
ಕಾರವಾರ, (ಮಾರ್ಚ್ 31): ಗಲ್ಫ್ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವವಾಗಿದೆ. ಗ್ಯಾಸ್ ಸಿಲಿಂಡರ್ (ಎಲ್ಪಿಜಿ ಗ್ಯಾಸ್ ಸಿಲಿಂಡರ್) ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಓಲೆ ಮೊರೆ ಹೋಗಿದ್ದು, ಸೌದೆಗಾಗಿ (ಮರದ) ಅರಣ್ಣದಲ್ಲಿ ಮುಗಿದಿದ್ದಾರೆ. ಹೌದು…ಉತ್ತರ ಕನ್ನಡ (ಉತ್ತರ ಕಾನಂದ) ಜಿಲ್ಲೆಯ ಮುಂಡಗೋಡಿನ ಕೆಎಫ್ಡಿಸಿ ಅರಣ್ಯ ಪ್ರದೇಶದ ಜನರು ಸೌದೆಗಾಗಿ ಮುಗಿದಿದ್ದಾರೆ.
ಪ್ರತಿ ವರ್ಷ ಅಕೇಶಿಯ ಮರಗಳ ಕಟಾವಿನ ಬಳಿಕ ಅರಣ್ಯ ಇಲಾಖೆ, ಸಣ್ಣಪುಟ್ಟ ಕಟ್ಟಿಗೆ ಬೆಂಕಿ ಹಾಕಲಾಗುತ್ತಿದೆ.ಆದ್ರೆ ಇದೀಗ ಗ್ಯಾಸ್ ಸಿಗದಿದ್ದಕ್ಕೆ ಸೌದೆಯನ್ನ ಕೊಂಡೊಯ್ಯಲು ಜನರಿಗೆ ಅನುಮತಿ ನೀಡಿದೆ. ಹೀಗಾಗಿ, ಜನರು ವಾಹನದ ಜತೆ ಅರಣ್ಯಕ್ಕೆ ಬಂದು ಕಟ್ಟಿಗೆ ತುಂಬಿಕೊಂಡು ಹೋಗಿದ್ದಾರೆ.