ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ
ಬೆಂಗಳೂರು, ಜನವರಿ 09: ಇತ್ತೀಚೆಗೆ ಆನ್ಲೈನ್ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಜನ ಸಾಮಾನ್ಯರು ಇದ್ದಾರೆ ಗಣ್ಯರು, ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್ ಮತ್ತು ವಾಟ್ಯಾಪ್ ಮತ್ತು ಹ್ಯಾಕ್ ಮಾಡಿ ಹಣ ಪೀಕುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ನಡುವೆ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿಯೇ ವಂಚನೆಗೆ ಯತ್ನ ನಡೆಸಿರೋದು ಬೆಳಕಿಗೆ ಬಂದಿದೆ.
ವಾಟ್ಸಾಪ್ ನಲ್ಲಿ ಬೆಂಗಳೂರು ಕೇಂದ್ರ ಡಿಸಿಪಿಯಾಗಿರುವ ಅಕ್ಷಯ್ ಅವರ ಫೋಟೋ, ಹೆಸರು ಜಾಹೀರಾತು ವಂಚಕರು ಹಣ ಕೇಳಿದ್ದು, ಬೇರೆ ನಂಬರ್ ನಿಂದ ಅಕೌಂಟ್ ರಚಿಸಿರೋದು ಗೊತ್ತಾಗಿದೆ. ಹಣ ನೀಡುವಂತೆ ಐಪಿಎಸ್ ಅಧಿಕಾರಿ ಸಂದೇಶ ಮೆಸೇಜ್ ಮಾಡಿದ್ದು, ಸ್ನೇಹಿತರು ಡಿಸಿಪಿ ಅಕ್ಷಯ್ ಗಮನಕ್ಕೆ ತಂದಿದ್ದಾರೆ. 3-4 ಧ್ವನಿ ವಂಚಕರು ಮೆಸೇಜ್ ಕಳುಹಿಸಿದ್ದು, ವಂಚಕರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಕ್ಷಯ್ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಆನ್ಲೈನ್ ವ್ಯವಹಾರದ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳುವ ಕ್ರಮಗಳು
ವಂಚಕರ ಮೆಸೇಜ್ ನಲ್ಲಿ ಏನಿದೆ?
ತುರ್ತಾಗಿ ಒಂದು ಪ್ರಾಸ್ಪೆಕ್ಟ್ ಖಾತೆಗೆ ಹಣ ಜಮಾ ಮಾಡಬೇಕಿದ್ದು, ನನ್ನ ಆನ್ಲೈನ್ ಬ್ಯಾಂಕ್ ವರ್ಗಾವಣೆ ಸಮಸ್ಯೆ ಎದುರಾಗಿದೆ. ಜೊತೆಗೆ ಪ್ರಸ್ತುತ ನಾನು ಒಂದು ಸಭೆಯಲ್ಲಿ ಭಾಗವಹಿಸಬೇಕಿರುವ ಕಾರಣ ನೀವು ಹಣವನ್ನು ವರ್ಗಾಯಿಸಲು ಸಾಧ್ಯವೇ? ಹಾಗಿದ್ದರೆ ನಾನು ಮುಂದಿನ ವಿವರಗಳನ್ನು ನೀಡುತ್ತೇನೆ. ನೀವು ನೀಡಿದ ಹಣವನ್ನು ದಿನದ ಅಂತ್ಯದೊಳಗೆ ನಾನು ನಿಮಗೆ ಮರುಪಾವತಿಸುತ್ತೇನೆ ಎಂಬ ಸಂದೇಶವನ್ನು ವಂಚಕರು ಕಳುಹಿಸಿದ್ದಾರೆ. ವಂಚನ ಯತ್ನ ವಿಷಯವನ್ನು ವೀಕ್ಷಿಸಿದ ಅಧಿಕಾರಿಯೇ ಹಂಚಿಕೊಂಡಿದ್ದು, ವಾಟ್ಸ್ಯಾಪ್ನ ನಕಲಿನಿಂದ ಕೆಲ ನನ್ನ ಪರಿಚಿತರಿಗೆ ಹಣ ಕೇಳಿ ಸಂದೇಶ ಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.