
ಸ್ಯಾಂಡಲ್ವುಡ್ನ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ಅವರು ಹಾಸನದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ನ್ನು ಭೂಮಾಲೀಕ ದೇವರಾಜು ತೆರವುಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬಂದ ನಂತರ, ದೇವರಾಜು ಅವರು ಈ ಕ್ರಮ ಕೈಗೊಂಡಿದ್ದಾರೆ.<img><p>ಸ್ಯಾಂಡಲ್ವುಡ್ನ ಕೊತ್ತಲವಾಡಿ ಸಿನಿಮಾದ ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ಅಕ್ರಮವಾಗಿ ಹಾಕಿದ್ದ ಕಾಂಪೌಂಡ್ನ್ನು ಭೂಮಾಲೀಕ ದೇವರಾಜು ಎಂಬವರು ತೆರವುಗೊಳಿಸಿದ್ದಾರೆ. ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ತಮ್ಮ ನಿವಾಸದ ಪಕ್ಕದಲ್ಲಿದ್ದ ಜಾಗ ಅತಿಕ್ರಮಣ ಮಾಡಿರುವ ಆರೋಪ ಪುಷ್ಪಾ ಅರುಣ್ಕುಮಾರ್ ವಿರುದ್ಧ ಕೇಳಿ ಬಂದಿತ್ತು.</p><img><p>ಪುಷ್ಪಾ ಅರುಣ್ಕುಮಾರ್ ಅವರು ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವಾಸ ಹೊಂದಿದ್ದಾರೆ. ಮನೆಯ ಪಕ್ಕದ ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಪುಷ್ಪಾ ಅರುಣ್ಕುಮಾರ್ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದರು ಎಂಬ ಆರೋಪಿಸಲಾಗಿತ್ತು. ಲಕ್ಷ್ಮಮ್ಮ ಅವರು ಈ ಜಾಗವನ್ನು ಜಿಪಿಎ ಓಲ್ಡರ್ ಆಗಿ ದೇವರಾಜು ಅವರಿಗೆ ಬರೆದುಕೊಟ್ಟಿದ್ದರು.</p><img><p>ಪುಷ್ಪಾ ಅರುಣ್ಕುಮಾರ್ ಕಾಂಪೌಂಡ್ ಹಾಕಿದ ದಿನವೇ ದೇವರಾಜು ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಮಾರು ಒಂದೂವರೆ ಸಾವಿರ ಅಡಿ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ ಎಂದು ದೇವರಾಜು ಆರೋಪಿಸಿದ್ದರು.</p><img><p>ದೂರು ದಾಖಲಿಸಿದ ಬಳಿಕ ದೇವರಾಜು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಯನ್ನು ಪುಪ್ಪ ಅವರು ಒದಗಿಸಿಲ್ಲವಾದ್ದರಿಂದ ನಮ್ಮ ಪರ ತೀರ್ಪು ಬಂದಿದೆ. ಹಾಗಾಗಿ ಇಂದು ನಾವು ನ್ಯಾಯಾಲಯದ ಅನುಮತಿಯಂತೆ ಅಕ್ರಮವಾಗಿ ಕಟ್ಟಿದ್ದ ಕಾಂಪೌಂಡ್ ತೆರವುಗೊಳಿಸಿದ್ದೇವೆ ಎಂದು ದೇವರಾಜು ಹೇಳಿದ್ದಾರೆ.</p><p><strong>ಇದನ್ನೂ ಓದಿ: </strong><strong>ನಟ ಯಶ್ ಮನೆಯ ಸಿನಿಮಾ ಅಂದ್ರೆ ಇಡೀ ದೇಶ ನೋಡತ್ತೆ: ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪ</strong></p><img><p>ಪುಷ್ಪಾ ಅರುಣ್ ಕುಮಾರ್ ಸ್ಯಾಂಡಲ್ವುಡ್ ನಿರ್ಮಾಪಕಿಯಾಗಿದ್ದು, 2025ರಲ್ಲಿ ಬಿಡುಗಡೆಯಾದ ಕೊತ್ತಲವಾಡಿ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಮತ್ತು ಕಾವ್ಯಾ ಶೈವ ನಟಿಸಿದ್ದರು. ಚಿತ್ರ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಪುಷ್ಪಾ ಅವರ ಪುತ್ರ ಯಶ್ ಸ್ಟಾರ್ ನಟರಾಗಿದ್ದಾರೆ. ಸೊಸೆ ರಾಧಿಕಾ ಪಂಡಿತ್ ಸಹ ಚಂದನವನದ ನಾಯಕಿಯಾಗಿ ನಟಿಸಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.</p><p><strong>ಇದನ್ನೂ ಓದಿ: </strong><strong>ಮತ್ತೆ ಅದೇ ನಿರ್ದೇಶಕರ ಜೊತೆ ಮತ್ತೊಂದು ಸಿನಿಮಾ ಘೊಷಿಸಿದ ಪುಷ್ಪಾ ಅರುಣ್ ಕುಮಾರ್!</strong></p>
Source link
ಸ್ಯಾಂಡಲ್ವುಡ್ ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು