
ಬೆಳಗಾವಿ, (ಏಪ್ರಿಲ್ 10): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಂತ್ಯವಾಗಿದ್ದು, ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಸೋಲು ಗೆಲುವಿನ ಬಗ್ಗೆ ಜೋರಾಗಿ ನಡೆದಿವೆ. ಇನ್ನೊಂದೆಡೆ ರಾಜಕೀಯ ನಾಯಕರು ಸಹ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ನಡುವೆ ದಾವಣಗೆರೆಯಲ್ಲಿ ಮುಸ್ಲಿಂ ಮತಗಳು ಕೈಕೊಟ್ಟಿರುವ ಬಗ್ಗೆ ಚರ್ಚೆಯಾಗುತ್ತಿದೆ, ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಅಲ್ಪಸಂಖ್ಯಾತ ಮುನಿಸು ಲೀಡ್ ಮೇಲೆ ಪರಿಣಾಮ ಬೀರಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ದಾವಣಗೆರೆಯಲ್ಲಿ ಶೇಕಡಾ 20ರಷ್ಟು ಕಮ್ಮಿ ಆಗಲಿದೆ. ಅಲ್ಪಸಂಖ್ಯಾತ ಮುನಿಸು ಲೀಡ್ ಮೇಲೆ ಪರಿಣಾಮ ಬೀರಲಿದೆ. ಡ್ಯಾಮೆಜ್ ಅವರನ್ನು ಸಚಿವರಾದ ಮಲ್ಲಿಕಾರ್ಜುನ ಸರಿಪಡಿಸಬೇಕು. ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಎಲ್ಲರನ್ನು ತೆಗೆದುಕೊಳ್ಳುವ ಕೆಲಸ ಮಾಡಬೇಕು ಎಂದು ಸಲಹೆ.