ಮೈಸೂರು (ನವೆಂಬರ್ 21): ರೂಲ್ಸ್ ಅಂದ್ರೆ ರೂಲ್ಸ್ ದೇಶದ ಪ್ರತಿ ಪ್ರಜೆಗೂ ಒಂದೇ ರೂಲ್ಸ್. ಮುಖ್ಯಮಂತ್ರಿ (ಮುಖ್ಯಮಂತ್ರಿ) ಆಗ್ಲಿ ಮಿನಿಸ್ಟರ್ ಆಗಲಿ ಎಲ್ಲರಿಗೂ ಸಹ ಒಂದೇ ರೂಲ್ಸ್ ಅನ್ವಯ. ಇದನ್ನು ಏಕೆ ಹೇಳಲಾಗಿದೆ ಅಂದ್ರೆ ಮೈಸೂರಿನ ಕುವೆಂಪು ಮನೆ (ಕುವೆಂಪು ನಗರ) ನಿರ್ಮಾಣಗೊಂಡಿರುವ ಸಿದ್ದರಾಮಯ್ಯ (ಸಿದ್ದರಾಮಯ್ಯ) ಅವರ ಹೊಸ ನಿವಾಸಕ್ಕೆ ವಿದ್ಯುತ್ ಸಂಪರ್ಕಕ್ಕೆ ತೊಡಕು ಉಂಟಾಗಿದೆ. ಇದಕ್ಕೆ ಕಾರಣ ಸುಪ್ರೀಂಕೋರ್ಟಿನ ಆದೇಶ. ಹೌದು… ಹೊಸ ಮನೆಗೆ ವಿದ್ಯುತ್ ನೀರು ಸಂಪರ್ಕಕ್ಕೆ ಓಸಿ (ಶಾಧೀನಾನುಭವ ಪ್ರಮಾಣಪತ್ರ) ಕಡ್ಡಾಯವಾಗಿದೆ. ಇದು ಸುಪ್ರೀಂಕೋರ್ಟಿನ ಆದೇಶ. ಇದೀಗ ಈ ಹೊಸ ರೂಲ್ಸ್ ಸಿಎಂ ಸಿದ್ದರಾಮಯ್ಯನವರ ಹೊಸ ಮನೆಗೆ ತಟ್ಟಿದ್ದು.
ನಲ್ಲಿ ಗೃಹಪ್ರವೇಶಕ್ಕೆ ಸಿದ್ದತೆ ನಡೆದಿದ್ದು, ಈ ಸಂಬಂಧ ಎರಡು ತಿಂಗಳ ಹಿಂದೆಯೇ ಡಿಸೆಂಬರ್ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ. ಓಸಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಈ ಬಗ್ಗೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ಮೈಸೂರಿನ ಕುವೆಂಪುನಗರದ ಸಿಎಂ ಸಿದ್ದರಾಮಯ್ಯ ಹೊಸ ಮನೆ ಬಳಿಯಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.