
ಜೈಲಾಧಿಕಾರಿಗಳ ಆಕ್ಷೇಪಕ್ಕೆ ಕಾರಣಗಳೇನು? ಪವಿತ್ರಾ ಗೌಡ ಅವರಿಗೆ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಪ್ರಬಲವಾದ ಕಾರಣಗಳನ್ನು ಮುಂದಿಟ್ಟಿದ್ದಾರೆ:
ಕಾಯ್ದೆಯ ಅಡ್ಡಿ: ಕಾರಾಗೃಹ ಇಲಾಖೆ ಕಾಯ್ದೆ 13ರ ಅಡಿಯಲ್ಲಿ ವಿಚಾರಣಾಧೀನ ಕೈದಿಗಳಿಗೆ ವಿಶೇಷವಾಗಿ ಮನೆ ಊಟ ನೀಡಲು ಅವಕಾಶವಿಲ್ಲ.
ಊಟದ ಗುಣಮಟ್ಟ: ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಗಳು ಈಗಾಗಲೇ ಜೈಲಿನ ಊಟವನ್ನು ಪರಿಶೀಲಿಸಿದ್ದು, ಅದು ‘ಉತ್ತಮ ಗುಣಮಟ್ಟ’ದಿಂದ ಕೂಡಿದೆ ಎಂದು ವರದಿ ನೀಡಿವೆ.