರ್ಯಕ್ಕಾಗಿ, ವಾಸ್ತು ಪ್ರಕಾರ ಶುಭ ಫಲಗಳನ್ನು ನೀಡಲಾಗುತ್ತದೆ. ಇದನ್ನು ಕಚೇರಿ ಅಥವಾ ಮನೆಗಳಲ್ಲಿ ಇಡುವುದರಿಂದ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.
ಮನಿ ಪ್ಲಾಂಟ್ ಅನ್ನು ಒಣಗಿಸದಂತೆ ನೋಡಿಕೊಳ್ಳಬೇಕು, ನಿರಂತರವಾಗಿ ನೀರು ಹಾಕಬೇಕು. ಇದನ್ನು ಟೆರೇಸ್ ಅಥವಾ ಬಾಲ್ಕನಿಗಳಲ್ಲಿ ಇಡುವುದು ಅತ್ಯಂತ ಶುಭ. ಪ್ರವೇಶ ದ್ವಾರದ ಬಳಿ, ಅಡುಗೆ ಮನೆ, ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು. ಹಾಗೆಯೇ, ಮನಿ ಪ್ಲಾಂಟ್ ಅನ್ನು ಉಡುಗೊರೆಯಾಗಿ ನೀಡಬಾರದು ಅಥವಾ ಯಾರಿಂದಲೂ ಸ್ವೀಕರಿಸಬಾರದು; ಅದನ್ನು ನರಸರಿಯಿಂದ ಖರೀದಿಸಬೇಕು. ಬಳ್ಳಿ ಯಾವಾಗಲೂ ಮೇಲ್ಮುಖವಾಗಿ ಬೆಳೆಯುವಂತೆ ವ್ಯವಸ್ಥೆ ಮಾಡಬೇಕು. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.