ಎಲ್ಲರಿಗೂ ಗುಡ್​ಬೈ, ಮತ್ತೆ ಸಿಗುತ್ತೇನೋ ಗೊತ್ತಿಲ್ಲ: ವಿದಾಯದ ಪೋಸ್ಟ್​ ಹಾಕಿದ ಗುಳಿಕೆನ್ನೆ ಚೆಲುವೆ! ಫ್ಯಾನ್ಸ್​ ಶಾಕ್​

ಎಲ್ಲರಿಗೂ ಗುಡ್​ಬೈ, ಮತ್ತೆ ಸಿಗುತ್ತೇನೋ ಗೊತ್ತಿಲ್ಲ: ವಿದಾಯದ ಪೋಸ್ಟ್​ ಹಾಕಿದ ಗುಳಿಕೆನ್ನೆ ಚೆಲುವೆ! ಫ್ಯಾನ್ಸ್​ ಶಾಕ್​



ಎಲ್ಲರಿಗೂ ಗುಡ್​ಬೈ, ಮತ್ತೆ ಸಿಗುತ್ತೇನೋ ಗೊತ್ತಿಲ್ಲ: ವಿದಾಯದ ಪೋಸ್ಟ್​ ಹಾಕಿದ ಗುಳಿಕೆನ್ನೆ ಚೆಲುವೆ! ಫ್ಯಾನ್ಸ್​ ಶಾಕ್​
<p>"ಕ್ಯಾಂಡಿ ಶಾಪ್" ವಿಡಿಯೋದಿಂದಾಗಿ ಟ್ರೋಲ್‌ಗೆ ಒಳಗಾದ ಗಾಯಕಿ, ಗುಳಿ ಕೆನ್ನೆ ಚೆಲುವೆ ನೇಹಾ ಕಕ್ಕರ್, ಸೋಷಿಯಲ್ ಮೀಡಿಯಾದಲ್ಲಿ ಶಾಕಿಂಗ್ ಪೋಸ್ಟ್ ಹಾಕಿದ್ದಾರೆ. ಅವರು ಸೆಲೆಬ್ರಿಟಿ ಜೀವನದಿಂದ ವಿರಾಮ ತೆಗೆದುಕೊಳ್ಳುತ್ತಿದ್ದು, ತಮ್ಮ ಫೋಟೋ ತೆಗೆಯದಂತೆ ಪಾಪರಾಜಿಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ</p><img><p>ಸಹೋದರನ ಜೊತೆಗೂಡಿ ಲಾಲಿಪಾಪ್​ ಲಾಲಿಪಾಪ್​ ಎಂಬ "ಕ್ಯಾಂಡಿ ಶಾಪ್" ವಿಡಿಯೋ ಶೇರ್​ ಮಾಡಿ, ಅಶ್ಲೀಲ ಎನ್ನುವ ಕಾರಣಕ್ಕೆ ಸಕತ್​ ಟ್ರೋಲ್​ಗೆ ಒಳಗಾಗಿದ್ದ ಖ್ಯಾತ ಗಾಯಕ ನೇಹಾ ಕಕ್ಕರ್​ ಇದೀಗ ಶಾಕಿಂಗ್​ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇವರು ಹಾಕಿರುವ ಈ ಪೋಸ್ಟ್​ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಲಾಗುತ್ತಿದೆ. ಅಷ್ಟಕ್ಕೂ, ನೇಹಾ ಅವರು ಎಲ್ಲರಿಗೂ ಗುಡ್​​ಬೈ, ಮತ್ತೆ ಸಿಗುತ್ತೇನೋ ಇಲ್ಲವೋ ಎಂದು ತಿಳಿಸಿದ್ದಾರೆ.</p><img><p>ಇತ್ತೀಚೆಗೆ ತನ್ನ ಸಹೋದರ ಟೋನಿ ಕಕ್ಕರ್ ಅವರೊಂದಿಗೆ ಮಾಡಿದ "ಕ್ಯಾಂಡಿ ಶಾಪ್" ವಿಡಿಯೋದಿಂದ ಸಾಮಾಜಿಕ ಮಾಧ್ಯಮದಲ್ಲಿ ಬಂದ ಟ್ರೋಲಿಂಗ್ ಮತ್ತು ಟೀಕೆಗಳಿಂದಾಗಿ ಈ ನಿರ್ಧಾರಕ್ಕೆ ಅವರು ಬಂದಿದ್ದಾರೆ. ಜನಮನದಿಂದ ದೂರವೇ ಉಳಿಯಲು ನಿರ್ಧರಿಸಿದ್ದಾರೆ.</p><img><p>ಸೆಲೆಬ್ರಿಟಿ ಲೈಫ್​ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಹಂಚಿಕೊಂಡಿರುವ ಪೋಸ್ಟ್​ ಭಾರಿ ವೈರಲ್​ ಆಗುತ್ತಿದೆ. ಪ್ರಸ್ತುತ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜವಾಬ್ದಾರಿಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ವಿವರಿಸಿದ್ದಾರೆ.</p><img><p>"ಪಾಪರಾಜಿಗಳು ಮತ್ತು ಅಭಿಮಾನಿಗಳು ನನ್ನ ಫೋಟೋ, ವಿಡಿಯೋ ಚಿತ್ರೀಕರಿಸದಿರುವಂತೆ ನಾನು ವಿನಂತಿಸುತ್ತೇನೆ. ನೀವು ನನ್ನ ಗೋಪ್ಯತೆಯನ್ನು ಗೌರವಿಸುತ್ತೀರಿ ಮತ್ತು ಈ ಜಗತ್ತಿನಲ್ಲಿ ನನ್ನನ್ನು ಮುಕ್ತವಾಗಿ ಬದುಕಲು ಬಿಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.</p><img><p>ದಯವಿಟ್ಟು ಕ್ಯಾಮರಾಗಳು ಬೇಡ, ನಾನು ವಿನಂತಿಸುತ್ತೇನೆ! ನನ್ನ ಶಾಂತಿಗಾಗಿ ನೀವೆಲ್ಲರೂ ನನಗೆ ನೀಡಬಹುದಾದ ಕನಿಷ್ಠ ವಿಷಯ ಇದು" ಎಂದು ನೇಹಾ ಬರೆದುಕೊಂಡಿದ್ದಾರೆ.</p><img><p>ಈ ಮೂಲಕ ಫೋಟೋಗಳು ಅಥವಾ ವೀಡಿಯೊಗಳಿಗಾಗಿ ತಮಗೆ ಕಿರುಕುಳ ನೀಡಬೇಡಿ ಮತ್ತು ಅವರ ಗೋಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಪಾಪರಾಜಿಗಳನ್ನು ವಿನಂತಿಸಿದ್ದಾರೆ. ನೇಹಾ ಅವರು ತನಗಾಗಿ ಸಮಯ ತೆಗೆದುಕೊಳ್ಳಲು ಬಯಸುತ್ತಾರೆ ಮತ್ತು ಅವರು ಯಾವಾಗ ಹಿಂತಿರುಗುತ್ತಾರೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ವಿರಾಮದ ಉದ್ದೇಶವು ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಲು ಮತ್ತು ಅವರ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ಸಹಾಯ ಮಾಡುವುದು ಎಂದು ಹೇಳಿದ್ದಾರೆ.</p>



Source link

Leave a Reply

Your email address will not be published. Required fields are marked *