
ಮಾಳವಿಕಾ ತನ್ನ ಮಾಯಾಜಾಲದಿಂದ ಹಿತಾಳನ್ನು ಬಲಿ ಕೊಡಲು ಮುಂದಾಗುತ್ತಾಳೆ. ಈ ವೇಳೆ ಶರತ್ ಮೇಲೆ ಗೂಂಡಾಗಳು ದಾಳಿ ಮಾಡುವುದನ್ನು ಕಂಡು ಹಿತಾ ‘ಅಪ್ಪಾ’ ಎಂದು ಕೂಗಿ ಮೂರ್ಛೆ ಹೋಗುತ್ತಾಳೆ. ಮಗಳ ರಕ್ಷಣೆಗಾಗಿ ಶರತ್ ಕಾಳಿಯ ಅವತಾರ ತಾಳಿ, ಮಾಯಾಜಾಲವನ್ನು ಭೇದಿಸಲು ಸಿದ್ಧನಾಗುತ್ತಾನೆ.<img><p>ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ ರೋಚಕ ಘಟ್ಟ ತಲುಪಿದೆ. ಮಾಳವಿಕಾ ತನ್ನ ಮಾಯಾಜಾಲದಲ್ಲಿ ಅಂಬಿಕಾ, ದುರ್ಗಾ ಮತ್ತು ಹಿತಾಳನ್ನು ಬಂಧಿಸಿದ್ದಾಳೆ.</p><img><p>ಹಿತಾಳ ಬ*ಲಿ ಕೊಡುವುದಕ್ಕಾಗಿ ಅವಳನ್ನು ಮಾಯಾಜಾಲದಲ್ಲಿ ಸಿಲುಕಿಸಿ, ಅಂಬಿಕಾ ದನಿಯಿಂದ ಅವಳನ್ನು ಕರೆದಿದ್ದಾಳೆ. ಅಮ್ಮನೇ ಕರೆಯುತ್ತಿದ್ದಾಳೆ ಎಂದುಕೊಂಡ ಹಿತಾ ಆ ದನಿ ಬಂದ ಕಡೆಗೆ ಹೋಗುತ್ತಿದ್ದಾಳೆ.</p><img><p>ಅಷ್ಟರಲ್ಲಿಯೇ ಹಿತಾ ಒಬ್ಬಳೇ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಶರತ್ ಅವಳನ್ನು ತಡೆಯಲು ಹೋದಾಗ, ಅವಳು, ನಿನಗೆ ನನ್ನ ಅಮ್ಮನ ಜೊತೆ ಇರಲು ಇಷ್ಟವಿಲ್ಲ. ಅದಕ್ಕೇ ತಡೆಯುತ್ತಿರುವೆ ಎಂದು ಬೈದಿದ್ದಾಳೆ.</p><img><p>ಅದೇ ಸಮಯದಲ್ಲಿ ಮಾವಳಿಕಾ ಕಳುಹಿಸಿದ ಗೂಂಡಾಗಳು ಶರತ್ ಮೇಲೆ ಹಲ್ಲೆ ಮಾಡಿದಾಗ, ಆತ ಬೀಳುತ್ತಾನೆ. ಹಿತಾ ಜೋರಾಗಿ ಅಪ್ಪಾ ಎಂದು ಕೂಗಿ ಅವಳೂ ಮೂರ್ಚೆ ಹೋಗುತ್ತಾಳೆ.</p><img><p>ಅಪ್ಪಾ ಎಂಬ ದನಿ ಎಷ್ಟೋ ವರ್ಷಗಳ ಬಳಿಕ ಮಗಳ ಬಾಯಿಂದ ಕೇಳುತ್ತಲೇ ಶರತ್ಗೆ ದೇವಿಯ ಕರುಣೆ ಆಗುತ್ತದೆ. ಮಗಳನ್ನು ಕಾಪಾಡುವುದಕ್ಕಾಗಿ ಶರತ್ ಕಾಳಿಯ ಅವತಾರ ಎತ್ತುತ್ತಾನೆ.</p><img><p>ಕಾಳಿ ಎಂದರೆ ಸ್ತ್ರೀ ಎನ್ನುವ ಮಾತು ಇದ್ದರೂ, ಇಲ್ಲಿ, ಮಗಳ ರಕ್ಷಣೆಗೆ ಅಪ್ಪನೇ ಅಮ್ಮನಾಗಿ ಹಿತಾಳ ಪ್ರಾಣ ಕಾಪಾಡುವಂತೆ ತೋರಿಸಲಾಗಿದೆ. ಮೈ ನವಿರೇಳುವ ರೋಚಕ ಸಂಚಿಕೆ ಇದಾಗಿದೆ.</p>
Source link
Naa Ninna Bidalaare: ಮಗಳ ರಕ್ಷಣೆಗೆ ಕಾಳಿ ಅವತಾರವೆತ್ತಿದ ಶರತ್- ಮೈ ಝುಂ ಎನ್ನುವ ರೋಚಕ ಸಂಚಿಕೆ