Naa Ninna Bidalaare Kannada Serial: ಗುರು ಶಂಭು ಎದುರು ಸೋತ ಬಳಿಕ ಹತಾಶಳಾಗಿರುವ ಆಕೆ, ತನ್ನ ಸೋಲಿಗೆ ಉತ್ತರ ಕಂಡುಕೊಳ್ಳಲು ಪಣತೊಟ್ಟಿದ್ದಾಳೆ. ಮಾಳವಿಕಾಳ ವಾಪಸಾತಿಯಿಂದ ಧಾರಾವಾಹಿಯು ಮತ್ತೆ ರೋಚಕ ತಿರುವು ಪಡೆದುಕೊಂಡಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
2 Min read
16

Image Credit : Naa Ninna Bidalaare FB
ದೂರವಾಗಿದ್ದ ಮಾಳವಿಕಾ ಪಾತ್ರ
ಶರತ್ ಮತ್ತ ದುರ್ಗಾ ಬಳಿಕ ಸೀರಿಯಲ್ನಿಂದ ದೂರವಾಗಿದ್ದ ಮಾಳವಿಕಾ ಪಾತ್ರ ಮತ್ತೆ ಮುನ್ನಲೆಗೆ ಬಂದಿದೆ. ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಮಾಳವಿಕಾ ಪಾತ್ರದ ಅನುಪಸ್ಥಿತಿಯಿಂದ ಧಾರಾವಾಹಿ ಉಪ್ಪಿಲ್ಲದ ಊಟದಂತಾಗಿತ್ತು. ಮಾಳವಿಕಾ ಆಗಮನದಿಂದ ಧಾರಾವಾಹಿಗೆ ಜೋಶ್ ಸಿಕ್ಕಿದೆ. ಮಾಳವಿಕಾ ಆಗಮನದಿಂದ ಸೀರಿಯಲ್ ವೀಕ್ಷಕರು ಖುಚಿಗೊಂಡಿದ್ದಾರೆ.
26
Image Credit : Zee Kannada FB
ಸೋತಿರುವ ಮಾಳವಿಕಾ
ಗುರು ಶಂಭು ಮುಂದೆ ಹೀನಾಯವಾಗಿ ಸೋತಿರುವ ಮಾಳವಿಕಾ, ಅಮ್ಮನ ಬಳಿ ಮುಂದೆ ತನ್ನ ಸೋಲಿನ ಬಗ್ಗೆ ಹೇಳಿಕೊಂಡಿದ್ದಾಳೆ. ಗುರು ಶಂಭು ಮುಂದೆ ನನ್ನ ದಾಳಗಳೆಲ್ಲಾ ಸೋಲುತ್ತಿವೆ. ಇದಕ್ಕೆ ಉತ್ತರ ಸಿಗೋವರೆಗೂ ನಾನು ಇಲ್ಲಿಂದ ಹೋಗಲ್ಲ ಎಂದು ಮಾಳವಿಕಾ ಪಟ್ಟು ಹಿಡಿದು ಕುಳಿತಿದ್ದಾಳೆ.
36
Image Credit : Zee Kannada FB
ಬಲಶಾಲಿ, ಪ್ರಚಂಡ
ನನ್ನ ಮುಂದೆ ಶಂಭು ಬಂದಾಗ ಆತ ಎಷ್ಟು ಬಲಶಾಲಿ, ಪ್ರಚಂಡ ಅಂತ ಗೊತ್ತಾಗುತ್ತದೆ. ನಾನು ಅವನ ಮುಂದೆ ಹೀನಾಯವಾಗಿ ಸೋತಿದ್ದೇನೆ ಅಮ್ಮ. ಎಲ್ಲವೂ ನಮ್ಮ ಪರವಾಗಿಯೇ ನಡೆಯುತ್ತೆ ಅಂದ್ಕೊಂಡಿದ್ದೆ. ಶರತ್-ಮಾಯಾ ಮದುವೆ ಬಳಿಕ ಅಂಬಿಕಾ ಆತ್ಮದ ಶಕ್ತಿ ಕಡಿಮೆ ಮಾಡುವ ನಮ್ಮ ಗುರಿ ಸೋತಿದೆ ಎಂದು ಅಮ್ಮನ ಮುಂದೆ ಮಾಳವಿಕಾ ತನ್ನ ಹತಾಶೆಯನ್ನು ಹೇಳಿಕೊಂಡಿದ್ದಾಳೆ.
46
Image Credit : Zee Kannada FB
ನೆಟ್ಟಿಗರು ಹೇಳಿದ್ದೇನು?
ಮಾಳವಿಕಾ ಆಗಮನದ ವಿಡಿಯೋವನ್ನು ಜೀ ಕನ್ನಡ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇಲ್ಲಿ ಸೋತಿರೋದು ಮಾಳವಿಕಾ & ಗೆದ್ದೀರೋಧು ಶಂಭು ಅಲ್ಲಾ. ಅಧರ್ಮ ಸೋತು ಧರ್ಮ ಗೆದ್ದಿದೆ. ದುಷ್ಟ ಶಕ್ತಿಗಳ ವಿರುದ್ಧ ದೈವಶಕ್ತಿಗೆ ಜಯ ಸಿಕ್ಕಿದೆ ಅಷ್ಟೇ. ಮಾಳವಿಕ ಕುತಂತ್ರ ಯಾವತ್ತೂ ಫಲಿಸಬಾರದು. ಕೊಲ್ಲುವರಗಿಂತ ಕಾಯುವರು ಹೆಚ್ಚು ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
56
Image Credit : Zee Kannada FB
ವಿಲನ್ ಪಾತ್ರ
66
Image Credit : Zee Kannada FB
ಅಪ್ಪನಿಗೆ ಮಗಳ ಸಲಹೆ