
<p>ಜೈಲುಪಾಲಾಗಿರುವನಟ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಈ ವೇಳೆ ದರ್ಶನ್ ನಿವಾಸದ ಬಳಿ ಅಭಿಮಾನಿಯೊಬ್ಬನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದು, ಪತ್ನಿ ವಿಜಯಲಕ್ಷ್ಮೀ ಇನ್ಸ್ಟಾಗ್ರಾಂನಲ್ಲಿ ಪತಿಗಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.</p><img><p>ಚಂದನವನದ ನಟ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟನ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ.</p><img><p>ಅಭಿಮಾನಿಗಳು ಜಮಾಯಿಸುವ ಹಿನ್ನೆಲೆ ದರ್ಶನ್ ಅವರ ಆರ್ಆರ್ ನಗರದ ನಿವಾಸದ ಬಳಿ ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಈ ಹಿಂದೆ ಅಭಿಮಾನಿಗಳ ಗಲಾಟೆಯಿಂದ ದರ್ಶನ್ ನಿವಾಸದ ನೆರೆಹೊರೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p><img><p>ಇಂದು ಬೆಳಗ್ಗೆ ದರ್ಶನ್ ನಿವಾಸದ ಬಳಿ ಬಂದ ನಟನ ಅಭಿಮಾನಿ ಮತ್ತು ಸ್ಥಳದಲ್ಲಿದ್ದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಪೊಲೀಸ್ ಅಧಿಕಾರಿ, ಅಭಿಮಾನಿಯ ಕಪಾಳಕ್ಕೆ ಏಟು ನೀಡಿದ್ದಾರೆ. ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p><img><p>ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪತಿ ಕೇಕ್ ಕಟ್ ಮಾಡುವ ಹಳೆಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ಗೆ ಪ್ರತಿದಿನ ಹುಟ್ಟುಹಬ್ಬ ಎಂದು ಬರೆದುಕೊಂಡಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದರು.</p><p><strong>ಇದನ್ನೂ ಓದಿ: </strong><strong>ಏನ್ ಗೊತ್ತಾ? I LoveYou ಅಷ್ಟೇ…; ನಟಿ ರಚಿತಾ ರಾಮ್ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!</strong></p><img><p>ಒಂದು ವೇಳೆ ದರ್ಶನ್ ಹೊರಗಡೆ ಇರುತ್ತಿದ್ರೆ ಬೆಂಗಳೂರಿನ ಆರ್ಆರ್ ನಗರದ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದರು. ಇನ್ನು ದರ್ಶನ್ ಹುಟ್ಟುಹಬ್ಬದ ಅಭಿಮಾನಿಗಳು ಸಿಡಿಪಿ ರಿಲೀಸ್ ಮಾಡಿದ್ದು, ಫ್ಯಾನ್ಸ್ಗೆ ಕೈ ಕುಲುಕುತ್ತಿರುವ ರೀತಿಯ ಫೋಟೋ ಇದೆ.</p><p><strong>ಇದನ್ನೂ ಓದಿ: </strong><strong>ನಿಮ್ಮ ಸುಖಾಗಮನ ಬಯಸುವ; ‘ಹೊಂದಿಸಿ ಬರೆಯಿರಿ’ ನಿರ್ದೇಶಕರ ಸಿನಿಮಾದಲ್ಲಿ ’ಗೋಲ್ಡನ್ ಸ್ಟಾರ್’ ಗಣೇಶ್</strong></p>
Source link
ನಟ ದರ್ಶನ್ ಬರ್ತ್ಡೇ ಆಚರಿಸಲು ಬಂದ ಅಭಿಮಾನಿಗೆ ಕಪಾಳಮೋಕ್ಷ; ಪೊಲೀಸರ ಜೊತೆ ಕಿರಿಕ್