ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ (ಆತ್ಮ) ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಜನರಿಗೆ ಗೊಂದಲ ಮೂಡಿದೆ. ಈ ಮೊದಲು ನಾಯಕಿ ಆಗಿದ್ದ ದೀಪಿಕಾ ಪಡುಕೋಣೆ ಅವರು ಚಿತ್ರತಂಡದಿಂದ ಹೊರನಡೆದರು. ಆ ಬಳಿಕ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲು. ಈಗ ‘ಸ್ಪಿರಿಟ್’ ಸಿನಿಮಾದಿಂದ ಹಿರಿಯ ನಟ ಪ್ರಕಾಶ್ ರಾಜ್ (ಪ್ರಕಾಶ್ ರಾಜ್) ಅವರು ಹೊರ ನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದಕ್ಕೆ ಈಗ ಪ್ರಕಾಶ್ ರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ವದಂತಿಯನ್ನು ಅವರು ತಳ್ಳಿಹಾಕಿದ್ದಾರೆ.
ಗಾಸಿಪ್ ಏನು? ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟ ಪ್ರಕಾಶ್ ರಾಜ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದಂತೆ. ಒಂದು ದೃಶ್ಯದ ಚಿತ್ರಗಳು ಆಗಲೇ ಅವರಿಬ್ಬರ ನಡುವೆ ವಾದ ಆಯಿತಂತೆ. ಅದರಿಂದಾಗಿ ಪ್ರಕಾಶ್ ರಾಜ್ ಅವರು ಚಿತ್ರತಂಡದಿಂದ ಹೊರಗೆ ಬರಲು ನಿರ್ಧರಿಸಿದರಂತೆ. ಈ ರೀತಿಯಾಗಿ ಗಾಸಿಪ್ ಹಬ್ಬಿದೆ.
ಆದರೆ ಲಭ್ಯ ಪ್ರಕಾಶ್ ರಾಜ್ ಅವರು ‘ಹಿಂದೂಸ್ತಾನ್ ಟೈಮ್ಸ್’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇವೆಲ್ಲವೂ ನಾನ್ಸೆನ್ಸ್ ಊಹಾಪೋಹಗಳು. ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ. ಆ ಮೂಲಕ, ತಾವು ಚಿತ್ರತಂಡದ ಭಾಗವಾಗ ಇನ್ನೂ ಅವರು ಹೇಳಿದ್ದಾರೆ. ಈ ವಿಷಯ ತಿಳಿದು ಪ್ರಕಾಶ್ ರಾಜ್ ಅವರ ಅಭಿಮಾನಿಗಳಿಗೆ ಸಮಾಧಾನ ಆಗಿದೆ.
ಎಲ್ಲಾ ವಿಷಕಾರಿಗಳಿಗೆ #ನಕಲಿ ಸುದ್ದಿ ದಂಧೆಕೋರರು…. ಆನ್ #ಆತ್ಮ ಚಿತ್ರ . ನಾವು ನನ್ನ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಿಲ್ಲ .. ಮತ್ತು ನೀವು ವಾಟ್ಸಪ್ ಫ್ಯಾಕ್ಟರಿಗಳು ಕಥೆಗಳನ್ನು ಊಹಿಸುತ್ತೀರಿ . ಬೆಳೆದು ಬಾಳು 😂😂😂😂. #ಸುಮ್ಮನೆ ಹೇಳುವುದು
— ಪ್ರಕಾಶ್ ರಾಜ್ (@prakashraaj) ಫೆಬ್ರವರಿ 9, 2026
ಪ್ರಕಾಶ್ ರಾಜ್ ಅವರು ಪ್ರತಿಭಾನ್ವಿತ ನಟ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಅವರು ನಿರರ್ಗಳವಾಗಿ ಮಾತನಾಡುತ್ತಾರೆ. ಇದರಿಂದ ಚಿತ್ರತಂಡಗಳಿಗೆ ಅನುಕೂಲವಾಗುತ್ತದೆ. ಪಾತ್ರವರ್ಗದಲ್ಲಿ ಪ್ರಕಾಶ್ ರಾಜ್ ಇದ್ದರೆ ಅಂಥ ಸಿನಿಮಾಗಳ ಮೆರುಗು ಹೆಚ್ಚುತ್ತದೆ. ವಿಲನ್ ಮತ್ತು ಪೋಷಕ ಪಾತ್ರಗಳ ಮೂಲಕ ಅವರು ಸಾಕಷ್ಟು ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ‘ಸ್ಪಿರಿಟ್’ ಸಿನಿಮಾದಲ್ಲಿ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ
‘ಎಕ್ಸ್’ (ಟ್ವಿಟರ್) ಖಾತೆಯಲ್ಲೂ ಪ್ರಕಾಶ್ ರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸ್ಪಿರಿಟ್ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ಗಮನಕ್ಕೆ.. ನಾವು ಇನ್ನೂ ನನ್ನ ಪಾತ್ರದ ಶೂಟಿಂಗ್ ಕೂಡ ಶುರುವಾಗಿಲ್ಲ. ಆದರೆ ನೀವು ವದಂತಿ ಸೃಷ್ಟಿಸುತ್ತಿದ್ದೀರಿ’ ಎಂದು ಪ್ರಕಾಶ್ ರಾಜ್ ಅವರು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.