ಮೈಸೂರು, (ನವೆಂಬರ್ 17): ಮೈಸೂರು-ಚಾಮರಾಜನಗರ ಭಾಗದಲ್ಲಿ ಮನಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಕಾಡಂಚಿನ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು, ಮನೆಯಿಂದ ಆಚೆ ಬರ ಪರಿಸ್ಥಿತಿ. ಹೀಗಾಗಿ ಇದಕ್ಕೆ ಕಡಿವಾಳ ಹಾಕಲು ಅರಣ್ಯ ಇಲಾಖೆ ಒಂದು ವಿನೂತನ ಕ್ರಮಕ್ಕೆ ಮುಂದಾಗಿದೆ. ಹೌದು…ಹುಲಿಗಳು ಮನಷ್ಯರ ಮೇಲೆ ದಾಳಿ ಮಾಡದಂತೆ ಕ್ರಮಕೈಗೊಳ್ಳಬೇಕು, ಮಾನವ ಮುಖವಾಡದ ಮಾಸ್ಕ್ ಅನ್ನು ಜನರು ತಮ್ಮ ತಲೆಯ ಹಿಂದೆ ಧರಿಸುತ್ತಾರೆ. ಇನ್ನು ಇದು ಹೇಗೆ ವರ್ಕ್ ಆಗುತ್ತೆ ಎನ್ನುವುದನ್ನು ಟಿವಿ9ಗೆ ಮೈಸೂರು ಡಿಸಿಎಫ್ ಪರಮೇಶ್ವರ್ ವಿವರಿಸಿದ್ದಾರೆ.