
<p>Mouna Guddemane: ಕಲರ್ಸ್ ಕನ್ನಡದಲ್ಲಿನ ‘ರಾಮಾಚಾರಿ’ ಧಾರಾವಾಹಿ ಮುಗಿಯುತ್ತಿದ್ದಂತೆ, ಇದೀಗ ನಾಯಕಿ ಚಾರು ಆಲಿಯಾಸ್ ಮೌನ ಗುಡ್ಡೆಮನೆ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಹೌದು, ಇದೀಗ ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿಯಲ್ಲಿ ಮೌನ ನಾಯಕಿಯಾಗಿ ನಟಿಸುತ್ತಿದ್ದಾರೆ.</p><img><p>ಮೌನ ಗುಡ್ಡೆಮನೆ ಎನ್ನುವ ಹೆಸರಿಗಿಂತ ಕಿರುತೆರೆಯ ಪ್ರೇಕ್ಷಕರಿಗೆ ಚಾರು ಆಗಿ ಪರಿಚಿತರಾದವರು ಇವರು. ‘ರಾಮಾಚಾರಿ’ ಧಾರಾವಾಹಿಯ ಚಾರು ಪಾತ್ರ ಎಷ್ಟೊಂದು ಸ್ಟ್ರಾಂಗ್ ಆಗಿತ್ತೆಂದರೆ, ಯಾವಾಗಲೂ ಜನ ಮೌನ ಅವರನ್ನು ಚಾರು ಅಂತಾನೆ ಗುರುತಿಸುವರು. ಆದರೆ ಇದೀಗ ಮೌನಗೆ ಬಂಪರ್ ಆಫರ್ ಸಿಕ್ಕಿದೆ.</p><img><p>ರಾಮಾಚಾರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಬೆಡಗಿ ಮೌನ ಗುಡ್ಡೆಮನೆ. ಈ ಧಾರಾವಾಹಿಯಲ್ಲಿ ಸೊಕ್ಕಿನ ಬೆಡಗಿ ಚಾರು ಆಗಿ, ಬಳಿಕ ಪ್ರೇಮಿಯಾಗಿ, ನಂತರ ನಾರಾಯಣಾಚಾರ್ಯರ ಮನೆಯ ಮುದ್ದಿನ ಸೊಸೆಯಾಗಿ, ಕೊನೆಗೆ ಮುದ್ದು ಮಗುವಿನ ತಾಯಿಯಾಗುವಲ್ಲಿವರೆಗೂ ಮೌನ ಒಂದೇ ಧಾರಾವಾಹಿಯಲ್ಲಿ ವಿಭಿನ್ನ ರೀತಿಯ ಪಾತ್ರ ಬದಲಾವಣೆ ಮೂಲಕ ಗಮನ ಸೆಳೆದಿದ್ದರು.</p><img><p>ಇದೀಗ ರಾಮಾಚಾರಿ ಧಾರಾವಾಹಿ ಇತ್ತೀಚೆಗಷ್ಟೇ ಮುಗಿದಿದ್ದು, ಒಂದು ಸೀರಿಯಲ್ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆಗೆ ಭರ್ಜರಿ ಆಫರ್ ಸಿಕ್ಕಿದೆ. ಹಾಗಂತ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೊಶಿಯಲ್ ಮೀಡಿಯಾ ಮಾಹಿತಿ ಪ್ರಕಾರ ಈ ಮಾಹಿತಿ ಕನ್ಫರ್ಮ್ ಆಗಿದೆ.</p><img><p>ಕಲರ್ಸ್ ಕನ್ನಡದಲ್ಲಿ ಮಿಂಚಿದ ಬಳಿಕ, ಇದೀಗ ಜೀ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಮೌನ ಗುಡ್ಡೆಮನೆ. ಜೀಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.</p><img><p>ಈ ಹೊಸ ಸೀರಿಯಲ್ ಗೆ ನಾಯಕನಾಗಿ ‘ಒಲವಿನ ನಿಲ್ದಾಣ’ ಧಾರಾವಾಹಿ ನಾಯಕ, ಅಕ್ಷಯ್ ನಾಯಕ್ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ‘ಅಯ್ಯನ ಮನೆ’ ವೆಬ್ ಸೀರೀಸ್ ನಲ್ಲೂ ಸಹ ನಟಿಸಿದ್ದರು. ಶೀಘ್ರದಲ್ಲೇ ಸೀರಿಯಲ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.</p><img><p>ಮೌನ ಗುಡ್ಡೆಮನೆ ಮತ್ತೆ ಸೀರಿಯಲ್ ನಲ್ಲಿ ನಟಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಆದಷ್ಟು ಬೇಗ ಸೀರಿಯಲ್ ಶುರುವಾಗಲಿ ಎಂದು ಹಾರೈಸಿದ್ದಾರೆ. ಆದರೆ ಸೀರಿಯಲ್ ಯಾವಾಗ? ಎಷ್ಟು ಗಂಟೆಗೆ ಶುರು ಅನ್ನೋದು ಮಾತ್ರ ಗೊತ್ತಿಲ್ಲ.</p>
Source link
ಇದಪ್ಪಾ ಲಕ್ ಅಂದ್ರೆ…. ‘ರಾಮಾಚಾರಿ’ ಮುಗಿಯುತ್ತಿದ್ದಂತೆ ಹೊಸ ಸೀರಿಯಲ್ ನಾಯಕಿಯಾದ Mouna Guddemane