Headlines

ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು

ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು



ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು
<p>ರಂಗಭೂಮಿ ಹಿನ್ನೆಲೆಯ ನಟ ಪ್ರಮೋದ್ ಶೆಟ್ಟಿ ಅವರು, ಸೀರಿಯಲ್ ಒಂದರ ಶೂಟಿಂಗ್ ವೇಳೆ ನಿರ್ದೇಶಕರಿಂದ ‘ನಟನೆ ಬರುವುದಿಲ್ಲ’ ಎಂದು ನೂರಾರು ಮಹಿಳೆಯರ ಮುಂದೆ ಅವಮಾನಕ್ಕೊಳಗಾಗಿದ್ದರು. &nbsp;ಪ್ರೇಯಸಿ ಸುಪ್ರೀತಾಳಿಗಾಗಿ ಗಟ್ಟಿ ಮನಸ್ಸು ಮಾಡಿ, ಅದೇ ನಿರ್ದೇಶಕರಿಂದ ಶಹಬ್ಬಾಸ್ ಗಿರಿ ಪಡೆದ ಅನುಭವ ಹಂಚಿಕೊಂಡಿದ್ದಾರೆ.</p><img><p>ಸ್ಯಾಂಡಲ್​ವುಡ್​ ನಟ ಪ್ರಮೋದ್​ ಶೆಟ್ಟಿ (Pramod Shetty) ಅವರ ನಟನೆಗೆ ಮನಸೋಲದವರು ಇಲ್ಲವೇ ಇಲ್ಲ. ರಂಗಭೂಮಿ ನಟನಾಗಿದ್ದ ಪ್ರಮೋದ್​ ಶೆಟ್ಟಿ ಅವರಿಗೆ ಅಲ್ಲಿದ್ದ ಗೌರವವೇ ಬೇರೆ. ಪ್ರಮೋದ್ ಶತವಿ, ಮಾತ್ರುಕ, ಸಾವು ಬಂತು ಸಾವು, ಮಾದರಿ ಮಾದಯ್ಯ ಮತ್ತು ಕಾಕನಕೋಟೆಯಂತಹ ಹಲವಾರು ನಾಟಕಗಳಲ್ಲಿ ನಟಿಸಿದರು , ಇದಕ್ಕಾಗಿ ಪ್ರಮೋದ್ ಕಾಕಾ ಪಾತ್ರಕ್ಕಾಗಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.</p><img><p>ಪ್ರಮೋದ್​ ಅವರು ಹಲವಾರು ಕನ್ನಡ ಸೀರಿಯಲ್​ನಲ್ಲಿ ನಟಿಸಿದ್ದು, 2010 ರಲ್ಲಿ ಜುಗಾರಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಉಳಿಯವರು ಕಂಡಂತೆ (2014) ಮತ್ತು ಕಿರಿಕ್ ಪಾರ್ಟಿ (2016) ಚಿತ್ರಗಳಲ್ಲಿನ ಪಾತ್ರಗಳಿಗೆ ಅವರು ಮನ್ನಣೆ ಪಡೆದರು. ಆದರೆ ಇದೀಗ ನಟನೆ ಬರುವುದಿಲ್ಲ ಎಂದು ನಿರ್ದೇಶಕರೊಬ್ಬರು ಮಹಿಳೆಯರ ಎದುರು ಮಾಡಿರುವ ಅವಮಾನದ ಬಗ್ಗೆ ಮಾತನಾಡಿದ್ದಾರೆ ನಟ.</p><img><p>ದೂರದರ್ಶನ ಚಂದನ ವಾಹಿನಿಯಲ್ಲಿ, ಅತಿಥಿಯಾಗಿ ಹೋಗಿದ್ದ ಪ್ರಮೋದ್​ ಶೆಟ್ಟಿ ಅವರು ತಮ್ಮ ಬದುಕಿನ ಹಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ರಂಗಭೂಮಿ ನಟನಾಗಿದ್ದ ವೇಳೆಯೇ ಅವರು, ಸುಪ್ರೀತಾ ಶೆಟ್ಟಿ ಅವರನ್ನು ಲವ್​ ಮಾಡಿದರು. ಆದರೆ ರಂಗಭೂಮಿ ಕಲಾವಿದನಿಗೆ ಆದಾಯ ಇರುವುದಿಲ್ಲವಲ್ಲ. ಅದಕ್ಕಾಗಿಯೇ ಸುಪ್ರೀತಾ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ಕೊನೇ ಪಕ್ಷ ಸೀರಿಯಲ್​ನಲ್ಲಿ ಆದರೂ ಆ್ಯಕ್ಟ್​ ಮಾಡು, ನಾನು ಏನೋ ಒಂದು ಮನೆಯಲ್ಲಿ ಹೇಳಬಹುದು ಎಂದು ಸುಪ್ರೀತಾ ಹೇಳಿದ್ದರಂತೆ.</p><img><p>ಇದೇ ಕಾರಣಕ್ಕೆ ಸೀರಿಯಲ್​ ಒಂದರ ನಿರ್ದೇಶಕರನ್ನು ಭೇಟಿಯಾಗಿದ್ದರು ಪ್ರಮೋದ್​, ಅಲ್ಲಿ ಡೈಲಾಗ್​ಗಳನ್ನೆಲ್ಲಾ ಹೇಳಿಸಿ ಸೆಲೆಕ್ಟ್​ ಮಾಡಲಾಗಿತ್ತು. ಆರಂಭದಲ್ಲಿಯೇ ಗಾರ್ಮೆಂಟ್ಸ್​ನಲ್ಲಿ ಶೂಟಿಂಗ್​. ಅಲ್ಲಿರುವ ಒಬ್ಬಾಕೆಯನ್ನು ಪ್ರಪೋಸ್​ ಮಾಡುವ ಸೀನ್​ ಅದಾಗಿತ್ತು. ಅಲ್ಲಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುವ ನೂರಾರು ಮಂದಿ ಇದ್ದರು. ಆ್ಯಕ್ಷನ್​ ಹೇಳಿದಾಗ ಪ್ರಮೋದ್​ ಅವರು ಪ್ರಪೋಸ್​ ಮಾಡಲು ಹೇಳಿಕೊಟ್ಟ ಡೈಲಾಗ್​ ಹೇಳಿದರಂತೆ. ಆದರೆ ಇದು ನಾಟಕದ ಸ್ಟೈಲ್ ಎನ್ನುವ ಕಾರಣಕ್ಕೆ ನಿರ್ದೇಶಕರು ಸಿಕ್ಕಾಪಟ್ಟೆ ಅವಮಾನ ಮಾಡಿದರು ಎಂದು ಪ್ರಮೋದ್​ ಹೇಳಿದ್ದಾರೆ.</p><img><p>ಯಾರ್ಯಾರನ್ನೋ ನಾಟಕದವರನ್ನು ಕರ್ಕೊಂಡು ಬರ್ತಾರೆ. ಕಳಿಸಿ ಅವನನ್ನು ಆಚೆ ಎಂದುಬಿಟ್ಟರು. ಅಳು ತಡೆದುಕೊಳ್ಳಲು ಆಗಲಿಲ್ಲ. ಅಲ್ಲಿ ಎಲ್ಲ ಹೆಂಗಸರ ಎದುರು ಮರ್ಯಾದೆ ಹೋಗಿದ್ದು ಬೇರೆ, ಅವರ ಮುಂದೆ ಅಳಲು ಆಗುತ್ತಿರಲಿಲ್ಲ. ಕೊನೆಗೆ ವಾಷ್​ರೂಮ್​ಗೆ ಹೋಗಿ ಸಿಕ್ಕಾಪಟ್ಟೆ ಅತ್ತುಬಿಟ್ಟೆ. ನಿನಗೆ ಇದೆಲ್ಲಾ ಅಲ್ಲ, ವಾಪಸ್​ ಹೋಗು ಎಂದು ನನ್ನ ಮನಸ್ಸು ಹೇಳಿತು ಎಂದು ಅಂದು ನಡೆದ ಘಟನೆ ನೆನಪಿಸಿಕೊಂಡಿದ್ದಾರೆ ಶೆಟ್ರು.</p><img><p>ಕೊನೆಗೆ, ಕಣ್ಣೆದುರು ಸುಪ್ರೀತಾ ಬಂದಳು. ಮದುವೆಯಾಗಬೇಕಿತ್ತಲ್ಲ, ಆದ್ದರಿಂದ ಇದನ್ನು ಸಹಿಸಿಕೊಳ್ಳಬೇಕಿತ್ತು. ಗಟ್ಟಿ ಮನಸ್ಸು ಮಾಡಿದೆ. ಯಾಕೆ ಆ್ಯಕ್ಟಿಂಗ್​ ಬರಲ್ಲ, ಬಂದೇ ಬರುತ್ತದೆ ಎಂದು ಹೇಳಿ ಅದೇ ಧೈರ್ಯದಿಂದ ಹೋಗಿ ಕೆಲವು ಟೇಕ್​ಗಳನ್ನು ಪಡೆದು ನಿರ್ದೇಶಕರೂ ಬೆರಗಾಗುವ ಹಾಗೆ ಆ್ಯಕ್ಟಿಂಗ್​ ಮಾಡಿದೆ. ಕೊನೆಗೆ ನಿರ್ದೇಶಕರಿಗೆ ಖುಷಿಯಾಯಿತು. ಭೇಷ್​ ಎಂದರು. ಅವರ ಬಾಯಿಯಿಂದ ಅಷ್ಟು ಕೇಳುತ್ತಲೇ ಆ ಸೀರಿಯಲ್​ಗೆ ಗುಡ್​ಬೈ ಹೇಳಿ ಬಂದೆ ಎಂದಿದ್ದಾರೆ ಪ್ರಮೋದ್​ ಶೆಟ್ಟಿ. ಅಂದಹಾಗೆ ಸುಪ್ರೀತಾ ಜೊತೆ 2010ರಲ್ಲಿ ಪ್ರಮೋದ್​ ಅವರ ಮದುವೆಯಾಗಿದ್ದು, ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.</p>



Source link

Leave a Reply

Your email address will not be published. Required fields are marked *